ಗಡಿ ವಿವಾದ: ಕರ್ನಾಟಕದ ಬಸ್ಸಿಗೆ ಕಪ್ಪುಮಸಿ ಬಳಿದ ಮರಾಠ ಸಂಘದ ಕಾರ್ಯಕರ್ತರು
![ಗಡಿ ವಿವಾದ: ಕರ್ನಾಟಕದ ಬಸ್ಸಿಗೆ ಕಪ್ಪುಮಸಿ ಬಳಿದ ಮರಾಠ ಸಂಘದ ಕಾರ್ಯಕರ್ತರು ಗಡಿ ವಿವಾದ: ಕರ್ನಾಟಕದ ಬಸ್ಸಿಗೆ ಕಪ್ಪುಮಸಿ ಬಳಿದ ಮರಾಠ ಸಂಘದ ಕಾರ್ಯಕರ್ತರು](https://www.varthabharati.in/sites/default/files/images/articles/2022/11/25/357656-1669358311.jpg)
ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್ಗೆ ಕಪ್ಪು ಮಸಿ ಬಳಿದು ಕೆಲವು ಮರಾಠಿ ಭಾಷಿಕರು ಮತ್ತೆ ತಮ್ಮ ಪುಂಡಾಟಿಕೆ ಮುಂದುವರಿಸಿದ್ದಾರೆ.
ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ದೌಂಡ್ ಗ್ರಾಮದಲ್ಲಿ ನಿಪ್ಪಾಣಿ ಘಟಕಕ್ಕೆ ಸೇರಿದ ಕೆಎಸ್ಆರ್ಟಿಸಿ ಬಸ್ಸಿಗೆ ಅಖಿಲ ಭಾರತೀಯ ಮರಾಠಾ ಸಂಘದ ಕಾರ್ಯಕರ್ತರಿಂದ ಮಸಿ ಬಳಿದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜತ್ತ ತಾಲೂಕಿನ 40 ಗ್ರಾಮ ಕರ್ನಾಟಕಕ್ಕೆ ಸೇರಬೇಕೆಂದು ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಅಖಿಲ ಭಾರತೀಯ ಮರಾಠಾ ಸಂಘದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಕರುನಾಡಿನ ಬಸ್ಸಿನ ಮೇಲೆ ಜೈ ಮಹಾರಾಷ್ಟ್ರ ಎಂದು ಬರವಣಿಗೆ ಬರೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಳಗಾವಿ, ನಿಪ್ಪಾಣಿ, ಖಾನಾಪುರ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಮರಾಠಾ ಸಂಘದ ಕಾರ್ಯಕರ್ತರಉ ಘೋಷಣೆ ಕೂಗಿದರು.
![](https://www.varthabharati.in/sites/default/files/images/galllery/2022/11/25/05.jpg)
Next Story