Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಹೆಚ್ಚು ಇಲೆಕ್ಟೋರಲ್ ಬಾಂಡ್‍ಗಳ ಮಾರಾಟ...

ಹೆಚ್ಚು ಇಲೆಕ್ಟೋರಲ್ ಬಾಂಡ್‍ಗಳ ಮಾರಾಟ ಮುಂಬೈಯಲ್ಲಿ; ಗರಿಷ್ಠ ನಗದೀಕರಣ ಎಸ್‍ಬಿಐ ನ ಹೊಸದಿಲ್ಲಿ ಶಾಖೆಯಲ್ಲಿ

ಆರ್‌ಟಿಐ ಉತ್ತರದಿಂದ ಬಹಿರಂಗ

29 Nov 2022 12:57 PM IST
share
ಹೆಚ್ಚು ಇಲೆಕ್ಟೋರಲ್ ಬಾಂಡ್‍ಗಳ ಮಾರಾಟ ಮುಂಬೈಯಲ್ಲಿ; ಗರಿಷ್ಠ ನಗದೀಕರಣ ಎಸ್‍ಬಿಐ ನ ಹೊಸದಿಲ್ಲಿ ಶಾಖೆಯಲ್ಲಿ
ಆರ್‌ಟಿಐ ಉತ್ತರದಿಂದ ಬಹಿರಂಗ

ಹೊಸದಿಲ್ಲಿ: ಇಲೆಕ್ಟೋರಲ್ ಬಾಂಡ್ ಯೋಜನೆ 2018 ರಲ್ಲಿ ಜಾರಿಯಾದಂದಿನಿಂದ  ಇತ್ತೀಚಿಗಿನ ತನಕ (ಅಂದರೆ ಅಂಕಿಅಂಶ ಲಭ್ಯವಿರುವ ಅಕ್ಟೋಬರ್ 10, 2022) ಶೇ 65 ರಷ್ಟು ಬಾಂಡ್‍ಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಂಬೈ, ಕೊಲ್ಕತ್ತಾ ಮತ್ತು ಹೈದರಾಬಾದ್ ಶಾಖೆಗಳಲ್ಲಿ ಮಾರಾಟವಾಗಿದ್ದರೆ, ಈ ಒಟ್ಟು ಮಾರಾಟವಾದ ಬಾಂಡ್‍ಗಳ ಪೈಕಿ ಶೇ 62 ರಷ್ಟು ಬಾಂಡ್‍ಗಳನ್ನು ಬ್ಯಾಂಕಿನ ಹೊಸದಿಲ್ಲಿ ಶಾಖೆಯಲ್ಲಿ ನಗದೀಕರಿಸಲಾಗಿತ್ತು ಎಂದು  ಎಸ್‍ಬಿಐ ಒದಗಿಸಿದ ಆರ್‍ಟಿಐ ಉತ್ತರವೊಂದರಿಂದ ತಿಳಿದು ಬಂದಿದೆ. 

2018 ರಿಂದೀಚೆಗೆ ರೂ 10,791.47 ಕೋಟಿ ಮೌಲ್ಯದ ಬಾಂಡ್‍ಗಳನ್ನು ಎಸ್‍ಬಿಐ ನ 17 ಶಾಖೆಗಳ ಮೂಲಕ ಮಾರಾಟ ಮಾಡಲಾಗಿದೆ. ಬ್ಯಾಂಕಿನ ಒಟ್ಟು 29 ಶಾಖೆಗಳಿಗೆ ಬಾಂಡ್‍ಗಳನ್ನು ಮಾರಾಟ ಮಾಡುವ ಅನುಮತಿಯಿದೆ ಎಂದು ಆರ್‍ಟಿಐ ಉತ್ತರದಲ್ಲಿ ತಿಳಿಸಲಾಗಿದೆ.

ಗರಿಷ್ಠ ಇಲೆಕ್ಟೋರಲ್ ಬಾಂಡ್‍ಗಳು ಮುಂಬೈಯಲ್ಲಿ (ರೂ 2,741.12 ಕೋಟಿ) ಮಾರಾಟವಾಗಿದ್ದರೆ ಕೊಲ್ಕತ್ತಾದಲ್ಲಿ ರೂ 2,387.71 ಕೋಟಿ, ಹೈದರಾಬಾದ್‍ನಲ್ಲಿ ರೂ 1,885.35 ಕೋಟಿ ಮೌಲ್ಯದ ಬಾಂಡ್‍ಗಳು ಮಾರಾಟವಾಗಿವೆ ಎಂದು ಕೊಮ್ಮೊಡೋರ್ (ನಿವೃತ್ತ) ಲೋಕೇಶ್ ಬಾತ್ರ ಅವರಿಗೆ ದೊರೆತ ಆರ್‍ಟಿಐ ಉತ್ತರದಿಂದ ತಿಳಿದು ಬಂದಿದೆ.

ಬ್ಯಾಂಕಿನ ಹೊಸದಿಲ್ಲಿ ಶಾಖೆ ರೂ 1,519.44 ಕೋಟಿ ಮೌಲ್ಯದ ಬಾಂಡ್‍ಗಳನ್ನು ಮಾರಾಟ ಮಾಡಿದ್ದರೆ ಅದು ರೂ 6,748.97 ಕೋಟಿ ಮೌಲ್ಯದ ಬಾಂಡ್‍ಗಳನ್ನು ನಗದೀಕರಿಸಿದೆ. ಹೈದರಾಬಾದ್ ಶಾಖೆ ರೂ 1,384.03 ಕೋಟಿ  ಮೌಲ್ಯದ ಹಾಗೂ ಕೊಲ್ಕತ್ತಾ ಶಾಖೆ ರೂ 1,012.98 ಕೋಟಿ ಮೌಲ್ಯದ ಬಾಂಡ್‍ಗಳನ್ನು ನಗದೀಕರಿಸಿವೆ.

ಇಲ್ಲಿಯ ತನಕ ಎಸ್‍ಬಿಐ ನ 14 ಪ್ರಾದೇಶಿಕ ಶಾಖೆಗಳಲ್ಲಿ ಬಾಂಡ್‍ಗಳನ್ನು ನಗದೀಕರಿಸಲಾಗಿದೆ. ಶ್ರೀನಗರ ಮತ್ತು ಗ್ಯಾಂಕ್ಟಾಕ್ ಶಾಖೆಗಳಲ್ಲಿ ಯಾವುದೇ ಇಲೆಕ್ಟೋರಲ್ ಬಾಂಡ್‍ಗಳ ಮಾರಾಟ ನಡೆಯದೇ ಇದ್ದರೂ ಕ್ರಮವಾಗಿ ರೂ 50 ಲಕ್ಷ ಹಾಗೂ ರೂ 2.5 ಕೋಟಿ ಮೌಲ್ಯದ ಬಾಂಡ್‍ಗಳನ್ನು ಇಲ್ಲಿ ನಗದೀಕರಿಸಲಾಗಿದೆ. ಬಿಜೆಪಿ ಪಕ್ಷವು ಹೆಚ್ಚಿನ ಬಾಂಡ್‌ ಗಳನ್ನು ಹೊಂದಿದೆ. 2019-20 ರಲ್ಲಿ ಬಿಜೆಪಿ ಪಕ್ಷವೊಂದೇ 76% ಎಲೆಕ್ಟಾರಲ್‌ ಬಾಂಡ್‌ ಗಳನ್ನು ಹೊಂದಿತ್ತು.

share
Next Story
X