ತರೀಕೆರೆ | ಸಹೋದರನ ಮಗನ ಕೊಲೆ ಸುದ್ದಿ ಕೇಳಿ ದೊಡ್ಡಪ್ಪ ಹೃದಯಾಘಾತದಿಂದ ಮೃತ್ಯು
![ತರೀಕೆರೆ | ಸಹೋದರನ ಮಗನ ಕೊಲೆ ಸುದ್ದಿ ಕೇಳಿ ದೊಡ್ಡಪ್ಪ ಹೃದಯಾಘಾತದಿಂದ ಮೃತ್ಯು ತರೀಕೆರೆ | ಸಹೋದರನ ಮಗನ ಕೊಲೆ ಸುದ್ದಿ ಕೇಳಿ ದೊಡ್ಡಪ್ಪ ಹೃದಯಾಘಾತದಿಂದ ಮೃತ್ಯು](https://www.varthabharati.in/sites/default/files/images/articles/2022/11/21/357157-1669026740.gif)
ಚಿಕ್ಕಮಗಳೂರು, ನ.21: ಸಹೋದರನ ಪುತ್ರನ ಕೊಲೆಯ ಸುದ್ದಿ ಕೇಳಿ ಮೃತನ ದೊಡ್ಡಪ್ಪ ಹೃದಯಾಘಾತದಿಂದ ಕೊನೆಯುಸಿರೆಳೆದ ಘಟನೆ ತರೀಕೆರೆ ಪಟ್ಟಣದಲ್ಲಿ ನಡೆದಿರುವುದು ವರದಿಯಾಗಿದೆ.
ಹೃದಯಾಘಾತದಿಂದ ಮೃತಪಟ್ಟವರನ್ನು ಪ್ರಕಾಶ್(55) ಎಂದು ಗುರುತಿಸಲಾಗಿದೆ.
ಪ್ರಕಾಶ್ ಅವರ ಸಹೋದರನ ಪುತ್ರ ಓಂಕಾರ್ ಕಳೆದ ರಾತ್ರಿ ಸ್ನೇಹಿತರಿಂದಲೇ ಕೊಲೆಯಾಗಿದ್ದಾರೆ. ಈ ವಿಚಾರ ತಿಳಿಯುತ್ತಲೇ ಪ್ರಕಾಶ್ ಕುಸಿದುಬಿದ್ದು ಹೃದಯಾಘಾತದಿಂದ ಮೃತಪಟ್ಟರೆನ್ನಲಾಗಿದೆ.
ಓಂಕಾರ್ ಕೊಲೆಯಿಂದ ತತ್ತರಿಸಿದ್ದ ಕುಟುಂಬಕ್ಕೆ ಪ್ರಕಾಶ್ ಅವರ ಅಕಾಲಿಕ ಸಾವು ತೀವ್ರ ಆಘಾತವನ್ನುಂಟು ಮಾಡಿದೆ.
ಇದನ್ನೂ ಓದಿ: ತರೀಕೆರೆ | ಸ್ನೇಹಿತರ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ: ಮೂವರು ಆರೋಪಿಗಳ ಬಂಧನ
Next Story