ಬಾರ್ ಮ್ಯಾನೇಜರ್ಗೆ ಜೀವ ಬೆದರಿಕೆ: ದೂರು ದಾಖಲು

ಮಂಗಳೂರು: ನಗರ ಹೊರವಲಯದ ವಾಮಂಜೂರಿನ ಬಾರ್ ಆ್ಯಂಡ್ ರೆಸ್ಟೋರೆಂಟ್ಗೆ ನುಗ್ಗಿದ ವ್ಯಕ್ತಿಯೊಬ್ಬ ಮದ್ಯ ನೀಡಲಿಲ್ಲ ಎಂಬ ಕಾರಣಕ್ಕೆ ಬಾರ್ ಮ್ಯಾನೇಜರ್ಗೆ ಜೀವ ಬೆದರಿಕೆ ಹಾಕಿದ ಘಟನೆ ಸೋಮವಾರ ನಡೆದಿರುವುದಾಗಿ ವರದಿಯಾಗಿದೆ.
ವಾಮಂಜೂರು ನಿವಾಸಿ ಲಾಯ್ಡ್ ಈ ಪ್ರಕರಣದ ಆರೋಪಿಯಾಗಿದ್ದಾನೆ.
ಸೋಮವಾರ ರಾತ್ರಿ ಮ್ಯಾನೇಜರ್ ಬಾರ್ ಆ್ಯಂಡ್ ರೆಸ್ಟೋರೆಂಟ್ನ ಶಟರನ್ನು ಎಳೆದು ಲೆಕ್ಕಚಾರ ನೋಡುತ್ತಿರುವಾಗ ಗಿರಾಕಿ ಲಾಯ್ಡ್ ಎಂಬಾತ ಸ್ಕೂಟರ್ನಲ್ಲಿ ಆಗಮಿಸಿ ಬಾರ್ನ ಒಳಗೆ ಅಕ್ರಮವಾಗಿ ಪ್ರವೇಶಗೈದು ಮದ್ಯ ಕೊಡಬೇಕು ಎಂದು ಒತ್ತಾಯಿಸಿದ ಎನ್ನಲಾಗಿದೆ. ಈ ವೇಳೆ ಬಾರ್ ಕೌಂಟರ್ ಈಗಾಗಲೇ ಬಂದ್ ಆಗಿದೆ, ಮದ್ಯ ಕೊಡಲಾಗುವುದಿಲ್ಲ ಎಂದು ಮ್ಯಾನೇಜರ್ ಹೇಳಿದಾಗ ಕುಪಿತಗೊಂಡ ಆರೋಪಿ ಲಾಯ್ಡ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story