Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಪುಟಿನ್ ವಿರುದ್ಧ ದಂಗೆಗೆ ತೆರೆಮರೆಯಲ್ಲಿ...

ಪುಟಿನ್ ವಿರುದ್ಧ ದಂಗೆಗೆ ತೆರೆಮರೆಯಲ್ಲಿ ಸಿದ್ಧತೆ?: ರಶ್ಯ ರಾಜಕೀಯ ತಜ್ಞರ ಹೇಳಿಕೆ

13 Nov 2022 9:50 PM IST
share
ಪುಟಿನ್ ವಿರುದ್ಧ ದಂಗೆಗೆ ತೆರೆಮರೆಯಲ್ಲಿ ಸಿದ್ಧತೆ?:  ರಶ್ಯ ರಾಜಕೀಯ ತಜ್ಞರ ಹೇಳಿಕೆ

ಮಾಸ್ಕೊ, ನ.13: ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಶ್ಯಕ್ಕೆ ನಿರೀಕ್ಷಿತ ಮುನ್ನಡೆ ಸಾಧ್ಯವಾಗದಿರುವುದರಿಂದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ತೀವ್ರ ಅಸಮಾಧಾನಗೊಂಡಿರುವ ಉನ್ನತ ಅಧಿಕಾರಿಗಳು ಅಧ್ಯಕ್ಷರ ಆದೇಶ ಪಾಲನೆಯಲ್ಲಿ ಉದಾಸೀನ ತೋರುತ್ತಿದ್ದಾರೆ. ರಶ್ಯದಲ್ಲಿ ಪುಟಿನ್ ವಿರುದ್ಧದ ದಂಗೆಗೆ ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ ಎಂದು ರಶ್ಯದ ಪ್ರಮುಖ ರಾಜಕೀಯ ವಿಶ್ಲೇಷಕ ಕಿರಿಲ್ ರೊಗೋವ್‌ರನ್ನು ಉಲ್ಲೇಖಿಸಿ 'ದಿ ಮಿರರ್' ವರದಿ ಮಾಡಿದೆ.

ನಿರ್ಣಯ ಮಾಡುವಲ್ಲಿ, ನಿರ್ಧಾರ ಜಾರಿಯಲ್ಲಿ ರಶ್ಯ ಅಧ್ಯಕ್ಷರ ಕೈಕಟ್ಟಿದಂತಾಗಿದೆ. ಅಧಿಕಾರಿಗಳು ಅವರ ವಿರುದ್ಧ ಷಡ್ಯಂತ್ರ ನಡೆಸುತ್ತಿರುವ ಲಕ್ಷಣ ತೋರುತ್ತಿದೆ. ಪುಟಿನ್ ಅವರ ಪ್ರಬಲ ಭದ್ರತಾ ಪಡೆ ಅವರ ರಕ್ಷಣೆಗೆ ಇರುವುದರಿಂದ, ಈ ಹಿಂದಿನ ಕಾಲದಲ್ಲಿ ನಡೆಯುತ್ತಿರುವಂತೆ ಅರಮನೆಯಲ್ಲಿ ದಂಗೆ ನಡೆಯದಿದ್ದರೂ ಅಂತಿಮವಾಗಿ ಪುಟಿನ್ ವಿರುದ್ಧದ ನಡೆ ಪ್ರಬಲವಾಗುವ ಸಾಧ್ಯತೆಯಿದೆ. ಇತ್ತೀಚೆಗೆ ಉಕ್ರೇನ್‌ನಲ್ಲಿ, ಅದರಲ್ಲೂ ವಿಶೇಷವಾಗಿ ಖೆರ್ಸಾನ್‌ನಲ್ಲಿ ರಶ್ಯಕ್ಕೆ ಆದ ಹಿನ್ನಡೆಯಿಂದ ಪುಟಿನ್ ಅವರ ಅಧಿಕಾರಕ್ಕೆ ಬೆದರಿಕೆಯುಂಟಾಗಿದೆ ಎಂದು ಕಿರಿಲ್ ಹೇಳಿದ್ದಾರೆ.

ತೆರೆಮರೆಯಲ್ಲಿ ಪಿತೂರಿ ನಡೆಯುತ್ತಿರಬಹುದು. ನಿರ್ಧಾರಗಳ ನಾಶವು ಇದರ ಒಂದು ಭಾಗವಾಗಿರಬಹುದು. ನಿರ್ಧಾರಗಳನ್ನು ಕಾರ್ಯಗತಗೊಳಿಸಲು ನಿರಾಕರಣೆ ಹೆಚ್ಚಿನ ಅಪಾಯಗಳನ್ನು ಸೂಚಿಸುವುದಿಲ್ಲ. ಆದರೆ ಇದು ಪುಟಿನ್ ಅವರ ಆಡಳಿತವನ್ನು ದುರ್ಬಲಗೊಳಿಸುವಲ್ಲಿ ಪರಿಣಾಮಕಾರಿಯಾಗಿದೆ. ಅಸಮಾಧಾನವನ್ನು ವ್ಯಕ್ತಪಡಿಸಲು ಗಣ್ಯರ ಒಂದು ಗುಂಪು ಧೈರ್ಯಮಾಡಿದರೆ, ಆಗ ಆ ನಿರ್ಧಾರ ಒಂದು ಪಿತೂರಿಯಾಗಿ ರೂಪುಗೊಳ್ಳಬಹುದು. ಇದು ಗುಪ್ತ ರೀತಿಯಲ್ಲಿ ನಡೆಯುತ್ತದೆ.

ಈ ಹಿಂದೆ ಇನ್‌ಸ್ಟಿಟ್ಯೂಟ್ ಫಾರ್ ಇಕನಾಮಿಕ್ ಪಾಲಿಸಿ, ಹಾಗೂ ರಶ್ಯನ್ ಪ್ರೆಸಿಡೆನ್ಶಿಯಲ್ ಅಕಾಡೆಮಿ ಆಫ್ ನ್ಯಾಷನಲ್ ಇಕಾನಮಿ ಆ್ಯಂಡ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಪ್ರಮುಖ ಸಂಶೋಧಕರಾಗಿದ್ದ ಕಿರಿಲ್ ಪ್ರಸ್ತುತ ಇಂಡೆಮ್ ಪ್ರತಿಷ್ಟಾನದಲ್ಲಿ ಹಿರಿಯ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಧ್ಯಕ್ಷರ ಕಚೇರಿಗೆ ತೆರಳಿ ಅಧ್ಯಕ್ಷರ ಭದ್ರತಾ ಪಡೆಯನ್ನು ಹೊಡೆದುರುಳಿಸುವಷ್ಟು ಬಲಶಾಲಿಯಾಗುವ ಅಗತ್ಯವಿಲ್ಲ. ಅಧ್ಯಕ್ಷರ ಭದ್ರತಾ ಪಡೆ ನಿಮ್ಮನ್ನು ಬಂಧಿಸಲು ಅವಕಾಶ ನೀಡದಷ್ಟು ಬಲವಿದ್ದರೆ ಸಾಕಾಗುತ್ತದೆ. ಇದನ್ನು ಮಾಡಬಹುದು ಎಂದು ಇತರ ಎಲ್ಲರೂ ಭಾವಿಸುತ್ತಾರೆ ಮತ್ತು ಅಹಿತಕರ ಸಂಗತಿಗಳು ಸಂಭವಿಸಲು ಆರಂಭವಾಗುತ್ತದೆ ಎಂದು ಕಿರಿಲ್ ರೊಗೊವ್ ಹೇಳಿದ್ದಾರೆ.

ಪುಟಿನ್ ಪದಚ್ಯುತಿಗೆ ಕರೆ

ಈ ಮಧ್ಯೆ, ಪುಟಿನ್ ಅವರ ಮೆದುಳು ಎಂದೇ ಹೆಸರಾಗಿರುವ, ರಶ್ಯದ ಅತ್ಯಂತ ಪ್ರಭಾವೀ ವ್ಯಕ್ತಿ ಎನಿಸಿಕೊಂಡಿರುವ ಅಲೆಕ್ಸಾಂಡರ್ ಡ್ಯುಗಿನ್ ಅಧ್ಯಕ್ಷ ಪುಟಿನ್ ಪದಚ್ಯುತಿಗೆ ಕರೆ ನೀಡಿದ್ದಾರೆ. ಖೆರ್ಸಾನ್‌ನಲ್ಲಿ ರಶ್ಯಕ್ಕೆ ಎದುರಾಗಿರುವ ಅವಮಾನಕಾರಿ ಸೋಲಿನ ಬಳಿಕ ಪುಟಿನ್ ಅವರನ್ನು ಹತ್ಯೆ ಮಾಡುವ ಸಾಧ್ಯತೆಯೂ ಇದೆ ಎಂದು ಡ್ಯುಗಿನ್ ಹೇಳಿರುವುದಾಗಿ 'ದಿ ಮಿರರ್' ವರದಿ ಮಾಡಿದೆ.

ಪುಟಿನ್ ಪರಮಾಪ್ತ ಎಂದು ಗುರುತಿಸಿಕೊಂಡಿದ್ದ ಡ್ಯುಗಿನ್ ಟೆಲಿಗ್ರಾಂ ಚಾನೆಲ್‌ನಲ್ಲಿ ಪುಟಿನ್ ಅವರ ವಿಫಲ ಉಕ್ರೇನ್ ಆಕ್ರಮಣದ ಬಗ್ಗೆ ಮಾತನಾಡಿದ್ದಾರೆ. ಉಕ್ರೇನ್‌ನಲ್ಲಿನ ಪರಿಸ್ಥಿತಿ ಬಗ್ಗೆ ಮಾತನಾಡುತ್ತಾ, ನಿಜವಾದ ರಶ್ಯನ್ನರು ಈಗ ದುಃಖಿಸಬೇಕು . ರಶ್ಯ ಖೆರ್ಸಾನ್‌ಗೆ ಶರಣಾಗಿದೆ ಮತ್ತು ಈ ಸೋಲಿನ ಬಗ್ಗೆ ಅಸಮಾಧಾನಗೊಳ್ಳದವರು ರಶ್ಯನ್ನರೇ ಅಲ್ಲ' ಎಂದು ಹೇಳಿಕೆ ನೀಡಿದ್ದರು. ಬಳಿಕ ಹೇಳಿಕೆಯನ್ನು ಡಿಲೀಟ್ ಮಾಡಲಾಗಿದೆ ಎಂದು ವರದಿಯಾಗಿದೆ. 

share
Next Story
X