Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಉಗ್ರವಾದ, ಭೀತಿವಾದ ಇಸ್ಲಾಮ್ ಗೆ...

ಉಗ್ರವಾದ, ಭೀತಿವಾದ ಇಸ್ಲಾಮ್ ಗೆ ವಿರುದ್ಧ: ಎನ್ಎಸ್ಎ ಅಜಿತ ದೋವಲ್

29 Nov 2022 11:20 PM IST
share
ಉಗ್ರವಾದ, ಭೀತಿವಾದ ಇಸ್ಲಾಮ್ ಗೆ ವಿರುದ್ಧ: ಎನ್ಎಸ್ಎ ಅಜಿತ ದೋವಲ್

ಹೊಸದಿಲ್ಲಿ,ನ.29: ಉಗ್ರವಾದ ಮತ್ತು ಭೀತಿವಾದ ಇಸ್ಲಾಮಿನ ಅರ್ಥಕ್ಕೆ ವಿರುದ್ಧವಾಗಿವೆ, ಏಕೆಂದರೆ ಇಸ್ಲಾಮ್ ಶಾಂತಿ (Islam is peace)ಮತ್ತು ಯೋಗಕ್ಷೇಮ(well-being)ದ ಅರ್ಥವನ್ನು ಹೊಂದಿದೆ ಎಂದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ ದೋವಲ್(Ajith Doval) ಅವರು ಮಂಗಳವಾರ ಹೇಳಿದರು.

ಅವರು ಇಲ್ಲಿಯ ಇಸ್ಲಾಮಿಕ್ ಕಲ್ಚರ್ ಸೆಂಟರ್ ನಲ್ಲಿ ಭಾರತ ಮತ್ತು ಇಂಡೋನೇಷ್ಯಾ(Indonesia)ಗಳ ಉಲೇಮಾಗಳ ವಿಶೇಷ ಸಭೆಯಲ್ಲಿ ‘ಭಾರತ ಮತ್ತು ಇಂಡೋನೇಷ್ಯಾಗಳಲ್ಲಿ ಅಂತರಧರ್ಮೀಯ ಶಾಂತಿ ಮತ್ತು ಸಾಮಾಜಿಕ ಸಾಮರಸ್ಯದ ಸಂಸ್ಕೃತಿಯನ್ನು ಬೆಳೆಸುವಲ್ಲಿ ಉಲೇಮಾಗಳ ಪಾತ್ರ’ ಕುರಿತು ಮೊದಲ ಸಂವಾದವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಶಾಂತಿ ಸ್ಥಾಪಿಸುವಲ್ಲಿ ಇಸ್ಲಾಮಿನ ಪ್ರಮುಖ ಪಾತ್ರವನ್ನು ಪ್ರತಿಪಾದಿಸಿದ ದೋವಲ್, ಭಾರತ ಮತ್ತು ಇಂಡೋನೇಷ್ಯಾ  ಭೀತಿವಾದ ಮತ್ತು ಪ್ರತ್ಯೇಕತಾವಾದದ ಬಲಿಪಶುಗಳಾಗಿವೆ ಎಂದು ಒತ್ತಿ ಹೇಳಿದರು. ಗಡಿಯಾಚೆಯ ವಿದ್ಯಮಾನ ಮತ್ತು ಐಸಿಸ್ ಪ್ರೇರಿತ ಭೀತಿವಾದವು ಬೆದರಿಕೆಯನ್ನು ಒಡ್ಡುತ್ತಲೇ ಇದೆ ಎಂದರು.

ಉಗ್ರವಾದ, ಮೂಲಭೂತೀಕರಣ ಮತ್ತು ಧರ್ಮದ ದುರುಪಯೋಗವನ್ನು ಬಳಸಿಕೊಳ್ಳುವ ಉದ್ದೇಶಗಳು ಯಾವುದೇ ಕಾರಣದಿಂದಲೂ ಸಮರ್ಥನೀಯವಲ್ಲ ಎಂದು ಒತ್ತಿ ಹೇಳಿದ ಅವರು,‘ಇದು ಧರ್ಮವನ್ನು ವಿರೂಪಗೊಳಿಸುವ ಕೃತ್ಯವಾಗಿದ್ದು, ಇದರ ವಿರುದ್ಧ ನಾವೆಲ್ಲ ಧ್ವನಿಯೆತ್ತಬೇಕಾದ ಅಗತ್ಯವಿದೆ. ಉಗ್ರವಾದ ಮತ್ತು ಭೀತಿವಾದ ಇಸ್ಲಾಮಿನ ಅರ್ಥಕ್ಕೆ ವಿರುದ್ಧವಾಗಿವೆ,ಏಕೆಂದರೆ ಇಸ್ಲಾಮಿನ ಅರ್ಥ ಶಾಂತಿ ಮತ್ತು ಯೋಗಕ್ಷೇಮ (ಸಲಾಮತಿ/ಅಸಲಾಮ್) ಎಂದಾಗಿದೆ. ಇಂತಹ ಶಕ್ತಿಗಳಿಗೆ ಪ್ರತಿರೋಧವನ್ನು ಯಾವುದೇ ಧರ್ಮದೊಂದಿಗೆ ಸಂಘರ್ಷ ಎಂದು ನೋಡಬಾರದು. ಅದು ಷಡ್ಯಂತ್ರವಾಗಿದೆ. ಬದಲಿಗೆ ಮಾನವೀಯ ಮೌಲ್ಯಗಳು,ಶಾಂತಿ ಮತ್ತು ತಿಳುವಳಿಕೆಯ ದ್ಯೋತಕವಾಗಿರುವ ನಮ್ಮ ಧರ್ಮಗಳ ನಿಜವಾದ ಸಂದೇಶದ ಮೇಲೆ ಗಮನವನ್ನು ಕೇಂದ್ರೀಕರಿಸಬೇಕು ’ ಎಂದರು. 

ನಿಜಕ್ಕೂ ಕುರಾನ್ ಸ್ವತಃ ಬೋಧಿಸುವಂತೆ ಓರ್ವ ವ್ಯಕ್ತಿಯನ್ನು ಕೊಲ್ಲುವುದು ಎಲ್ಲ ಮಾನವೀಯತೆಯನ್ನು ಕೊಂದಂತೆ ಮತ್ತು ಓರ್ವನನ್ನು ರಕ್ಷಿಸುವುದು ಮಾನವೀಯತೆಯ ರಕ್ಷಣೆಗೆ ಸಮನಾಗಿದೆ ಎಂದರು.

ಮೂಲಭೂತೀಕರಣದ ನಿರ್ಮೂಲನಕ್ಕಾಗಿ ಒಂದಾಗಿ ಶ್ರಮಿಸುವ ಅಗತ್ಯವನ್ನು ಒತ್ತಿ ಹೇಳಿದ ದೋವಲ್, ಪ್ರಜಾಪ್ರಭುತ್ವದಲ್ಲಿ ಸಂಕುಚಿತ ಉದ್ದೇಶಗಳಿಗಾಗಿ ದ್ವೇಷಭಾಷಣ, ಪೂರ್ವಾಗ್ರಹ, ಅಪಪ್ರಚಾರ, ರಾಕ್ಷಸೀಕರಣ, ಹಿಂಸೆ, ಸಂಘರ್ಷ ಮತ್ತು ಧರ್ಮದ ದುರುಪಯೋಗಕ್ಕೆ ಅವಕಾಶವಿಲ್ಲ ಎಂದರು.

ಸಂಭಾವ್ಯ ಋಣಾತ್ಮಕ ಪ್ರಭಾವಿಗಳನ್ನು ಗುರುತಿಸುವಲ್ಲಿ ಮತ್ತು ಅವರ ಚಟುವಟಿಕೆಗಳನ್ನು ಎದುರಿಸಲು ಮಾಹಿತಿ ಹಂಚಿಕೆಗೆ ಸರಕಾರಿ ಸಂಸ್ಥೆಗಳೂ ಒಂದಾಗಿ ಶ್ರಮಿಸುವ ಅಗತ್ಯವಿದೆ ಎಂದ ದೋವಲ್, ಈ ನಿಟ್ಟಿನಲ್ಲಿ ನಾಗರಿಕ ಸಮಾಜದಲ್ಲಿ ಗಾಢ ಸಂಪರ್ಕಗಳನ್ನು ಹೊಂದಿರುವ ಉಲೇಮಾಗಳು ಪ್ರಮುಖ ಪಾತ್ರವನ್ನು ನಿರ್ವಹಿಸಬಹುದಾಗಿದೆ ಎಂದರು.

ಇಸ್ಲಾಮಿನ ತತ್ತ್ವಗಳ ಕುರಿತು ಜನರಿಗೆ ಶಿಕ್ಷಣ ನೀಡುವಲ್ಲಿ ಹಾಗೂ ಪ್ರಗತಿಪರ ವಿಚಾರಗಳು ಮತ್ತು ಚಿಂತನೆಗಳೊಂದಿಗೆ ಮೂಲಭೂತೀಕರಣ ಮತ್ತು ಉಗ್ರವಾದವನ್ನು ಎದುರಿಸುವಲ್ಲಿ ಉಲೇಮಾಗಳು ಮುಖ್ಯ ಪಾತ್ರವನ್ನು ಹೊಂದಿದ್ದಾರೆ ಎಂದ ದೋವಲ್,‘ಹೆಚ್ಚಾಗಿ ನಮ್ಮ ಯುವಜನರು ಮೂಲಭೂತೀಕರಣದ ಪ್ರಾಥಮಿಕ ಗುರಿಗಳಾಗಿದ್ದಾರೆ,ಆದರೆ ಯುವಬಲವನ್ನು ಸರಿಯಾದ ನಿಟ್ಟಿನಲ್ಲಿ ಬೆಳೆಸಿದರೆ ಅವರು ಯಾವುದೇ ಸಮಾಜದಲ್ಲಿ ಬದಲಾವಣೆಯ ಹರಿಕಾರರಾಗಿ ಮತ್ತು ಪ್ರಗತಿಯ ನಿರ್ಮಾಣ ಶಕ್ತಿಗಳಾಗಿ ಹೊರಹೊಮ್ಮಬಲ್ಲರು ಎಂದರು.

ಭಾರತ ಮತ್ತು ಇಂಡೋನೇಷ್ಯಾ ಹಿಂಸೆ ಮತ್ತು ಸಂಘರ್ಷವನ್ನು ತೊಡೆದುಹಾಕಲು ವಿಶ್ವಕ್ಕೆ ಜಂಟಿ ಸಂದೇಶವನ್ನು ರವಾನಿಸಬಹುದಾಗಿದೆ ಮತ್ತು ಅದು ಧರ್ಮದಲ್ಲಿ ಪ್ರತಿಪಾದಿಸಿರುವ ನೈಜ ಮೌಲ್ಯಗಳನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಎರಡು ಬೃಹತ್ ಪ್ರಜಾಪ್ರಭುತ್ವಗಳ ಸಂಕಲ್ಪದ ಪ್ರಬಲ ಸಂಕೇತವಾಗುತ್ತದೆ ಎಂದು ದೋವಲ್ ನುಡಿದರು.

share
Next Story
X