ಉಡುಪಿ: ನ.27ರಂದು ಜಯಂಟ್ಸ್ ಮಾಜಿ ಅಧ್ಯಕ್ಷರ ಸಮ್ಮಿಲನ ಕಾರ್ಯಕ್ರಮ
ಉಡುಪಿ, ನ.25: ಜಯಂಟ್ಸ್ ವೆಲ್ಫೇರ್ ಪೌಂಡೇಶನ್ ವತಿಯಿಂದ ಉಡುಪಿ ಜಯಂಟ್ಸ್ ಗ್ರೂಪ್ ಆತಿಥ್ಯದಲ್ಲಿ ಮಾಜಿ ಅಧ್ಯಕ್ಷರ ಸಮ್ಮಿಲನ ಕಾರ್ಯಕ್ರಮ ವನ್ನು ನ.27ರಂದು ಬೆಳಗ್ಗೆ 9:30ಕ್ಕೆ ಉಡುಪಿಯ ಹೊಟೇಲ್ ವುಡ್ಲ್ಯಾಂಡ್ ನಲ್ಲಿ ಆಯೋಜಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ಜಯಂಟ್ಸ್ ವೆಲ್ಫೇರ್ ಫೌಂಡೇಶನ್ನ ಡೆಪ್ಯುಟಿ ವರ್ಲ್ಡ್ ಚೇಯರ್ಮೆನ್ ಎಂ.ಲಕ್ಷ್ಮಣನ್, ಸೆಂಟ್ರಲ್ ಕಮಿಟಿ ಸದಸ್ಯ ದಿನಕರ್ ಕೆ.ಅಮೀನ್ ಭಾಗವಹಿಸಲಿರುವರು. ಜಯಂಟ್ಸ್ ವೆಲ್ಪೇರ್ ಫೌಂಡೇಶ್ ವಿಶೇಷ ಕಮಿಟಿ ಸದಸ್ಯರಾದ ಜಿ.ಎಸ್.ನಾಕ್, ಮೋಹನ್ ಕರ್ಕೇರ, ಜಯಂಟ್ಸ್ ವೆಲ್ಫೇರ್ ಫೌಂಡೇಶನ್ ಅಧ್ಯಕ್ಷ ತಾರದೇವಿ ವಾಲಿ ಗೌರವ ಉಪಸ್ಥಿತಲಿರುವರು ಎಂದು ಜಯಂಟ್ಸ್ ಉಡುಪಿ ಅಧ್ಯಕ್ಷ ಎಂ.ಇಕ್ಬಾಲ್ ಮನ್ನಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





