Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಜಮ್ಮು ಗಡಿಯಲ್ಲಿ ಒಳನುಸುಳುವ ಪ್ರಯತ್ನ...

ಜಮ್ಮು ಗಡಿಯಲ್ಲಿ ಒಳನುಸುಳುವ ಪ್ರಯತ್ನ ಬಿಎಸ್ಎಫ್ ನಿಂದ ವಿಫಲ: ಓರ್ವನ ಹತ್ಯೆ, ಇನ್ನೋರ್ವನ ಬಂಧನ

22 Nov 2022 10:06 PM IST
share
ಜಮ್ಮು ಗಡಿಯಲ್ಲಿ ಒಳನುಸುಳುವ  ಪ್ರಯತ್ನ ಬಿಎಸ್ಎಫ್ ನಿಂದ ವಿಫಲ: ಓರ್ವನ ಹತ್ಯೆ, ಇನ್ನೋರ್ವನ ಬಂಧನ

ಜಮ್ಮು, ನ. 22: ಜಮ್ಮು ಮುಂಚೂಣಿಯ ಅಂತರ ರಾಷ್ಟ್ರೀಯ ಗಡಿ (ಐಬಿ)ಯಲ್ಲಿ  ಮಂಗಳವಾರ ಮುಂಜಾನೆ ಎರಡು ಒಳ ನುಸುಳುವ ಪ್ರಯತ್ನವನ್ನು ವಿಫಲಗೊಳಿಸಿರುವ ಗಡಿ ಭದ್ರತಾ ಪಡೆ (ಬಿಎಸ್ಎಫ್) ಓರ್ವ ಒಳನುಸುಳುಕೋರನನ್ನು ಹತ್ಯೆಗೈದಿದೆ ಹಾಗೂ ಇನ್ನೋರ್ವನನ್ನು ಬಂಧಿಸಿದೆ.

‘‘ಮಂಗಳವಾರ ಮುಂಜಾನೆ 2.30ಕ್ಕೆ ಅರ್ನಿಯಾ (Arnia)ವಲಯದ ಅಂತರ ರಾಷ್ಟ್ರೀಯ ಗಡಿಯ ಸಮೀಪ ಒಳ ನುಸುಳುಕೋರನ ಅನುಮಾನಾಸ್ಪದ ಚಲನವಲನವನ್ನು ಬಿಎಸ್ಎಫ್(BSF) ಗಮನಿಸಿತು. ಅಂತರ ರಾಷ್ಟ್ರೀಯ ಗಡಿಯಲ್ಲಿ ಒಳನುಸುಳುಕೋರನೋರ್ವ ಭಾರತ ಭಾಗಕ್ಕೆ ದಾಟಿದ ಹಾಗೂ ಬೇಲಿಯತ್ತ ಧಾವಿಸಲು ಆರಂಭಿಸಿದ’’ ಎಂದು ಜಮ್ಮು ಮುಂಚೂಣಿಯ ಬಿಎಸ್ಎಫ್ ನ ಜನರಲ್ ಇನ್ಸ್ಪೆಕ್ಟರ್ ಡಿ.ಕೆ. ಬೂರಾ (D.K. Boora)ಅವರು ಬಿಎಸ್ಎಫ್ ನ ಇಲ್ಲಿನ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಮುಂದೆ ಬರದಂತೆ ಒಳನುಸುಳುಕೋರನಿಗೆ ಬಿಎಸ್ಎಫ್ ಹಲವು ಬಾರಿ ಎಚ್ಚರಿಸಿತ್ತು. ಆದರೆ, ಅವರು ಯಾವುದೇ ಗಮನ ನೀಡಲಿಲ್ಲ. ಬದಲು ಆಕ್ರಮಣಕಾರಿಯಾಗಿ ಬೇಲಿಯತ್ತ ಆಗಮಿಸಿದ. ಈ ಹಿನ್ನೆಲೆಯಲ್ಲಿ  ಬಿಎಸ್ಫ್ ಯೋಧರು ಗುಂಡು ಹಾರಿಸಿ ಓರ್ವ ಒಳನುಸುಳುಕೋರನನ್ನು   ಹತ್ಯೆಗೈದರು  ಹಾಗೂ ಒಳ ನುಸುಳುವ ಪ್ರಯತ್ನವನ್ನು ವಿಫಲಗೊಳಿಸಿದರು.

ಎರಡನೇ ಘಟನೆಯಲ್ಲಿ ಇಂದ್ರೇಶ್ವರ ನಗರದಲ್ಲಿ ಮುಂಜಾನೆ 4.30ರ ಹೊತ್ತಿಗೆ ಅಂತರ ರಾಷ್ಟ್ರೀಯ ಗಡಿಯಲ್ಲಿ ಸಂದೇಹಾಸ್ಪದ ಚಲನವಲನವನ್ನು   ಬಿಎಸ್ಎಫ್ ಗಮನಿಸಿತು.

‘‘ಈ ಪ್ರಕರಣದಲ್ಲಿ ಒಳನುಸುಳುಕೋರ ಅಂತರ ರಾಷ್ಟ್ರೀಯ ಗಡಿಯ ಒಳಗೆ ನುಸುಳಲು ಪ್ರಯತ್ನಿಸಿದ. ಗಡಿ ಬೇಲಿಯ ಸಮೀಪ ಆಗಮಿಸಿದ. ತತ್ಕ್ಷಣ  ಬಿಎಸ್ಎಫ್ ಯೋಧರು ದಾಳಿ ನಡೆಸಲು ಸಿದ್ಧರಾದರು. ಕೂಡಲೇ ಆತ ಶರಣಾಗತನಾಗಲು ಕೈಗಳನ್ನು ಮೇಲಕ್ಕೆತ್ತಿದ. ಆತನನ್ನು ಬಿಎಸ್ಎಫ್ ಯೋಧರು ಸೆರೆ ಹಿಡಿದರು’’ ಎಂದು ಅವರು ತಿಳಿಸಿದ್ದಾರೆ.

ಗಡಿಯಾಚೆಯಿಂದ ಮಾರ್ಗದರ್ಶಕರನ್ನು ಕಳುಹಿಸುವ ಮೂಲಕ ಭಾರತದ ಭೂಭಾಗಕ್ಕೆ ಭಯೋತ್ಪಾದಕರು ಪ್ರವೇಶಿಸಬಹುದೇ ಎಂಬುದನ್ನು ತಿಳಿಯಲು ಅವರು ಪ್ರಯತ್ನಿಸುತ್ತಲೇ ಇರುತ್ತಾರೆ. ಆದರೆ, ನಾವು ಯಾವುದೇ ಒಳ ನುಸುಳುವಿಕೆಗೆ ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಗಡಿ ಸುರಕ್ಷೆಗೆ ಬಿಎಸ್ಎಫ್ ಬದ್ಧವಾಗಿದೆ. ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗುವ ಶತ್ರುಗಳನ್ನು ನಾವು ಸೋಲಿಸಲಿದ್ದೇವೆ ಎಂದು ಬೂರಾ ಅವರು ಹೇಳಿದ್ದಾರೆ.

share
Next Story
X