ಪುಣ್ಯಕೋಟಿ ದತ್ತು ಯೋಜನೆಗೆ ನನ್ನ ವೇತನ ಕಡಿತ ಮಾಡಬಾರದು: ಎಂ. ಮುನಿಆಂಜಿನಪ್ಪ
ಯೋಜನೆಗೆ ಸರಕಾರಿ ನೌಕರರ ವೇತನ ಕಡಿತಕ್ಕೆ ಆದೇಶಿಸಿದ್ದ ರಾಜ್ಯ ಸರ್ಕಾರ
ಯೋಜನೆಗೆ ಸರಕಾರಿ ನೌಕರರ ವೇತನ ಕಡಿತಕ್ಕೆ ಆದೇಶಿಸಿದ್ದ ರಾಜ್ಯ ಸರ್ಕಾರ
ಬೆಂಗಳೂರು: ‘ಪುಣ್ಯಕೋಟಿ ದತ್ತು ಯೋಜನೆ’ಗೆ ನನ್ನ ವೇತನದಿಂದ ವಂತಿಗೆಯನ್ನು ಕಡಿತ ಮಾಡಲು ನನ್ನ ಸಹಮತಿ ನೀಡಿರುವುದಿಲ್ಲ. ಆದುದರಿಂದ 11 ಸಾವಿರ ರೂ.ಗಳ ವಂತಿಗೆಯನ್ನು ನನ್ನ ವೇತನ ಕಟಾವು ಮಾಡಬಾರದು ಎಂದು ಕರ್ನಾಟಕ ಮೂಲಸೌಕರ್ಯ ಅಭಿವೃದ್ದಿ ಹಣಕಾಸು ನಿಗಮ (ಕೆಯುಐಡಿಎಫ್ಸಿ) ಅಧೀಕ್ಷಕ ಅಭಿಯಂತರರಾದ ಎಂ. ಮುನಿಆಂಜಿನಪ್ಪ ಅವರು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
‘ಪುಣ್ಯಕೋಟಿ ದತ್ತು ಯೋಜನೆ’ ಅನುಷ್ಠಾನಕ್ಕಾಗಿ ರಾಜ್ಯ ಸರಕಾರಿ ನೌಕರರ ವೇತನದಿಂದ ವಂತಿಕೆಯನ್ನು ಕಡಿತ ಮಾಡಿ ಯೋಜನೆಗೆ ಬಳಸುವ ಸಂಬಂಧ ರಾಜ್ಯ ಸರಕಾರಿ ನೌಕರರ ಸಂಘ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿತ್ತು. ಆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನೌಕರರ ವೇತನ ಕಡಿತ ಮಾಡಲು ಇತ್ತೀಚೆಗೆ ಆದೇಶ ಹೊರಡಿಸಿತ್ತು.
Next Story