Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ವಾಸ್ತು ಶೈಲಿಗಳಲ್ಲಿ ಧರ್ಮ...

ವಾಸ್ತು ಶೈಲಿಗಳಲ್ಲಿ ಧರ್ಮ ಹುಡುಕುವವರು...

-ಪ್ರವೀಣ್ ಎಸ್. ಶೆಟ್ಟಿ, ಬೋಳೂರು, ಮಂಗಳೂರು-ಪ್ರವೀಣ್ ಎಸ್. ಶೆಟ್ಟಿ, ಬೋಳೂರು, ಮಂಗಳೂರು21 Nov 2022 11:53 PM IST
share

ಮಾನ್ಯರೇ,

 
ಮೈಸೂರಿನ ಬಸ್ ಸ್ಟಾಪ್ ಮೇಲೆ ಇರುವ ಗುಂಬಜ್ ಮುಸ್ಲಿಮ್ ಧರ್ಮದ ವಾಸ್ತು ಆಗಿದ್ದರೆ ದೇಶದ ಎಲ್ಲಾ ಐತಿಹಾಸಿಕ ಮತ್ತು ಸರಕಾರಿ ಕಟ್ಟಡಗಳಲ್ಲಿ ಇರುವ ಕಮಾನುಗಳು (ಅರ್ಚ್) ಸಹ ಮುಸ್ಲಿಮ್ ವಾಸ್ತು ಶೈಲಿಯದ್ದೇ ಎಂಬುದನ್ನು ಮೈಸೂರು ಸಂಸದರು ಅರ್ಥ ಮಾಡಿಕೊಳ್ಳಬೇಕು. ಮೂಲತಃ ಭಾರತೀಯ ವಾಸ್ತು ಶಿಲ್ಪಕಾರರಿಗೆ ಕಮಾನು ಕಟ್ಟುವುದು ಗೊತ್ತೇ ಇರಲಿಲ್ಲ. ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆ ಡೋಮ್ ಮತ್ತು ಕಮಾನು ಕಟ್ಟುವ ತಂತ್ರಜ್ಞಾನ ಹುಟ್ಟಿದ್ದು ರೋಮ್ ದೇಶದಲ್ಲಿ. ಅದು ಮುಂದೆ ಗ್ರೀಸ್ ದೇಶಕ್ಕೆ ಹೋಗಿ ಅಲ್ಲಿಂದ ಈಜಿಪ್ಟ್, ಮೆಸಪೋಟಾಮಿಯಾ, ಅರೇಬಿಯಕ್ಕೆ ಹರಡಿ ಕೊನೆಗೆ ಪರ್ಷಿಯಾಕ್ಕೆ ಬಂದಿತ್ತು. ಹನ್ನೊಂದನೇ ಶತಮಾನದಲ್ಲಿ ವಿದೇಶಿ ಮುಸ್ಲಿಮರು ಭಾರತದಲ್ಲಿ ಆಡಳಿತ ಶುರುಮಾಡಿದ ಮೇಲೆ ಪರ್ಷಿಯನ್ ವಾಸ್ತುಶಿಲ್ಪಕಾರರು ಈ ಕಮಾನು ಮತ್ತು ಗುಂಬಜ್ ಕಟ್ಟುವ ತಂತ್ರಜ್ಞಾನವನ್ನು ಭಾರತಕ್ಕೆ ಪರಿಚಯಿಸಿದ್ದು. ಹಾಗಾಗಿ ಈ ವಾಸ್ತು ಶೈಲಿಗೆ ಇಂಡೋ-ಇಸ್ಲಾಮಿಕ್ ಶೈಲಿ ಎಂದೇ ಕರೆಯುತ್ತಾರೆ.

ಆದುದರಿಂದ ಡೋಮ್/ಗುಂಬಜ್‌ನಂತೆ ‘ಕಮಾನು’ ಸಹ ಹಿಂದುತ್ವ ಸಂಸದರಿಗೆ ವರ್ಜ್ಯ ಆಗಬೇಕು ತಾನೇ? ಸಿಖ್ ಧರ್ಮದವರ ಅತ್ಯಂತ ಪವಿತ್ರ ಗುರುದ್ವಾರವಾದ ಸ್ವರ್ಣ ಮಂದಿರ ಸಹಿತ ಎಲ್ಲಾ ಗುರುದ್ವಾರಗಳೂ ಗುಂಬಜ್ ಹೊಂದಿವೆ. ಕೇವಲ ನಾಗರ, ದ್ರಾವಿಡ ಮತ್ತು ವೇಸರ ಶೈಲಿ ಮಾತ್ರ ಶುದ್ಧ ಭಾರತೀಯ ಶೈಲಿ. ಇಂಡೋ-ಸರಸೆನಿಕ್ ಮತ್ತು ಗೋತಿಕ್ ಶೈಲಿ ಭಾರತಕ್ಕೆ ಬಂದಿದ್ದು ಬ್ರಿಟಿಷರ ಕಾಲದಲ್ಲಿ. ಇದನ್ನು ಕೂಡಾ ಕ್ರೈಸ್ತರ ಮತಾಂತರಿ ವಾಸ್ತು ಶೈಲಿ ಅನ್ನಬಹುದೇ? (ಸರಸೆನಿಕ್ ಅಂದರೆ ಕೂಡಾ ಅರೇಬಿಕ್ ಅಥವಾ ಇಸ್ಲಾಮಿಕ್ ಎಂದೇ ನಿಘಂಟಿನಲ್ಲಿ ಅರ್ಥವಿದೆ). ಹಾಗಾದರೆ ಇಂಡೋ ಸರಸೆನಿಕ್ ಮತ್ತು ಗೋತಿಕ್ ಶೈಲಿಯಲ್ಲಿರುವ ನಮ್ಮ ಮೈಸೂರು ಅರಮನೆ ಹಾಗೂ ವಿಧಾನ ಸೌಧ ಕಂಡರೂ ಹಿಂದುತ್ವವಾದಿಗಳಿಗೆ ಅಲರ್ಜಿ ಆಗಬೇಕು ಅಲ್ಲವೇ? ಇಡೀ ಜಗತ್ತೇ ಈಗ ಒಂದು ಹಳ್ಳಿ ಆಗಿರುವಾಗ ಕಟ್ಟಡಗಳ ಸೌಂದರ್ಯ ಹೆಚ್ಚಿಸುವ ವಾಸ್ತು ಶೈಲಿಗಳಲ್ಲಿ ಅದು ಆ ಧರ್ಮದ್ದು ಇದು ಈ ಧರ್ಮದ್ದು ಎಂಬ ಅಡ್ಡ ಗೋಡೆ ಬೇಕೆ?
 

share
-ಪ್ರವೀಣ್ ಎಸ್. ಶೆಟ್ಟಿ, ಬೋಳೂರು, ಮಂಗಳೂರು
-ಪ್ರವೀಣ್ ಎಸ್. ಶೆಟ್ಟಿ, ಬೋಳೂರು, ಮಂಗಳೂರು
Next Story
X