Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 'ರೋಹಿತ್ ಶೆಟ್ಟಿ ಈ ವಿಷಯದಲ್ಲಿ ಸಿನೆಮಾ...

'ರೋಹಿತ್ ಶೆಟ್ಟಿ ಈ ವಿಷಯದಲ್ಲಿ ಸಿನೆಮಾ ಮಾಡಬಹುದು': ಎಸ್‌ಪಿ ವಿರುದ್ಧ ಕಿಡಿಕಾರಿದ ಗುವಾಹಟಿ ಹೈಕೋರ್ಟ್

ಅಸ್ಸಾಂ ಬುಲ್ಡೋಜರ್ ಕಾರ್ಯಾಚರಣೆ

18 Nov 2022 8:24 PM IST
share
ರೋಹಿತ್ ಶೆಟ್ಟಿ ಈ ವಿಷಯದಲ್ಲಿ ಸಿನೆಮಾ ಮಾಡಬಹುದು: ಎಸ್‌ಪಿ ವಿರುದ್ಧ ಕಿಡಿಕಾರಿದ ಗುವಾಹಟಿ ಹೈಕೋರ್ಟ್
ಅಸ್ಸಾಂ ಬುಲ್ಡೋಜರ್ ಕಾರ್ಯಾಚರಣೆ

ಗುವಾಹಟಿ, ನ.18: ಕೆಲವು ಆರೋಪಿಗಳ ಮನೆಗಳನ್ನು ಬುಲ್ಡೋಜರ್ ಕಾರ್ಯಾಚರಣೆಯ ಮೂಲಕ ಧ್ವಂಸಗೊಳಿಸಿದ ಅಸ್ಸಾಮಿನ ನಾಗಾಂವ್ ಜಿಲ್ಲಾ ಎಸ್‌ಪಿಯ ಕ್ರಮವನ್ನು ಗುವಾಹಟಿ ಉಚ್ಚ ನ್ಯಾಯಾಲಯವು ಸಂಭಾವ್ಯ ಬಾಲಿವುಡ್ ಚಿತ್ರಕ್ಕೆ ಹೋಲಿಸಿದೆ.

ಗುರುವಾರ ವಿಚಾರಣೆ ಸಂದರ್ಭದಲ್ಲಿ ಮುಖ್ಯ ನ್ಯಾಯಾಧೀಶ ಆರ್.ಎಂ.ಛಾಯಾ ಅವರು,‘ಆ ವರ್ಗದ ಹಿಂದಿ ಸಿನಿಮಾವನ್ನು ನಾನು ನೋಡಿಲ್ಲ. ಎಸ್‌ಪಿಯ ಕಥೆಯನ್ನು ರೋಹಿತ್ ಶೆಟ್ಟಿಗೆ ಕಳುಹಿಸಿ. ಅವರು ಅದರ ಮೇಲೆ ಸಿನಿಮಾ ಮಾಡಬಹುದು’ ಎಂದು ಲಘುಧಾಟಿಯಲ್ಲಿ ಹೇಳಿದರು.

ಈ ವರ್ಷದ ಮೇ 21ರಂದು ಪೊಲೀಸ್ ಕಸ್ಟಡಿಯಲ್ಲಿ ಮೀನು ವ್ಯಾಪಾರಿ ಸಿಫಿಕುಲ್ ಇಸ್ಲಾಮ್ ಸಾವಿನ  ವಿರುದ್ಧ ಪ್ರತಿಭಟನೆಗಿಳಿದಿದ್ದ ಕೆಲವರು ನಾಗಾಂವ್ ಜಿಲ್ಲೆಯ ಬಟದ್ರವಾ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದರು ಮತ್ತು ಸಿಬ್ಬಂದಿಗಳನ್ನು ಥಳಿಸಿದ್ದರು. ಮರುದಿನ ಪೊಲೀಸರು ಬುಲ್ಡೋಜರ್‌ಗಳನ್ನು ಬಳಸಿ ಐವರು ಆರೋಪಿಗಳ ಮನೆಗಳನ್ನು ಧ್ವಂಸಗೊಳಿಸಿದ್ದರು. ಘಟನೆಯ ಕುರಿತು ಇಬ್ಬರು ವಕೀಲರು ಸ್ವೀಕರಿಸಿದ್ದ ಪತ್ರದ ಆಧಾರದಲ್ಲಿ ಉಚ್ಚ ನ್ಯಾಯಾಲಯವು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿತ್ತು.

ಯಾರೂ ಸುರಕ್ಷಿತರಾಗಿಲ್ಲ.ತನಿಖೆಯ ಸೋಗಿನಲ್ಲಿ ನೀವು ಯಾರದೋ ಮನೆಯನ್ನು ಕೆಡವುತ್ತೀರಿ. ಲಾರ್ಡ್ ಮೆಕಾಲೆ ಕೂಡ ಇಂತಹುದನ್ನು ಯೋಚಿಸಿರಲಿಕ್ಕಿಲ್ಲ. ಇದು ಕ್ರಿಮಿನಲ್ ಕಾನೂನಿಗೆ ಕುಂದನ್ನುಂಟು ಮಾಡಿದೆ ಎಂದು ಹೇಳಿದ ನ್ಯಾ.ಛಾಯಾ,ತನಿಖಾ ಸಂಸ್ಥೆಯಿಂದ ಅತ್ಯಂತ ಗಂಭೀರ ಪ್ರಕರಣದ ತನಿಖೆಯಲ್ಲಿಯೂ ಮನೆಯನ್ನು ನೆಲಸಮಗೊಳಿಸುವುದಕ್ಕೆ ಯಾವುದೇ ಕ್ರಿಮಿನಲ್ ಕಾನೂನಿನಡಿ ಅವಕಾಶವಿಲ್ಲ ಎಂದರು.
ಎಸ್‌ಪಿಯ ವರದಿಯಂತೆ ಪೊಲೀಸ್ ತಂಡದಿಂದ ಸಂಪೂರ್ಣ ಶೋಧ ಕಾರ್ಯಾಚರಣೆಯಲ್ಲಿ ಮನೆಯನ್ನು ಅಗೆಯಲು ಬುಲ್ಡೋಜರ್ ಅಗತ್ಯವಾಗಿತ್ತು. ಆದರೆ ಅದಕ್ಕೆ ಅನುಮತಿ ಬೇಕು. ಇಲ್ಲೇನೋ ಇದೆ ಎಂದು ನೀವು ನಾಳೆ ಹೇಳಬಹುದು. ಹಾಗಿದ್ದರೆ ನನ್ನ ನ್ಯಾಯಾಲಯ ಕೊಠಡಿಯನ್ನು ನೀವು ಅಗೆಯುತ್ತೀರಾ? ನೀವು ಹೇಗೆ ಅದನ್ನು ಮಾಡುತ್ತೀರಿ? ನೀವು ಯಾರೇ ಆಗಿರಬಹುದು ಎಂದು ಕುಟುಕಿದರು.

ಅವರು ಯಾವುದೇ ಜಿಲ್ಲೆಯ ಎಸ್‌ಪಿ ಆಗಿರಬಹುದು. ಡಿಐಜಿ,ಐಜಿ ಅಥವಾ ಡಿಜಿ ಕೂಡ ಕಾನೂನಿಗೆ ಅನುಗುಣವಾಗಿಯೇ ನಡೆದುಕೊಳ್ಳಬೇಕು. ನೀವು ಪೊಲೀಸ್ ಇಲಾಖೆಯ ಮುಖ್ಯಸ್ಥರಾಗಿದ್ದೀರಿ ಎಂಬ ಮಾತ್ರಕ್ಕೆ ನೀವು ಯಾರದೇ ಮನೆಯನ್ನು ಕೆಡವುವಂತಿಲ್ಲ. ಇದಕ್ಕೆ ಅನುಮತಿ  ನೀಡಿದರೆ ಈ ದೇಶದಲ್ಲಿ ಯಾರೂ ಸುರಕ್ಷಿತರಾಗಿರುವುದಿಲ್ಲ ಎಂದು ಹೇಳಿದ ಮುಖ್ಯ ನ್ಯಾಯಾಧೀಶರು,ನಾಳೆ ಯಾರಾದರೂ ಬಲವಂತದಿಂದ ನ್ಯಾಯಾಲಯಕ್ಕೆ ನುಗ್ಗಿ ಕುಳಿತುಕೊಳ್ಳಬಹುದು. ತನಿಖೆಯ ನೆಪದಲ್ಲಿ ಪೊಲೀಸ್ ಅಧಿಕಾರಿಗಳು ಆತ ಕುಳಿತಿದ್ದ ಕುರ್ಚಿಯನ್ನು ತೆಗೆಯುತ್ತಾರಾ? ಆತ ಮಾಡಿದ ಅಪರಾಧಕ್ಕಾಗಿ ಆತನ ವಿರುದ್ಧ ನೀವು ಕಾನೂನು ಕ್ರಮ ಜರುಗಿಸಬಹುದು. ಮನೆಯ ಮೇಲೆ ಬುಲ್ಡೋಜರ್ ಚಲಾಯಿಸಲು ಎಸ್‌ಪಿಗೆ ಅಧಿಕಾರ ನೀಡಿದವರು ಯಾರು ಎಂದು ಪ್ರಶ್ನಿಸಿದರು.
ಕಾರ್ಯವಿಧಾನವನ್ನು ಅನುಸರಿಸಬೇಕು ಎಂದು ಒತ್ತಿ ಹೇಳಿದ ಅವರು,ಗುವಾಹಟಿಯ ವಕೀಲರ ಸಂಘದಲ್ಲಿಯ ತನ್ನ ಸೀಮಿತ ವೃತ್ತಿಜೀವನದಲ್ಲಿ ಸರ್ಚ್ ವಾರಂಟ್ ಮೂಲಕ ಬುಲ್ಡೋಜರ್ ಬಳಸಿದ್ದ ಯಾವುದೇ ಪೊಲೀಸ್ ಅಧಿಕಾರಿಯನ್ನು ತಾನು ಕಂಡಿರಲಿಲ್ಲ ಎಂದರು.

ಇದು ಗ್ಯಾಂಗ್ ವಾರ್ ಅಥವಾ ಪೊಲೀಸ್ ಕಾರ್ಯಾಚರಣೆಯೇ? ಗ್ಯಾಂಗ್ ವಾರ್‌ನಲ್ಲಿ ಇಂತಹುದು ಸಂಭವಿಸಿದರೆ ಯಾರೂ ಅರ್ಥ ಮಾಡಿಕೊಳ್ಳಬಹುದು. ‘ಕಾನೂನು’ ಮತ್ತು  ‘ಸುವ್ಯವಸ್ಥೆ ’ಶಬ್ದಗಳನ್ನು ಒಂದು ಉದ್ದೇಶದೊಂದಿಗೆ ಬಳಸಲಾಗುತ್ತದೆ ಎಂದು ಒತ್ತಿ ಹೇಳಿದ ಮುಖ್ಯ ನ್ಯಾಯಾಧೀಶರು,ಘಟನೆಯನ್ನು ಗೃಹ ಸಚಿವಾಲಯದ ಉನ್ನತಾಧಿಕಾರಿಗಳ ಗಮನಕ್ಕೆ ತರುವಂತೆ ಆದೇಶಿಸಿದರು. ಡಿಜಿಪಿಗೂ ಈ ಬಗ್ಗೆ ಗೊತ್ತಿಲ್ಲದಿರಬಹುದು ಎಂದರು. 

ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ನಿಮಗೆ ಸಿಕ್ಕಿದ್ದು ಒಂದು 9 ಎಂಎಂ ಪಿಸ್ತೂಲು. ಅದನ್ನು ಅಲ್ಲಿ ಇಡಲಾಗಿತ್ತೇ ಅಥವಾ ಅದು ನಿಜಕ್ಕೂ ಅಲ್ಲಿ ದೊರಕಿತ್ತೇ ಎನ್ನುವುದು ನಮಗೆ ಗೊತ್ತಿಲ್ಲ. ಅಪರಾಧವೊಂದರ ತನಿಖೆಗಾಗಿ ಪೊಲೀಸರು ಯಾವುದೇ ಆದೇಶವಿಲ್ಲದೆ ಬುಲ್ಡೋಜರ್ ಬಳಸಿ ಓರ್ವ ವ್ಯಕ್ತಿಯನ್ನು ಬುಡಮೇಲುಗೊಳಿಸಬಹುದು ಎಂದು ಯಾವುದೇ ಅಪರಾಧ ನ್ಯಾಯಶಾಸ್ತ್ರದಲ್ಲಿ ಹೇಳಿದ್ದರೆ ನನಗೆ ತೋರಿಸಿ

ಮುಖ್ಯ ನ್ಯಾಯಾಧೀಶೆ ಆರ್.ಎಂ.ಛಾಯಾ

share
Next Story
X