ಹಿಂದುತ್ವ ಬಿಟ್ಟು 'ಬಸವ ತತ್ವ' ಕ್ಕೆ ಬಂದರೆ ಯತ್ನಾಳ್ ಅಂದೇ ಮುಖ್ಯಮಂತ್ರಿ: ಸಿ.ಎಂ. ಇಬ್ರಾಹೀಂ
ವಿಜಯಪುರ, ನ.27: ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ‘ಹಿಂದುತ್ವ’ ಬಿಟ್ಟು ‘ಬಸವ ತತ್ವ’ಕ್ಕೆ ಯಾವಾಗ ಬರುತ್ತಾರೋ ಅಂದೇ ಅವರು ರಾಜ್ಯದ ಸಿಎಂ ಆಗಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹೀಂ ಭವಿಷ್ಯ ನುಡಿದಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಯತ್ನಾಳ್ ಅವರೇ ನೀವು ಬಸವಣ್ಣನವರ ಹುಟ್ಟಿದ ಭೂಮಿಯಲ್ಲಿ ಹುಟ್ಟಿದೀರಿ. ಹೀಗಾಗಿ ಹಿಂದುತ್ವ ಬಿಟ್ಟು ಬಸವತತ್ವಕ್ಕೆ ಬನ್ನಿ. ನೀವು ಮುಖ್ಯಮಂತ್ರಿ ಆಗುವ ಸರಕು. ಚಿಲ್ಲರೆ ಆಗಲು ಹೋಗಬೇಡಿ’ ಎಂದು ತಮ್ಮದೆ ದಾಟಿಯಲ್ಲಿ ತಿರುಗೇಟು ನೀಡಿದರು.
ಅಭ್ಯರ್ಥಿಗಳ ಪಟ್ಟಿ ಸಿದ್ಧ: ‘2023ರ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. 70ರಿಂದ 80 ಮಂದಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಾಗಿದೆ. ಆದರೆ, ನಮ್ಮ ಗುರುಗಳಾದ ಎಚ್.ಡಿ. ರೇವಣ್ಣ ಪಟ್ಟಿ ಬಿಡುಗಡೆಗೆ ಕಾಲ ನೋಡಿ ಹೇಳಬೇಕಿದೆ. ಮುಂದಿನ ಅವಧಿಗೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ನಿಶ್ಚಿತ’ ಎಂದು ನುಡಿದರು.
Next Story