ಎಂಸಿಡಿ ಚುನಾವಣೆ: ಟಿಕೆಟ್ ನಿರಾಕರಿಸಿದ್ದಕ್ಕೆ ಟವರ್ ಹತ್ತಿ ಆತ್ಮಹತ್ಯೆ ಬೆದರಿಕೆ ಹಾಕಿದ ಎಎಪಿ ಮಾಜಿ ಕೌನ್ಸಿಲರ್
![ಎಂಸಿಡಿ ಚುನಾವಣೆ: ಟಿಕೆಟ್ ನಿರಾಕರಿಸಿದ್ದಕ್ಕೆ ಟವರ್ ಹತ್ತಿ ಆತ್ಮಹತ್ಯೆ ಬೆದರಿಕೆ ಹಾಕಿದ ಎಎಪಿ ಮಾಜಿ ಕೌನ್ಸಿಲರ್ ಎಂಸಿಡಿ ಚುನಾವಣೆ: ಟಿಕೆಟ್ ನಿರಾಕರಿಸಿದ್ದಕ್ಕೆ ಟವರ್ ಹತ್ತಿ ಆತ್ಮಹತ್ಯೆ ಬೆದರಿಕೆ ಹಾಕಿದ ಎಎಪಿ ಮಾಜಿ ಕೌನ್ಸಿಲರ್](https://www.varthabharati.in/sites/default/files/images/articles/2022/11/13/356224-1668331733.jpg)
ಹೊಸದಿಲ್ಲಿ: ಆಮ್ ಆದ್ಮಿ ಪಕ್ಷದ ಮಾಜಿ ಕೌನ್ಸಿಲರ್ ಹಸೀಬ್-ಉಲ್-ಹಸನ್ ರವಿವಾರ ದಿಲ್ಲಿಯ ಶಾಸ್ತ್ರಿ ಪಾರ್ಕ್ ಮೆಟ್ರೋ ನಿಲ್ದಾಣದ ಮುಂಭಾಗದಲ್ಲಿರುವ ಹೈಟೆನ್ಷನ್ ವೈರ್ ಟವರ್ ಅನ್ನು ಹತ್ತಿ ಪಕ್ಷದ ತಪ್ಪು ನೀತಿಗಳ ವಿರುದ್ಧ ಪ್ರತಿಭಟಿಸಿದರು.
ಮುಂಬರುವ ದಿಲ್ಲಿ ಮಹಾನಗರ ಪಾಲಿಕೆ(ಎಂಸಿಡಿ) ಚುನಾವಣೆಯಲ್ಲಿ ಸ್ಪರ್ಧಿಸಲು ಹಸನ್ ಗೆ ಟಿಕೆಟ್ ನೀಡಲಿಲ್ಲ ಎಂದು ಆರೋಪಿಸಲಾಗಿದ್ದು ಈ ಹಿನ್ನೆಲೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಹಾಗೂ ಟವರ್ ಏರಿದ್ದಾರೆ.
ಎಎಪಿ ನಾಮನಿರ್ದೇಶಿತ ಮಾಜಿ ಕಾರ್ಪೊರೇಟರ್ ಹಸೀಬ್ ಉಲ್ ಹಸನ್ ಇನ್ನೂ ಟವರ್ನಲ್ಲಿ ದ್ದಾರೆ ಎಂದು ಹೇಳಲಾಗಿದೆ.
ದಿಲ್ಲಿ ಎಂಸಿಡಿ ಚುನಾವಣೆಗೆ ಎಎಪಿ ತನ್ನ 134 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. 134 ರ ಪಟ್ಟಿಯಲ್ಲಿ 70 ಮಹಿಳೆಯರಿಗೆ ಟಿಕೆಟ್ ನೀಡಲಾಗಿದ್ದು, ಮಾಜಿ ಶಾಸಕ ವಿಜೇಂದರ್ ಗರ್ಗ್ ಅವರನ್ನು ಎಂಸಿಡಿ ಚುನಾವಣೆಯಲ್ಲಿ ನರೈನಾದಿಂದ ಎಎಪಿ ಕಣಕ್ಕಿಳಿಸಿದೆ.
Next Story