ಕರಾವಳಿ ಜನರ ಕಿವಿ ಮೇಲೆ ಹೂವು ಇಡಲು ಹೊರಟ ಬಿಜೆಪಿಗೆ ಜನರಿಂದ ತಕ್ಕ ಪಾಠ: ಕಾಂಗ್ರೆಸ್ ಎಚ್ಚರಿಕೆ
''ಸುರತ್ಕಲ್ ಟೋಲ್ ರದ್ದು ಎನ್ನುವುದು BJP ಮಾಡಿದ ಶತಮಾನದ ಜೋಕ್''
ಬೆಂಗಳೂರು: ನ.25: ಸುರತ್ಕಲ್ ಟೋಲ್ ಗೇಟ್ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಸುರತ್ಕಲ್ ಟೋಲ್ ರದ್ದು ಎನ್ನುವುದು ಬಿಜೆಪಿ ಮಾಡಿದ ಶತಮಾನದ ಜೋಕ್' ಎಂದು ವ್ಯಂಗ್ಯವಾಡಿದೆ.
''ಸುರತ್ಕಲ್ ನಲ್ಲಿ ಸಂಗ್ರಹಿಸುವ ಟೋಲ್ ಮೊತ್ತವನ್ನು 4 ಕಿ.ಮಿ ದೂರದ ಹೆಜಮಾಡಿ ಟೋಲ್ ಗೆ ವರ್ಗಾಯಿಸಿದ್ದು ಜೋಕ್ ಅಲ್ಲದೆ ಇನ್ನೇನು? ಕರಾವಳಿ ಜನರ ಕಿವಿ ಮೇಲೆ ಹೂವು ಇಡಲು ಹೊರಟಿರುವ ಬಿಜೆಪಿಗೆ ಜನತೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಎಂದು ಕಾಂಗ್ರೆಸ್ ಎಚ್ಚರಿಸಿದೆ.
''ಜಿಲ್ಲೆಯ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ ಅವರನ್ನು ಪ್ರಶ್ನಿಸಿರುವ ಕಾಂಗ್ರೆಸ್, ಸುರತ್ಕಲ್ ಟೋಲ್ ಗೇಟನ್ನು ಮಾತ್ರ ರದ್ದುಗೊಳಿಸಿ ಆ ಮೊತ್ತವನ್ನು ಹೆಜಮಾಡಿಯಲ್ಲಿ ಸಂಗ್ರಹಿಸುವುದಕ್ಕೆ ಮೋದಿಯವರಿಗೆ ಧನ್ಯವಾದ ತಿಳಿಸಿದಿರಾ?'' ಎಂದು ಟ್ವೀಟ್ ಮಾಡಿದೆ.
ಸೂರತ್ಕಲ್ ಟೋಲ್ ರದ್ದು ಎನ್ನುವುದು ಬಿಜೆಪಿ ಮಾಡಿದ ಶತಮಾನದ ಜೋಕ್!
— Karnataka Congress (@INCKarnataka) November 25, 2022
ಸೂರತ್ಕಲ್ನಲ್ಲಿ ಸಂಗ್ರಹಿಸುವ ಟೋಲ್ ಮೊತ್ತವನ್ನು 4 ಕಿ.ಮಿ ದೂರದ ಹೆಜಮಾಡಿ ಟೋಲ್ಗೆ ವರ್ಗಾಯಿಸಿದ್ದು ಜೋಕ್ ಅಲ್ಲದೆ ಇನ್ನೇನು @nalinkateel ಅವರೇ?
ಕರಾವಳಿ ಜನರ ಕಿವಿ ಮೇಲೆ ಹೂವು ಇಡಲು ಹೊರಟಿರುವ ಬಿಜೆಪಿಗೆ ಜನತೆ ತಕ್ಕ ಪಾಠ ಕಲಿಸುವುದು ನಿಶ್ಚಿತ.