SJM ದಾವಣಗೆರೆ ಜಿಲ್ಲಾ ಮಟ್ಟದ ಪ್ರತಿಭಾ ಸಂಗಮ: ಹಡಗಲಿ ಚಾಂಪಿಯನ್, ಹರಿಹರ ರನ್ನರ್ಸ್ ಅಪ್
![SJM ದಾವಣಗೆರೆ ಜಿಲ್ಲಾ ಮಟ್ಟದ ಪ್ರತಿಭಾ ಸಂಗಮ: ಹಡಗಲಿ ಚಾಂಪಿಯನ್, ಹರಿಹರ ರನ್ನರ್ಸ್ ಅಪ್ SJM ದಾವಣಗೆರೆ ಜಿಲ್ಲಾ ಮಟ್ಟದ ಪ್ರತಿಭಾ ಸಂಗಮ: ಹಡಗಲಿ ಚಾಂಪಿಯನ್, ಹರಿಹರ ರನ್ನರ್ಸ್ ಅಪ್](https://www.varthabharati.in/sites/default/files/images/articles/2022/11/22/357282-1669110673.jpeg)
ದಾವಣಗೆರೆ: "ಭರವಸೆಯ ಚಿಗುರು" ಎಂಬ ಧ್ಯೇಯ ವಾಕ್ಯದೊಂದಿಗೆ ನಡೆದ ಎಸ್.ಜೆ.ಎಮ್ ಪ್ರತಿಭಾ ಸಂಗಮ ಇದರ ದಾವಣಗೆರೆ ಸಂಯುಕ್ತ ರೇಂಜ್ ಸಮಿತಿಗಳ ಜಿಲ್ಲಾ ಮಟ್ಟದ ಪ್ರತಿಭಾ ಸಂಗಮ ದಿನಾಂಕ 20 ಆದಿತ್ಯವಾರ ರಾತ್ರಿ ದಾವಣಗೆರೆ ಪಟ್ಟಣದಲ್ಲಿ ಕಾರ್ಯಾಚರಿಸುತ್ತಿರುವ ಯುನೈಟೆಡ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಪ್ರೌಢ ಸಮಾಪ್ತಿ ಪಡೆಯಿತು. ಬೆಳಗ್ಗೆ ಸಯ್ಯಿದ್ ತ್ವಾಹಾ ಹಿಮಮಿ ಸಖಾಫಿ ತಂಙಲ್ ದಾವಣಗೆರೆ ರವರ ಪ್ರಾರ್ಥನೆಯಿಂದ ಆರಂಭವಾದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ನಾಯಕರಾದ ಕೆ.ಕೆ ಸಖಾಫಿ ಚೆರಿಯ ಎ.ಪಿ ಉಸ್ತಾದರ ಅನುಸ್ಮರಣಾ ಭಾಷಣ ಮಾಡಿ ಕಲಾ ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ಪ್ರಧಾನ ಕಾರ್ಯದರ್ಶಿ ಯಾಸಿನ್ ಸಖಾಫಿ ಸ್ವಾಗತ ಭಾಷಣ ಮಾಡಿದರು.
ಐದು ರೇಂಜ್'ಗಳ ಒಂಭತ್ತು ಜಿಲ್ಲೆಗಳಿಂದ ಸುಮಾರು ನೂರ ಎಪ್ಪತ್ತಕ್ಕೂ ಮಿಕ್ಕ ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು. ವೇದಿಕೆ ಮತ್ತು ವೇದಿಕೆಯೇತರ ಸ್ಪರ್ಧಾ ಕಾರ್ಯಕ್ರಮಗಳಾಗಿ ಸುಮಾರು ಎಪ್ಪತ್ತೈದಕ್ಕೂ ಹೆಚ್ಚು ಸ್ಪರ್ಧೆಗಳು ನಡೆಯಿತು. ಕನ್ನಡ, ಉರ್ದು, ಇಂಗ್ಲಿಷ್, ಅರಬಿ ಸೇರಿ ನಾಲ್ಕು ಭಾಷೆಗಳ ಭಾಷಣ, ಉರ್ದು, ಕನ್ನಡ ಹಾಡು, ಸಯನ್ಸ್ ಮೋಡೆಲ್, ಬುರ್ದಾ, ಕವಾಲಿ ಮುಂತಾದ ವೈವಿಧ್ಯಮಯ ಆಕರ್ಷಣೀಯ ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸಿತು. ಮೂರು ವೇದಿಕೆಗಳಲ್ಲಿ ನಡೆದ ಈ ಕಲಾ ಕಾರ್ಯಕ್ರಮಕ್ಕೆ ವಿಭಿನ್ನ ಕಡೆಗಳ ತೀರ್ಪುಗಾರರು ಹಾಜರಾಗಿದ್ದರು. SJM, SSF, SYS ಸೇರಿ ವಿವಿಧ ಸುನ್ನಿ ಉಲಮಾ ಸಂಘಟನೆಯ ಹಲವಾರು ಉಲಮಾ ಶಿರೋಮಣಿಗಳು, ಹಲವಾರು ಧನ್ಯ ವ್ಯಕ್ತಿತ್ವಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ತ್ವಾಹಾ ತಂಙಲ್ ಪ್ರಾರ್ಥಿಸಿ ಕೆ.ಕೆ ಅಶ್ರಫ್ ಸಖಾಫಿ ಸ್ವಾಗತಿಸಿದರು. ಅಲ್ತಾಫ್ ಅಸ್ಸ'ಅದಿ ಉದ್ಘಾಟಿಸಿದರು. ತರುವಾಯ ಪ್ರತಿಭಾ ಸಂಗಮದಲ್ಲಿ ಪ್ರಥಮ, ದ್ವಿತೀಯ ಬಹುಮಾನ ಪಡೆದ ಸ್ಪರ್ಧಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಉಳಿದ ಎಲ್ಲಾ ಸ್ಪರ್ಧಾರ್ಥಿಗಳಿಗೂ ಆಯಾ ರೇಂಜ್ ನಾಯಕರ ಕೈಯಲ್ಲಿ ಬಹುಮಾನ ನೀಡಲಾಯಿತು. ಸಬ್ ಜೂನಿಯರ್, ಜೂನಿಯರ್, ಸೀನಿಯರ್, ಜನರಲ್ ವಿಭಾಗದಲ್ಲಿ ಗರಿಷ್ಠ ಅಂಕ ಪಡೆದು ವೈಯಕ್ತಿಕ ಚಾಂಪಿಯನ್ ಪಡೆದ ಸ್ಪರ್ಧಾರ್ಥಿಗಳಿಗೆ ಟ್ರೋಫಿ ವಿತರಿಸಲಾಯಿತು. ಕೊನೆಗೆ ಚಾಂಪಿಯನ್, ರನ್ನರ್ ಆಫ್ ರೇಂಜನ್ನು ಘೋಷಿಸಲಾಯಿತು. ಐದು ಬೃಹತ್ ರೇಂಜ್'ಗಳ ಪ್ರತಿಭಾ ಸಂಗಮದಲ್ಲಿ ಹಡಗಲಿ ರೇಂಜ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಹರಿಹರ ರೇಂಜ್ ದ್ವಿತೀಯ, ಗದಗ ರೇಂಜ್ ತೃತೀಯ ಸ್ಥಾನ ಪಡೆಯಿತು.
ಈ ಕಾರ್ಯಕ್ರಮದ ಯಶಸ್ವಿಗಾಗಿ ದಾವಣಗೆರೆ SJM ಜಿಲ್ಲಾ ನಾಯಕರು, ಸ್ಥಳಾವಕಾಶ ಮಾಡಿಕೊಟ್ಟ ಶಾಲಾ ಸಮಿತಿ, ಪದಾಧಿಕಾರಿಗಳು, ಸಿದ್ದೀಕ್ ಸಖಾಫಿ, ಮುಸ್ತಫ ಸಅದಿ ಬದ್ರುದ್ದೀನ್ ಸಖಾಫಿ, ಕೆಕೆ ಅಶ್ರಫ್ ಸಖಾಫಿ, ಶೆರೀಫ್ ಸಖಾಫಿ, ಯಾಸೀನ್ ಸಖಾಫಿ, ಸಿನಾನ್ ಹಿಮಮಿ, ಅಸ್ರಾರ್ ಖಾದ್ರಿ ಶ್ರಮಿಸಿದ್ದಾರೆ