"ಚುನಾವಣೆ ಟಿಕೆಟ್ಗಾಗಿ ಲಂಚ": ದಿಲ್ಲಿ ಎಎಪಿ ಶಾಸಕನ ಸಂಬಂಧಿ ಸಹಿತ ಮೂವರ ಬಂಧನ
![ಚುನಾವಣೆ ಟಿಕೆಟ್ಗಾಗಿ ಲಂಚ: ದಿಲ್ಲಿ ಎಎಪಿ ಶಾಸಕನ ಸಂಬಂಧಿ ಸಹಿತ ಮೂವರ ಬಂಧನ ಚುನಾವಣೆ ಟಿಕೆಟ್ಗಾಗಿ ಲಂಚ: ದಿಲ್ಲಿ ಎಎಪಿ ಶಾಸಕನ ಸಂಬಂಧಿ ಸಹಿತ ಮೂವರ ಬಂಧನ](https://www.varthabharati.in/sites/default/files/images/articles/2022/11/16/356595-1668576390.jpg)
ಹೊಸದಿಲ್ಲಿ: ದಿಲ್ಲಿಯ ಭ್ರಷ್ಟಾಚಾರ ನಿಗ್ರಹ ದಳವು Anti-Corruption Branch of Delhi ಎಎಪಿ ಶಾಸಕ AAP MLA ಅಖಿಲೇಶ್ ಪತಿ ತ್ರಿಪಾಠಿ ಅವರ ಸಂಬಂಧಿ ಹಾಗೂ ಆಪ್ತ ಸಹಾಯಕ ಸೇರಿದಂತೆ ಮೂವರನ್ನು ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆಗೆ ಟಿಕೆಟ್ ಖಾತ್ರಿಪಡಿಸುವ ನೆಪದಲ್ಲಿ ಪಕ್ಷದ ಕಾರ್ಯಕರ್ತನಿಂದ ಲಕ್ಷಾಂತರ ರೂ. ಪಡೆದ ಆರೋಪದ ಮೇಲೆ ಬಂಧಿಸಿದೆ. ಮತ್ತೊಬ್ಬ ಎಎಪಿ ಶಾಸಕ ರಾಜೇಶ್ ಗುಪ್ತಾ ಅವರ ಹೆಸರೂ ಕೇಳಿಬಂದಿದೆ. ಆಡಿಯೋ ಮತ್ತು ವಿಡಿಯೋ ಪುರಾವೆಗಳನ್ನು ಹೊಂದಿದ್ದೇವೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ದಿಲ್ಲಿ ಪೊಲೀಸ್ ಹಾಗೂ ಎಸಿಬಿ ಸೇರಿದಂತೆ ಕೇಂದ್ರದಿಂದ ನೇಮಕಗೊಂಡ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಎಎಪಿ ಆರೋಪಿಸುತ್ತಿದ್ದರೂ ಶಾಸಕರಾಗಲೀ ಅಥವಾ ಪಕ್ಷವಾಗಲೀ ಇನ್ನೂ ಪ್ರತಿಕ್ರಿಯಿಸಿಲ್ಲ.
ಮೂವರು ವ್ಯಕ್ತಿಗಳಲ್ಲಿ ಶಾಸಕ ತ್ರಿಪಾಠಿ ಅವರ ಸಂಬಂಧಿ ಓಂ ಸಿಂಗ್, ಪಿಎ ಶಿವಶಂಕರ್ ಪಾಂಡೆ ಮತ್ತು ಸಹವರ್ತಿ ಪ್ರಿನ್ಸ್ ರಘುವಂಶಿ ಅವರು ನವೆಂಬರ್ 15 ರಂದು ಪಕ್ಷದ ಕಾರ್ಯಕರ್ತರ ಮನೆಗೆ ಅವರು ತೆಗೆದುಕೊಂಡಿದ್ದ ರೂ. 33 ಲಕ್ಷ ಹಣವನ್ನು ಹಿಂದಿರುಗಿಸಲು ಬಂದಾಗ ಬಂಧಿಸಲಾಯಿತು. ಈ ಮೂವರು ಟಿಕೆಟ್ ನೀಡುವ ಭರವಸೆ ಉಳಿಸಿಕೊಂಡಿರಲಿಲ್ಲ ಎಂದು ತನಿಖಾ ಸಂಸ್ಥೆ ಹೇಳಿದೆ.