ಮಂಗಳೂರು: ಸಿಟಿ ಗೋಲ್ಡ್ನಿಂದ ಸಾಧಕ ಮಕ್ಕಳಿಗೆ ಸನ್ಮಾನ

ಮಂಗಳೂರು: ನಗರದ ಕಂಕನಾಡಿಯಲ್ಲಿರುವ ಸಿಟಿಗೋಲ್ಡ್ ವತಿಯಿಂದ ಮಕ್ಕಳ ದಿನಾಚರಣೆಯ ಪ್ರಯುಕ್ತ ಸೋಮವಾರ ‘ವಾವ್ ಕಿಡ್ಸ್’ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಕ್ಕಳಾದ ಮಣಿಪಾಲ ಸ್ಕೂಲ್ನ ಮುಹಮ್ಮದ್ ಶಾಝೀನ್ ಖಾದಿರಿ, ಮಿಜಾರ್ ಆದರ್ಶ ಪಿಯು ಕಾಲೇಜಿನ ಫಾತಿಮಾತ್ ಫಝೀಲತ್, ನೀರುಮಾರ್ಗದ ಪ್ರೆಸಿಡೆನ್ಸಿಯ ಸ್ಕೂಲ್ನ ಮುಹಮ್ಮದ್ ಫರಾಝ್ ಅಲಿ, ಲೇಡಿಹಿಲ್ ವಿಕ್ಟೋರಿಯಾ ಹೈಸ್ಕೂಲ್ನ ರಿಯನ್ನ ಧೃತಿ ಫೆರ್ನಾಂಡಿಸ್, ಮಂಗಳೂರು ಕೇಂದ್ರೀಯ ವಿದ್ಯಾಲಯದ ದಿಲ್ನ ರಾಜೇಶ್, ತಲಪಾಡಿ ಡೈಮಂಡ್ ಇಂಟರ್ ನ್ಯಾಷನಲ್ ಸ್ಕೂಲ್ನ ಅಬ್ದುಲ್ ಖಾದರ್ ಫೈಝಾನ್ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ಟ್ಯಾಲೆಂಟ್ ಚಾಂಪಿಯನ್ಸ್ ನಡೆಯಿತು.
ಮುಖ್ಯ ಅತಿಥಿಗಳಾಗಿ ಆದರ್ಶ್ ಪಿಯು ಕಾಲೇಜಿನ ಪ್ರಾಂಶುಪಾಲೆ ಡಾ. ಶಾಂತಿ ವಿಜಯ್, ಡೈಮಂಡ್ ಇಂಟರ್ ನ್ಯಾಷನಲ್ ಸ್ಕೂಲ್ನ ಟ್ರಸ್ಟಿ ಸನಾ ಅಲ್ತಾಫ್, ಡಾ. ಸರೀನಾ ಪಿ., ರೂಪಾ ಬಾಳಿಗ, ಜೆನಿಫರ್ ಬರೆಟ್ಟೊ, ಶಾಹಿದಾ ಬಿ.ಎಂ. ಪ್ರೊ. ಸಕೀನಾ, ರಫೀಕ್ ಮಾಸ್ಟರ್ ಭಾಗವಹಿಸಿ ಶುಭ ಹಾರೈಸಿದರು.
ಈ ಸಂದರ್ಭ ಸಿಟಿ ಗೋಲ್ಡ್ನ ಬ್ರಾಂಚ್ ಮ್ಯಾನೇಜರ್ ಅಹ್ಮದ್ ಆಫೀಝ್, ಮಾರ್ಕೆಟಿಂಗ್ ಮ್ಯಾನೇಜರ್ ಇಮ್ರಾನ್ ವಿ. ಹಾಗೂ ಸಿಬ್ಬಂದಿ ವರ್ಗ, ಗ್ರಾಹಕರು ಉಪಸ್ಥಿತರಿದ್ದರು.