ದ.ಕ.ಜಿಲ್ಲಾ ಕಸಾಪದಿಂದ ಕನಕಜಯಂತಿ

ಮಂಗಳೂರು : ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬಂಟ್ವಾಳದ ಕನ್ನಡ ಭವನದಲ್ಲಿ ಶುಕ್ರವಾರ ಕನಕದಾಸ ಜಯಂತಿಯನ್ನು ಆಚರಿಸಲಾಯಿತು.
ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರದ ಸಂಯೋಜಕ ಡಾ.ಧನಂಜಯ ಕುಂಬ್ಳೆ ಉಪನ್ಯಾಸ ನೀಡಿದರು.
ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಹಿತ್ಯ ಪರಿಷತ್ತಿನ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಾ.ಮಾಧವ ಮೂಡುಕೊಣಾಜೆ,ಗೌರವ ಕೋಶಾಧ್ಯಕ್ಷ ಐತಪ್ಪನಾಯ್ಕ್, ಗೌರವ ಕಾರ್ಯದರ್ಶಿ ಎಚ್. ವಿನಯ ಆಚಾರ್, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಾಳಾದ ಕೆ.ಸೇಸಪ್ಪ ರೈ ಕಡಬ, ಚಂದ್ರಶೇಖರ ಪೇರಾಲು ಸುಳ್ಯ, ಡಾ.ಡಿ. ಯದುಪತಿ ಗೌಡ ಬೆಳ್ತಂಗಡಿ, ಉಮೇಶ ನಾಯಕ್ ಪುತ್ತೂರು, ವಿಶ್ವನಾಥ ಬಂಟ್ವಾಳ, ಡಾ.ಮಂಜುನಾಥ ಎಸ್. ಮಂಗಳೂರು, ವೇಣುಗೋಪಾಲ ಶೆಟ್ಟಿ ಮೂಡಬಿದಿರೆ, ಮೋಹನದಾಸ ಸುರತ್ಕಲ್, ಪೂವಪ್ಪ ನೇರಳಕಟ್ಟೆ, ರಾಮಚಂದ್ರ ಪಳ್ಳತ್ತಡ್ಕ, ತೇಜಸ್ವಿ ಅಂಬೆಕಲ್ಲು, ಸುಂದರ ನಾಯ್ಕ್ ಪುತ್ತೂರು ಉಪಸ್ಥಿತರಿದ್ದರು.
ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರಾಜೇಶ್ವರಿ ಎಂ. ಕಾರ್ಯಕ್ರಮ ನಿರೂಪಿಸಿದರು.