ದ್ವಿಚಕ್ರ ವಾಹನ ಕಳವು

ಮಂಗಳೂರು: ನಗರದ ನಾಗುರಿಯ ನಿವಾಸಿ ಅಬ್ದುಲ್ ಹಮೀದ್ ಎಂಬವರಿಗೆ ಸೇರಿದ ದ್ವಿಚಕ್ರವನ್ನು ನ.14ರಂದು ಕಳವು ಮಾಡಿದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಬ್ದುಲ್ ಹಮೀದ್ ನ.14ರಂದು ಪೂ.11ಕ್ಕೆ ತನ್ನ ಅಂಗಡಿಯಿಂದ ಹೊರಟು ಮನೆಯ ಬಳಿ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಕೀಯನ್ನು ಮರೆತು ಅದರಲ್ಲೇ ಬಿಟ್ಟು ಮನೆಗೆ ಹೋಗಿದ್ದು, 11.15ಕ್ಕೆ ಮರಳಿ ಬಂದು ನೋಡಿದಾಗ ಅಂದಾಜು 85 ಸಾವಿರ ರೂ. ಮೌಲ್ಯದ ದ್ವಿಚಕ್ರ ವಾಹನ ಕಳವಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
Next Story