ನಿಲ್ದಾಣಕ್ಕೆ ನುಗ್ಗಿದ ಗೂಡ್ಸ್ ರೈಲು: ಮೂವರು ಮೃತ್ಯು, ಹಲವರಿಗೆ ಗಂಭೀರ ಗಾಯ
![ನಿಲ್ದಾಣಕ್ಕೆ ನುಗ್ಗಿದ ಗೂಡ್ಸ್ ರೈಲು: ಮೂವರು ಮೃತ್ಯು, ಹಲವರಿಗೆ ಗಂಭೀರ ಗಾಯ ನಿಲ್ದಾಣಕ್ಕೆ ನುಗ್ಗಿದ ಗೂಡ್ಸ್ ರೈಲು: ಮೂವರು ಮೃತ್ಯು, ಹಲವರಿಗೆ ಗಂಭೀರ ಗಾಯ](https://www.varthabharati.in/sites/default/files/images/articles/2022/11/21/357145-1669016450.jpeg)
ಭುವನೇಸ್ವರ: ಒಡಿಶಾದ ಜಾಜ್ಪುರ ಜಿಲ್ಲೆಯ ಕೊರೆ ರೈಲು ನಿಲ್ದಾಣದಲ್ಲಿ ಸೋಮವಾರ ಗೂಡ್ಸ್ ರೈಲು ಹಳಿತಪ್ಪಿ ಕನಿಷ್ಠ ಮೂವರು ಸಾವನ್ನಪ್ಪಿದ್ದು, ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಜಾಜ್ಪುರ ಜಿಲ್ಲೆಯ ಕೊರೈ ನಿಲ್ದಾಣದಲ್ಲಿ ವೇಗವಾಗಿ ಬಂದ ಗೂಡ್ಸ್ ರೈಲು ಹಳಿತಪ್ಪಿ ಕಾಯುತ್ತಿದ್ದ ಪ್ರಯಾಣಿಕರ ಮೇಲೆ ಢಿಕ್ಕಿ ಹೊಡೆದು ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ.
ಗಾಯಗೊಂಡಿರುವ ಏಳು ಮಂದಿ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಳಿತಪ್ಪಿದ ಬೋಗಿಗಳು ಮತ್ತು ಅವಶೇಷಗಳ ಅಡಿಯಲ್ಲಿ ಬಹುಶಃ ಹೆಚ್ಚಿನ ಜನರನ್ನು ಹುಡುಕಲಾಗುತ್ತಿದೆ ಏಕೆಂದರೆ ಹೆಚ್ಚಿನ ಸಾವುನೋವುಗಳಾಗಿರು ಸಾಧ್ಯತೆಗಳಿವೆ.ರೈಲಿನ ಕೋಚ್ಗಳು ಹೆಚ್ಚು ಜನರನ್ನು ಹತ್ತಿಕ್ಕಿವೆ ಎಂದು ನಂಬಲಾಗಿದೆ.
ಹಳಿತಪ್ಪಿದ ಬೋಗಿಗಳು ಪ್ರಯಾಣಿಕರು ಕಾಯುತ್ತಿದ್ದ ನಿಲ್ದಾಣಕ್ಕೆ ನುಗ್ಗಿ ವೇಟಿಂಗ್ ರೂಂ, ಟಿಕೆಟ್ ಕೌಂಟರ್ ಮತ್ತು ಸ್ಟೇಷನ್ ಮಾಸ್ಟರ್ ಕಚೇರಿಗೆ ಬಡಿದಿವೆ.
ಬೆಳಗ್ಗೆ 6.45ರ ಸುಮಾರಿಗೆ ಕೆಲವರು ಪ್ಯಾಸೆಂಜರ್ ರೈಲಿಗಾಗಿ ಪ್ಲಾಟ್ಫಾರ್ಮ್ನಲ್ಲಿ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೂರ್ವ ಕರಾವಳಿ ರೈಲ್ವೆ (ಇಸಿಒಆರ್) ಅಧಿಕಾರಿಗಳು ತಿಳಿಸಿದ್ದಾರೆ.