ರಾಯಚೂರು: ರಾಜ್ಯಸಭೆ ಮಾಜಿ ಸದಸ್ಯ ಅಬ್ದುಲ್ ಸಮದ್ ಸಿದ್ದೀಕಿ ನಿಧನ
ಹೊಸದಿಲ್ಲಿ: ರಾಜ್ಯಸಭಾ ಮಾಜಿ ಸದಸ್ಯ, ರಾಯಚೂರಿನ ಅಬ್ದುಲ್ ಸಮದ್ ಸಿದ್ದೀಕಿ (Abdul Samad Siddiqui ) ಅವರು ಅನಾರೋಗ್ಯದಿಂದ ಸೋಮವಾರ ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಶಿಕ್ಷಣ ತಜ್ಞರಾಗಿರುವ ಸಿದ್ದೀಕಿ 1988 ರಿಂದ 1994ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದರು. ನ್ಯೂ ಎಜ್ಯುಕೇಶನ್ ಸೊಸೈಟಿ, ಮಿಲ್ಲತ್ ಎಜ್ಯುಕೇಶನ್ ಸೊಸೈಟಿ ಹಾಗೂ ಇತರ ಹಲವು ಸಂಘ ಸಂಸ್ಥೆಗಳನ್ನು ಇವರು ತಮ್ಮ ಹುಟ್ಟೂರಾದ ರಾಯಚೂರಿನಲ್ಲಿ ಕಟ್ಟಿ ಬೆಳೆಸಿದ್ದರು.
ಬಳಿಕ ಜನತಾ ದಳದಲ್ಲಿ ವಿಲೀನವಾದ ಹಿಂದಿನ ಜನತಾ ಪಕ್ಷದಿಂದ ಅವರು ರಾಜಕೀಯ ವೃತ್ತಿ ಆರಂಭಿಸಿದ್ದರು. ಜನತಾ ದಳದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು.
ಜನತಾದಳ ವಿಭಜನೆ ಬಳಿಕ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಜತೆ ಸೇರಿ ಲೋಕಜನಶಕ್ತಿ ಪಕ್ಷವನ್ನು ಕಟ್ಟಿ ಬೆಳೆಸಿದರು. ಆರಂಭದಿಂದ ಈ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅವರು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.
Next Story