ಕೇರಳ ರಾಜ್ಯಪಾಲರ ಕಾನೂನು ಸಲಹೆಗಾರ, ವಿವಿ ಕುಲಪತಿಗಳ ಸ್ಥಾಯಿ ಸಲಹೆಗಾರ್ತಿ ರಾಜೀನಾಮೆ
ತಿರುವನಂತಪುರ: ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ Kerala Governor Arif Mohammad Khan' ಅವರ ಕಾನೂನು ಸಲಹೆಗಾರ ಜಾಜು ಬಾಬು ಹಾಗೂ ವಿಶ್ವವಿದ್ಯಾನಿಲಯಗಳ ಕುಲಪತಿಗಳ ಸ್ಥಾಯಿ ಸಲಹೆಗಾರ್ತಿ ಎಂ.ಯು.ವಿಜಯಲಕ್ಷ್ಮಿ ಅವರು ಮಂಗಳವಾರ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜೀನಾಮೆ ಪತ್ರದಲ್ಲಿ ಅವರಿಬ್ಬರೂ ಏಕೆ ಹುದ್ದೆ ತ್ಯಜಿಸುತ್ತಿದ್ದೇವೆಂದು ನಿರ್ದಿಷ್ಟಪಡಿಸಲಿಲ್ಲ, ಆದರೆ "ನಿಮಗೂ ತಿಳಿದಿರುವ ಕಾರಣಗಳಿಗಾಗಿ" ಹೀಗೆ ಮಾಡಿದ್ದೇವೆ ಎಂದು ಬರೆದಿದ್ದಾರೆ.
ಶೋಕಾಸ್ ನೋಟಿಸ್ ಪ್ರಶ್ನಿಸಿ ಉಪಕುಲಪತಿಗಳು ಸಲ್ಲಿಸಿರುವ ರಿಟ್ ಅರ್ಜಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ನಿರ್ಧಾರ ಕೈಗೊಳ್ಳುವವರೆಗೆ ಕುಲಪತಿಗಳ ಅಂತಿಮ ಆದೇಶವನ್ನು ಹೊರಡಿಸಬಾರದು ಎಂದು ಕೇರಳ ಹೈಕೋರ್ಟ್ ಈ ಹಿಂದೆ ಹೇಳಿತ್ತು.
ಕೇರಳ ರಾಜ್ಯಪಾಲ ಆರಿಫ್ ಖಾನ್ ನೀಡಿದ ಶೋಕಾಸ್ ನೋಟಿಸ್ ವಿರುದ್ಧ ಏಳು ಉಪ ಕುಲಪತಿಗಳು ಕೇರಳ ಹೈಕೋರ್ಟ್ನ ಮೊರೆ ಹೋಗಿದ್ದರು. ನೋಟಿಸ್ ರದ್ದುಗೊಳಿಸುವಂತೆ ಕೋರಿದ್ದು, ಇದು ಕಾನೂನು ಬಾಹಿರ ಎಂದು ಪ್ರತಿಪಾದಿಸಿದ್ದರು.
ರಾಜ್ಯಪಾಲರು 11 ವಿವಿಗಳ ವಿಸಿಗಳಿಗೆ ರಾಜೀನಾಮೆ ನೀಡುವಂತೆ ತಿಳಿಸಿದ ನಂತರ ನಿಮ್ಮನ್ನು ಏಕೆ ತೆಗೆದುಹಾಕಬಾರದು ಎಂದು ವಿವರಿಸುವಂತೆ ಕೇಳಿದ್ದರು.