Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ ....

ಓ ಮೆಣಸೇ ....

ಪಿ.ಎ. ರೈಪಿ.ಎ. ರೈ21 Nov 2022 12:07 AM IST
share
ಓ ಮೆಣಸೇ ....

ಕೇಸರಿ ಬಣ್ಣಕ್ಕೆ ನಮ್ಮ ವಿರೋಧವಿಲ್ಲ. ಆದರೆ ಅದು ಬಿಜೆಪಿಯವರ ಗುತ್ತಿಗೆ ಅಲ್ಲ - ವೀರಪ್ಪ ಮೊಯ್ಲಿ, ಮಾಜಿ ಸಿಎಂ
ಅವರಿಗೆ ನಿಮ್ಮ ಪಕ್ಷದ ತ್ರಿವರ್ಣ ಮಾತ್ರವಲ್ಲ, ದೇಶದ ತ್ರಿವರ್ಣ ಕಂಡರೂ ಆಗುವುದಿಲ್ಲ.

ಕೆಲವರಿಗೆ ಗೋಪುರದಂತೆ ಇರುವುದೆಲ್ಲವೂ ಮುಸ್ಲಿಮರದ್ದು ಎನ್ನುವಂತೆ ತೋರುತ್ತದೆ - ತನ್ವೀರ್ ಶೇಟ್, ಶಾಸಕ
ಮಲಮೂತ್ರಗಳಲ್ಲಿ ಔಷಧಿ ಕಾಣುವವರಿಗೆ ಎಲ್ಲಿ ಏನು ಕಂಡರೂ ಅಚ್ಚರಿ ಇಲ್ಲ.

ಕೇಸರಿ ಎಂದರೆ ಕೆಲವರ ಕಣ್ಣು ಯಾಕೆ ಕೆಂಪಗಾಗುತ್ತದೆ ಅರ್ಥವಾಗುತ್ತಿಲ್ಲ - ಬಸವರಾಜ ಬೊಮ್ಮಾಯಿ, ಸಿಎಂ
ಅಷ್ಟೊಂದು ಮುದ್ದಾದ ಬಣ್ಣ ಅಷ್ಟು ವ್ಯಾಪಕವಾಗಿ ದುರುಪಯೋಗವಾಗುವುದನ್ನು ಕಂಡರೆ ಸ್ವಸ್ಥರಾಗಿರುವ ಎಲ್ಲರ ಕಣ್ಣು ಕೆಂಪಾಗುವುದು ಸಹಜ.

ಮುಂದಿನ ಮಾರ್ಚ್‌ನೊಳಗೆ ಎಲ್ಲ ಅರ್ಹರಿಗೂ ಆರೋಗ್ಯ ಕಾರ್ಡ್ ವಿತರಿಸುವ ಗುರಿ ಹೊಂದಲಾಗಿದೆ - ಡಾ.ಸುಧಾಕರ್, ಸಚಿವ
ಎಲ್ಲ ಸತ್ಕಾರ್ಯಗಳನ್ನು ಚುನಾವಣೆಯ ಹತ್ತಿರದ ಸಮಯಕ್ಕೆ ಮುಂದೂಡುತ್ತಲಿದ್ದರೆ, ಆ ತನಕ ಏನು ಮಾಡುತ್ತಿರುತ್ತೀರಿ?

ವಿವೇಕ ಶಾಲಾ ಕೊಠಡಿಗಳಿಗೆ ಯಾವ ಬಣ್ಣ ಬಳಿಯ ಬೇಕೆಂಬುದು ಈವರೆಗೂ ನಿರ್ಣಯವಾಗಿಲ್ಲ - ಬಿ.ಸಿ.ನಾಗೇಶ್, ಸಚಿವ
ಬಣ್ಣ ಬಳಿಯುವ ವಿವಾದ ತಪ್ಪಿಸಲು ಎಲ್ಲರಿಗೆ ಕೇಸರಿ ಕನ್ನಡಕ ಕೊಟ್ಟುಬಿಡಿ - ನಿಮ್ಮ ಕನಸಿನಂತೆ ಎಲ್ಲವೂ ಕೇಸರಿಮಯವಾಗಿ ಬಿಡುತ್ತದೆ.

ರಾಜ್ಯದ ಯಾವ ಕ್ಷೇತ್ರದಲ್ಲಿ ಬೇಕಾದರೂ ಚುನಾವಣೆಗೆ ಸ್ಪರ್ಧಿಸುವವನೇ ನಿಜವಾದ ಲೀಡರ್ - ಸಿದ್ದರಾಮಯ್ಯ, ಮಾಜಿ ಸಿಎಂ
ಸೋಲೆದುರಿಸಲು ಸಿದ್ಧರಾಗಿರುವವರಿಗೆ ಯಾವ ಕ್ಷೇತ್ರವಾದರೇನಂತೆ?

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಒಪ್ಪಂದ ಅಥವಾ ಮೈತ್ರಿ ಮಾಡಿಕೊಳ್ಳುವುದಿಲ್ಲ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ
ನೀವು ಎಲ್ಲ ಹೊಲಸು ಮೈತ್ರಿ, ಒಪ್ಪಂದಗಳನ್ನು ಚುನಾವಣೆಯ ನಂತರವೇ ಮಾಡುತ್ತೀರಿ ಎಂಬುದು ಜನರಿಗಿರುವ ಆತಂಕ.

ತಂತ್ರಜ್ಞಾನ ಕ್ಷೇತ್ರ ಹುಲಿ ಮೇಲಿನ ಸವಾರಿ - ಡಾ.ಅಶ್ವತ್ಥನಾರಾಯಣ, ಸಚಿವ
ದೇಶದ ಮೇಲೆ ಕೋತಿ ಸವಾರಿ ನಡೆಯುತ್ತಿರುವಾಗ ತಂತ್ರಜ್ಞಾನದ ಮೇಲೆ ಯಾರು ಸವಾರಿ ನಡೆಸುತ್ತಿದ್ದರೂ ನಮಗೇನಂತೆ!

ಕಾಂಗ್ರೆಸ್ ಸರಕಾರವಿದ್ದಾಗ ಬೆಂಗಳೂರಿನ ಟೌನ್‌ಹಾಲ್ ಎದುರು ಗೋಮಾಂಸ ಹುರಿದು ತಿಂದು ಪ್ರತಿಭಟನೆ ನಡೆಸಿದವರು ಈಗ ತಾಕತ್ತಿದ್ದರೆ ಸಾರ್ವಜನಿಕವಾಗಿ ಗೋಮಾಂಸ ತಿನ್ನಲಿ ನೋಡೋಣ - ಶ್ರೀನಿವಾಸ ಪೂಜಾರಿ, ಸಚಿವ
ಬೀಫ್ ಮಾರುವವರೇನು ನಿಮ್ಮನ್ನು ಸೇಲ್ಸ್ ಪ್ರೊಮೋಷನ್‌ಗಾಗಿ ನೇಮಿಸಿದ್ದಾರೆಯೇ?

ಪ್ರಸಕ್ತ ಪ್ರಚಾರದ ಯುಗದಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಮಾಡುವವರೇ ಶ್ರೇಷ್ಠ ವ್ಯಕ್ತಿಗಳು -ಎಚ್.ವಿಶ್ವನಾಥ್, ಮಾಜಿ ಸಚಿವ
ಅವರು ಯಾವ ಗ್ರಹದಲ್ಲಿ ಅವಿತಿದ್ದಾರೆ ಸಾರ್?

ಟಿಪ್ಪು ಸುಲ್ತಾನನನ್ನು ಕೊಂದವರು ನಿಜವಾದ ಹುಲಿಗಳು - ಸಿ.ಟಿ.ರವಿ, ಶಾಸಕ
 ನರ ಹತ್ಯೆಯ ಸಾಹಸವನ್ನು ಕೆಲವೊಮ್ಮೆ ಹುಚ್ಚು ನಾಯಿಗಳೂ ಮಾಡುತ್ತವೆ.

ಡಾ.ಅಂಬೇಡ್ಕರ್ ಸಂವಿಧಾನದ ಮೂಲಕ ನೀಡಿದ ಹಕ್ಕುಗಳನ್ನು ನಾವೀಗ ಅನುಭವಿಸುವ ಕಾಲಘಟ್ಟದಲ್ಲಿದ್ದೇವೆ -ಎಸ್.ಅಂಗಾರ, ಸಚಿವ
ಹೌದು ಸಚಿವರಾದವರಿಗೆ ಹಾಗೆ ಅನಿಸಿದೆ. ಜನತೆಯ ಸರದಿ ಯಾವಾಗ ಬಂದೀತು?

ಅಮೆರಿಕದೊಂದಿಗೆ ಪಾಕಿಸ್ತಾನ ಯಜಮಾನ -ಗುಲಾಮ ರೀತಿಯ ಸಂಬಂಧ ಹೊಂದಿದೆ - ಇಮ್ರಾನ್ ಖಾನ್, ಪಾಕ್ ಮಾಜಿ ಪ್ರಧಾನಿ
ಗುಲಾಮಗಿರಿ ಒಪ್ಪಿಕೊಂಡವರಿಗೆ ಯಜಮಾನ ಯಾರಾದರೇನಂತೆ?

ಮಲ್ಲಿಕಾರ್ಜುನ ಖರ್ಗೆಗೆ ಮರದ ಕತ್ತಿ, ರಟ್ಟಿನ ಗುರಾಣಿ ಕೊಟ್ಟು ಯುದ್ಧಕ್ಕೆ ನಿಲ್ಲಿಸಲಾಗಿದೆ - ಶ್ರೀನಿವಾಸ ಪ್ರಸಾದ್, ಸಂಸದ
ನಿಮಗೆ ನೀಡಿರುವುದೆಲ್ಲಾ ರಟ್ಟಿನದ್ದಲ್ಲವೇ?

ಇಂದು ಬುದ್ಧಿಜೀವಿಗಳಲ್ಲಿ ಅಪ್ರಾಮಾಣಿಕತೆ ಹೆಚ್ಚಾಗುತ್ತಿದೆ - ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಹಿರಿಯ ಸಾಹಿತಿ
ಬುದ್ಧಿಜೀವಿಗಳು ಜೀವ ಬಿಟ್ಟು ಬುದ್ಧಿವಂತರಾಗುತ್ತಿರುವುದರ ಲಕ್ಷಣ.

ಅಡಿಕೆ ಬೆಳೆ ರೋಗ ಅಧ್ಯಯನಕ್ಕಾಗಿ ಕೇಂದ್ರ ನಿಯೋಜಿತ ಸಮಿತಿ ರಾಜ್ಯಕ್ಕೆ ಆಗಮಿಸಲಿದೆ - ಆರಗ ಜ್ಞಾನೇಂದ್ರ, ಸಚಿವ
ಕೇಂದ್ರಕ್ಕೆ ಅಂಟಿರುವ ಹಲವಾರು ಜನ ವಿರೋಧಿ ರೋಗಗಳ ಅಧ್ಯಯನಕ್ಕೆ ಇಲ್ಲಿಂದ ಕೆಲವರನ್ನು ಕಳಿಸಿ. ಆ ಹೆಸರಲ್ಲಿ ಕೆಲವುಕೋಟಿ ನುಂಗಬಹುದು.

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ರಾಜ್ಯ ಸರಕಾರ ಟಿಪ್ಪು ಜಯಂತಿ ಆಚರಣೆ ಜಾರಿಗೆ ತಂದದ್ದು ತಪ್ಪು - ಸಿ.ಎಂ. ಇಬ್ರಾಹೀಂ, ಜೆಡಿಎಸ್ ಅಧ್ಯಕ್ಷ
ಲಾರ್ಡ್ ಕಾರ್ನವಾಲಿಸ್ ಜಯಂತಿಯನ್ನು ಆಚರಣೆಗೆ ತರಬೇಕಿತ್ತೇ?

ಮಾಜಿ ಸಿಎಂ ಸಿದ್ದರಾಮಯ್ಯರನ್ನು ಸೋಲಿಸಲು ನಾನು ಸಂಚು ರೂಪಿಸಿಲ್ಲ - ಕೆ.ಎಚ್.ಮುನಿಯಪ್ಪ, ಮಾಜಿ ಕೇಂದ್ರ ಸಚಿವ
ಸಂಚು ನಿರ್ಮಿಸುವ ಕೆಲಸವನ್ನೂ ಔಟ್ ಸೋರ್ಸ್ ಮಾಡಿಬಿಟ್ಟಿದ್ದೀರಾ?

ಬಳ್ಳಾರಿ ಜಿಲ್ಲೆ ಬರೀ ಗಣಿಗಾರಿಕೆಗೆ ಮಾತ್ರವಲ್ಲ, ತೋಟಗಾರಿಕೆಗೂ ಹೆಸರುವಾಸಿಯಾಗಬೇಕು - ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ತೋಟದಲ್ಲಿ ಲೂಟಿಗೇನು ಸಿಗುತ್ತೆ ಮೇಡಂ?

ವ್ಯಸನ ಮುಕ್ತ ಸಮಾಜ ನಿರ್ಮಾಣ ಎಲ್ಲರ ಹೊಣೆಯಾಗಿದೆ - ಸುನೀಲ್ ಕುಮಾರ್, ಸಚಿವ
ಅದಕ್ಕಾಗಿ, ಮೊದಲು ಮದ್ಯಮುಕ್ತ ಸಮಾಜ ನಿರ್ಮಿಸುವ ಸರಕಾರ ಬರಲಿ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಪಕ್ಷೇತರನಾಗಿ ಗೆಲ್ಲದಿದ್ದರೆ ಶಿರಚ್ಛೇದನ ಮಾಡಿಕೊಳ್ಳುವೆ - ಎಲ್.ಆರ್.ಶಿವರಾಮೇಗೌಡ, ಮಾಜಿ ಸಂಸದ
ಅದರಿಂದ ಕ್ಷೇತ್ರಕ್ಕೆ ಏನಾದರೂ ಲಾಭವಾಗಲಿದೆ ಎಂಬುದಕ್ಕೆ ಗ್ಯಾರಂಟಿ ಏನಿದೆ?

ಬಿಜೆಪಿ ಭಾಷೆಯಲ್ಲಿಯೇ ಮಾತನಾಡುತ್ತಿರುವ ಸುಕೇಶ್ ಚಂದ್ರಶೇಖರರನ್ನು ಬಿಜೆಪಿ ತನ್ನ ರಾಷ್ಟ್ರೀಯ ಅಧ್ಯಕ್ಷನನ್ನಾಗಿ ಮಾಡಬೇಕು -ಅರವಿಂದ ಕೇಜ್ರಿವಾಲ್, ದಿಲ್ಲಿ ಸಿಎಂ
ಅವರೇನು ನೋಟಿನಲ್ಲಿ ಪಂಜುರ್ಲಿ ಭೂತದ ಚಿತ್ರ ಬೇಕು ಅಂದಿದ್ದಾರೆಯೇ?

ಒಂದು ಧರ್ಮದ ವಿರುದ್ಧ ಅನಗತ್ಯವಾಗಿ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿರುವ ಸಂಸದ ಪ್ರತಾಪ ಸಿಂಹರನ್ನು ಸಿಎಂ ಬೊಮ್ಮಾಯಿ ಕರೆಸಿ ಬುದ್ಧಿಹೇಳಬೇಕು - ರಾಮದಾಸ್, ಶಾಸಕ
ಬೊಮ್ಮಾಯಿಯವರನ್ನು ಕರೆಸಿ ಬುದ್ಧಿ ಹೇಳಬಲ್ಲವರು ಯಾರಿದ್ದಾರೆ?

ತಾಂತ್ರಿಕ ಸಮಸ್ಯೆಯಿಂದಾಗಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಮೂರು ತಿಂಗಳ ಗೌರವಧನ ಪಾವತಿಯಾಗಿಲ್ಲ - ಹಾಲಪ್ಪ ಆಚಾರ್, ಸಚಿವ
ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಬೇಕಾದ ತಂತ್ರಜ್ಞರಿಗೆ ಎಷ್ಟು ವರ್ಷಗಳಿಂದ ಸಂಬಳ ಬಾಕಿ ಇದೆ?

ನಾನು ಪ್ರಧಾನಿ ನರೇಂದ್ರ ಮೋದಿಯ ಭಕ್ತ - ಡಾ.ಅನಂತ್‌ನಾಗ್, ನಟ
ಆ ಮನುಷ್ಯ ಇಂತಹ ಹೊಲಸು ಬೊಗಳೆಯನ್ನೂ ನಂಬುವಷ್ಟು ಮೂರ್ಖ ಎಂದುಕೊಂಡಿದ್ದೀರಾ?

ಕಾಂಗ್ರೆಸ್ ಈಗ ಬಡವರ ಪಕ್ಷ ಆಗಿ ಉಳಿದಿಲ್ಲ - ಕೆ.ಎಸ್.ಈಶ್ವರಪ್ಪ, ಶಾಸಕ
ಶ್ರೀಮಂತರ ಪಕ್ಷವಾಗುವುದು ಕೇವಲ ಬಿಜೆಪಿಯ ಹಕ್ಕೇ?

share
ಪಿ.ಎ. ರೈ
ಪಿ.ಎ. ರೈ
Next Story
X