ಕೇರಳ: ಕೊಲೆ ಪ್ರಕರಣದಲ್ಲಿ 11 ಆರೆಸ್ಸೆಸ್ ಕಾರ್ಯಕರ್ತರು ದೋಷಿ, ನ.14ಕ್ಕೆ ಶಿಕ್ಷೆ ಪ್ರಕಟ
![ಕೇರಳ: ಕೊಲೆ ಪ್ರಕರಣದಲ್ಲಿ 11 ಆರೆಸ್ಸೆಸ್ ಕಾರ್ಯಕರ್ತರು ದೋಷಿ, ನ.14ಕ್ಕೆ ಶಿಕ್ಷೆ ಪ್ರಕಟ ಕೇರಳ: ಕೊಲೆ ಪ್ರಕರಣದಲ್ಲಿ 11 ಆರೆಸ್ಸೆಸ್ ಕಾರ್ಯಕರ್ತರು ದೋಷಿ, ನ.14ಕ್ಕೆ ಶಿಕ್ಷೆ ಪ್ರಕಟ](https://www.varthabharati.in/sites/default/files/images/articles/2022/11/12/356121-1668240142.jpg)
ತಿರುವನಂತಪುರ: 2013ರಲ್ಲಿ ನಡೆದಿದ್ದ ಅನವೂರ್ ನಾರಾಯಣನ್ ನಾಯರ್ ಹತ್ಯೆ ಪ್ರಕರಣದಲ್ಲಿ 11 ಮಂದಿ ಆರೆಸ್ಸೆಸ್ ಕಾರ್ಯಕರ್ತರನ್ನು ಇಲ್ಲಿನ ಸ್ಥಳೀಯ ನ್ಯಾಯಾಲಯ ಶುಕ್ರವಾರ ದೋಷಿ ಎಂದು ತೀರ್ಪು ನೀಡಿದೆ.
ನೆಯ್ಯಟ್ಟಿಂಕರ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಕವಿತಾ ಗಂಗಾಧರನ್ ಅವರು ಪ್ರಕರಣದಲ್ಲಿ ಎಲ್ಲಾ 11 ಮಂದಿಯನ್ನು ದೋಷಿಗಳೆಂದು ಘೋಷಿಸಿದರು. ನವೆಂಬರ್ 14 ರಂದು ಶಿಕ್ಷೆಯನ್ನು ಪ್ರಕಟಿಸಲಾಗುವುದು.
ನವೆಂಬರ್ 5, 2013 ರಂದು ಸಿಪಿಎಂ ನ ಯುವ ಘಟಕವಾದ ಎಸ್ಎಫ್ಐನ ಆಗಿನ ಪ್ರದೇಶ ಕಾರ್ಯದರ್ಶಿಯಾಗಿದ್ದ ನಾಯರ್ ಅವರ ಮಗ ಶಿವಪ್ರಸಾದ್ ಮೇಲೆ ದಾಳಿ ನಡೆಸಲು ಅವರ ಮನೆಗೆ ನುಗ್ಗಿದ್ದ ಆರೆಸ್ಸೆಸ್ ಕಾರ್ಯಕರ್ತರು ನಾಯರ್ ಅವರನ್ನು ಕಡಿದು ಕೊಂದಿದ್ದರು.
Next Story