ಬಲವಂತದ ಧಾರ್ಮಿಕ ಮತಾಂತರ 'ಬಹಳ ಗಂಭೀರ' ವಿಷಯ: ಸುಪ್ರೀಂ ಕೋರ್ಟ್
![ಬಲವಂತದ ಧಾರ್ಮಿಕ ಮತಾಂತರ ಬಹಳ ಗಂಭೀರ ವಿಷಯ: ಸುಪ್ರೀಂ ಕೋರ್ಟ್ ಬಲವಂತದ ಧಾರ್ಮಿಕ ಮತಾಂತರ ಬಹಳ ಗಂಭೀರ ವಿಷಯ: ಸುಪ್ರೀಂ ಕೋರ್ಟ್](https://www.varthabharati.in/sites/default/files/images/articles/2022/11/14/356373-1668434746.jpg)
ಹೊಸದಿಲ್ಲಿ: ಬಲವಂತದ ಧಾರ್ಮಿಕ ಮತಾಂತರವನ್ನು 'ಬಹಳ ಗಂಭೀರ' ('very serious')ವಿಷಯವೆಂದು ಪರಿಗಣಿಸಿರುವ ಸುಪ್ರೀಂ ಕೋರ್ಟ್(Supreme Court), ಈ ಬಗ್ಗೆ ಪರಿಶೀಲಿಸಿ, ಮಧ್ಯಪ್ರವೇಶಿಸಿ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುವಂತೆ ಕೇಂದ್ರಕ್ಕೆ ಸೋಮವಾರ ಸೂಚಿಸಿದೆ.
ಬಲವಂತದ ಧಾರ್ಮಿಕ ಮತಾಂತರಗಳನ್ನು ನಿಲ್ಲಿಸದಿದ್ದರೆ 'ಅತ್ಯಂತ ಕಠಿಣ ಪರಿಸ್ಥಿತಿ'('Extremely difficult situation') ಉದ್ಭವಿಸಬಹುದು ಎಂದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಎಂ ಆರ್ ಶಾ (M R Shah)ಮತ್ತು ಹಿಮಾ ಕೊಹ್ಲಿ (Hima Kohli)ಅವರ ಪೀಠವು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ(Tushar Mehta) ಅವರ ಬಳಿ ಆಮಿಷಗಳ ಮೂಲಕ ಮತಾಂತರ ಮಾಡುವ ಅಭ್ಯಾಸವನ್ನು ತಡೆಯುವ ಕ್ರಮಗಳನ್ನು ಪಟ್ಟಿ ಮಾಡಲು ಕೇಳಿದೆ.
"ಇದು ತುಂಬಾ ಗಂಭೀರವಾದ ವಿಷಯ. ಬಲವಂತದ ಮತಾಂತರವನ್ನು ತಡೆಯಲು ಕೇಂದ್ರದಿಂದ ಪ್ರಾಮಾಣಿಕ ಪ್ರಯತ್ನಗಳು ನಡೆಯಬೇಕು. ಇಲ್ಲದಿದ್ದರೆ ಬಹಳ ಕಷ್ಟಕರವಾದ ಪರಿಸ್ಥಿತಿ ಬರುತ್ತದೆ. ನೀವು ಯಾವ ಕ್ರಮವನ್ನು ಪ್ರಸ್ತಾಪಿಸುತ್ತೀರಿ ಎಂದು ನಮಗೆ ತಿಳಿಸಿ.... ನೀವು (ಇದನ್ನು ತಡೆಯಲು) ಹೆಜ್ಜೆ ಮುಂದಿಡಬೇಕು” ಎಂದು ಕೇಂದ್ರವನ್ನು ಉದ್ದೇಶಿಸಿ ಸುಪ್ರೀಂ ಹೇಳಿದೆ.
"ಇದು ರಾಷ್ಟ್ರದ ಭದ್ರತೆ ಮತ್ತು ಧರ್ಮ ಮತ್ತು ಆತ್ಮಸಾಕ್ಷಿಯ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವ ಅತ್ಯಂತ ಗಂಭೀರವಾದ ವಿಷಯವಾಗಿದೆ. ಆದ್ದರಿಂದ, ಬಲವಂತದ ಮತಾಂತರವನ್ನು ತಡೆಯಲು ಮುಂದಿನ ಕ್ರಮಗಳ ಬಗ್ಗೆ ಭಾರತ ಒಕ್ಕೂಟವು ತಮ್ಮ ನಿಲುವನ್ನು ಸ್ಪಷ್ಟಪಡಿಸುವುದು ಉತ್ತಮವಾಗಿರುತ್ತದೆ" ಎಂದು ಪೀಠ ಹೇಳಿದೆ.
ಒತ್ತಡ, ಬೆದರಿಕೆ, ಆಮಿಷ ಮತ್ತು ವಿತ್ತೀಯ ಪ್ರಯೋಜನಗಳ ಮೂಲಕ ಮೋಸದ ಧಾರ್ಮಿಕ ಮತಾಂತರವನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನ ನೀಡುವಂತೆ ಕೋರಿ ವಕೀಲ ಅಶ್ವಿನಿ ಕುಮಾರ್(Ashwini Kumar) ಉಪಾಧ್ಯಾಯ ಅವರು ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
ಇದನ್ನೂ ಓದಿ :ಸಿದ್ದರಾಮಯ್ಯ ಸೋಲಿಸಲು BJP ಜತೆ ಮೈತ್ರಿ ಇಲ್ಲ, ಅವರ ಪಕ್ಷದವರೇ ಸೋಲಿಸುತ್ತಾರೆ ಎಂದ ಕುಮಾರಸ್ವಾಮಿ