ಜನತೆ ಬಿಜೆಪಿಯನ್ನು ಒದ್ದೋಡಿಸುವ ಸಮಯ ಸಮೀಪದಲ್ಲಿದೆ: ಕಾಂಗ್ರೆಸ್ ಆಕ್ರೋಶ
ಬೆಂಗಳೂರು, ನ. 13: ‘ಟ್ರಬಲ್ ಎಂಜಿನ್ ಸರಕಾರದ ಆದ್ಯತೆ ರಸ್ತೆ ಗುಂಡಿ ಮುಚ್ಚುವುದಲ್ಲ, ತಮ್ಮ ವೈಫಲ್ಯ ಮುಚ್ಚಿಕೊಳ್ಳುವುದು, ಶೇ.40ರಷ್ಟು ಲೂಟಿ ಹಣ ಬಚ್ಚಿಕೊಳ್ಳುವುದು! ಜನ ಬಿದ್ದು ಸಾಯುತ್ತಿದ್ದರೂ ಎಚ್ಚರಾಗದ ಭ್ರಷ್ಟ ಸರ್ಕಾರದ ದುರಾಡಳಿತಕ್ಕೆ ಬೇಸತ್ತ ಜನ ತಮ್ಮದೇ ಮಾದರಿಯಲ್ಲಿ ಪ್ರತಿಭಟನೆಗೆ ಇಳಿದಿದ್ದಾರೆ. ಜನತೆ ಬಿಜೆಪಿಯನ್ನು ಒದ್ದೋಡಿಸುವ ಸಮಯ ಸಮೀಪದಲ್ಲಿದೆ’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ರವಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಬಿಜೆಪಿ ಆಡಳಿತದಲ್ಲಿ ಪೊಲೀಸ್ ಇಲಾಖೆಯ ಸಾಮರ್ಥ್ಯ ಕುಸಿದಿದೆ, ದೌರ್ಜನ್ಯ ಮಿತಿ ಮೀರಿದೆ. ಬೆಳಗಾವಿಯಲ್ಲಿ ಪೊಲೀಸ್ ವಶದಲ್ಲಿ ಸಾವಿಗೀಡಾದ ಪ್ರಕರಣದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಉತ್ತರಿಸಬೇಕು. ಪೊಲೀಸರ ದೌರ್ಜನ್ಯಕ್ಕೆ ಕಡಿವಾಣ ಹಾಕುತ್ತಿಲ್ಲವೇಕೆ? ಆರೋಪಿಗೆ ಅನಾರೋಗ್ಯವೇ ಆಗಿದ್ದರೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿಲ್ಲವೇಕೆ?’ ಎಂದು ಪ್ರಶ್ನಿಸಿದೆ.
ಇದನ್ನೂ ಓದಿ: ಬೆಳಗಾವಿ: ಪೊಲೀಸರ ವಶದಲ್ಲಿದ್ದ ಆರೋಪಿ ಸಾವು
#TroubleEngineSarkara ದ ಆದ್ಯತೆ
— Karnataka Congress (@INCKarnataka) November 13, 2022
ರಸ್ತೆ ಗುಂಡಿ ಮುಚ್ಚುವುದಲ್ಲ,
ತಮ್ಮ ವೈಫಲ್ಯ ಮುಚ್ಚಿಕೊಳ್ಳುವುದು,
40% ಲೂಟಿ ಹಣ ಬಚ್ಚಿಕೊಳ್ಳುವುದು!
ಜನ ಬಿದ್ದು ಸಾಯುತ್ತಿದ್ದರೂ ಎಚ್ಚರಾಗದ ಭ್ರಷ್ಟ ಸರ್ಕಾರದ ದುರಾಡಳಿತಕ್ಕೆ ಬೇಸತ್ತ ಜನ ತಮ್ಮದೇ ಮಾದರಿಯಲ್ಲಿ ಪ್ರತಿಭಟನೆಗೆ ಇಳಿದಿದ್ದಾರೆ.
ಜನತೆ ಬಿಜೆಪಿಯನ್ನು ಒದ್ದೋಡಿಸುವ ಸಮಯ ಸಮೀಪದಲ್ಲಿದೆ. pic.twitter.com/pprvEdyclR