Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕಣ್ಮರೆಯಾಗುತ್ತಿರುವ ಹಾಲಕ್ಕಿ ಸಂಸ್ಕೃತಿಯ...

ಕಣ್ಮರೆಯಾಗುತ್ತಿರುವ ಹಾಲಕ್ಕಿ ಸಂಸ್ಕೃತಿಯ ಚಿಹ್ನೆ - ಅಕ್ಕಿ ಮುಡಿ

ಅಕ್ಷತಾ ಜಗದೀಶಅಕ್ಷತಾ ಜಗದೀಶ1 Dec 2022 9:58 AM IST
share
ಕಣ್ಮರೆಯಾಗುತ್ತಿರುವ ಹಾಲಕ್ಕಿ ಸಂಸ್ಕೃತಿಯ ಚಿಹ್ನೆ - ಅಕ್ಕಿ ಮುಡಿ

‘‘ಮೀನ ಪಳದಿಯ ಜೊತೆಗೆ ಕೊರಸಕ್ಕಿ ಅನ್ನ

ಕನ್ನಡ ಕರಾವಳಿಯ ನಿತ್ಯ ಪಕ್ವಾನ್ನ

ಇದರ ರುಚಿ ನೋಡಿದರೆ ದೇವರೂ ಕೊನೆಗೆ

ಸ್ವರ್ಗವನ್ನಿಳಿದು ಬರುವನು ನಮ್ಮ ಮನೆಗೆ’’

ಎನ್ನುವ ಡಾ.ದಿನಕರ ದೇಸಾಯಿ ಅವರ ಚುಟುಕಿನಲ್ಲಿ ಕರಾವಳಿ ಜನರ ಆಹಾರ ಪದ್ದತಿಯನ್ನು ಅರಿಯಬಹುದು. ಕೊರಸಕ್ಕಿ (ಕುಚ್ಚಕ್ಕಿ), ಬೆಣ್ತಕ್ಕಿಯನ್ನು ಮೋಡಿಯಲ್ಲಿ ಕಟ್ಟುವ ಪದ್ಧತಿ ಹಿಂದಿನಿಂದಲೂ ರೂಢಿಯಲ್ಲಿತ್ತು. ಇದು ಕರಾವಳಿ ಭಾಗದ ಸಾಂಸ್ಕೃತಿಕ ವೈಶಿಷ್ಟ್ಯಗಳಲ್ಲಿ ಒಂದು.

ಒಣ ಹುಲ್ಲಿನಿಂದಲೇ ಕಟ್ಟಲ್ಪಡುವ ಈ ಮುಡಿಯ ಒಳಭಾಗದಲ್ಲಿ ನಿರ್ದಿಷ್ಟವಾದ ಉಷ್ಣತೆ ಇರುತ್ತಿದ್ದು, ಮಳೆಗಾಲದಲ್ಲಿ ಅಕ್ಕಿ ಕೆಡದಂತೆ ಸುರಕ್ಷಿತವಾಗಿ ಶೇಖರಿಸಲು ಈ ವಿಧಾನವನ್ನು ಹಿಂದಿನ ತಲೆಮಾರಿನವರು ಅಳವಡಿಸಿಕೊಂಡಿದ್ದರು. ಅಂದಿನ ಕೆಲವು ಗಾದೆ ಮಾತುಗಳನ್ನು ಕೇಳಿದಾಗ ಅಕ್ಕಿಮುಡಿಯ ಮಹತ್ವ ಎಂತಹದ್ದು ಎಂದು ಅರಿವಾಗುತ್ತದೆ. ‘‘ಅಕ್ಕಿಮುಡಿ ಲೆಕ್ಕ ಮಾಡು, ನೆಂಟಸ್ತಿಕಿಗೆ ಪ್ರಸಾದ ನೋಡು’’ ಹಾಗೂ ಗೇಣುದ್ದ ಕೋಣೆಲಿ ಅಕ್ಕಿ ಮುಡಿ, ಮಾರುದ್ದ ಬಾಯಲ್ಲಿ ಮಾತ್ನೋಡು’’ ಎಂಬ ಗಾದೆ ಅಂದು ಜೀವಂತವಾಗಿತ್ತು. ಇಂದಿನದು ಅಕ್ಕಿ ಮುಡಿ ಎಂದರೇನು ಎಂಬುದೇ ತಿಳಿಯದ ಪೀಳಿಗೆ.

ಅಕ್ಕಿ ಮುಡಿಯನ್ನು ಕಟ್ಟುವ ವ್ಯಕ್ತಿಯ ನೈಪುಣ್ಯತೆ ಮೆಚ್ಚುವಂಥದ್ದು. ಇದೊಂದು ಕೌಶಲ್ಯವೇ ಸರಿ. ಮೊದಲು ಆಯ್ದ ಒಣ ಹುಲ್ಲಿನಿಂದ ಉದ್ದನೆಯ ಹಗ್ಗವನ್ನು ತಯಾರಿಸಿಕೊಳ್ಳುವರು. ಮಡೆ ಹಗ್ಗ ಎಂದು ಅದನ್ನು ಕರೆಯುತ್ತಾರೆ.

ಅದನ್ನು ಗೋಲಾಕಾರದಲ್ಲಿ ನೆಲದ ಮೇಲೆ ಹಾಕಿ ನಂತರ ಬಿಡಿ ಹುಲ್ಲನ್ನು ತಳಭಾಗದಿಂದ ಒಟ್ಟುಗೂಡಿಸಿಕೊಂಡು ನುಗ್ಗಾದ ಹುಲ್ಲನ್ನು ಹದವಾಗಿ ಹಾಸಿ ಹಂತ ಹಂತವಾಗಿ ಅಕ್ಕಿಯನ್ನು ಅಳೆದು ವೃತ್ತಾಕಾರವಾದ ಹುಲ್ಲಿನ ಕೇಂದ್ರ ಭಾಗದಿಂದ ರಾಶಿ ಹಾಕುತ್ತ ಕುಡ್ತ್ಗಿ ಎಂಬ ಮುಡಿ ಕಟ್ಟಲೆಂದೇ ಇರುವ ವಿಶಿಷ್ಟ ಬಡಿಗೆಯಿಂದ ಬಡಿಯುತ್ತ ಅಕ್ಕಿಯನ್ನು ಕೀಲಿಸುತ್ತ ಮುಡಿಕಟ್ಟುವ ಕಲೆ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ. ಬೆತ್ತವನ್ನು ಕೂಡ ಮುಡಿ ಕಟ್ಟುವ ಕೆಲಸದಲ್ಲಿ ಬಳಸಲಾಗುತ್ತದೆ. ಕೊಳಗ, ಖಂಡಗ, ಮಾನಗಿ ಎಂಬ ಅಳತೆ ಮಾಪನವನ್ನು ಬಳಸಿ ಅಕ್ಕಿ ಮುಡಿ ಹಾಗೂ ಬೀಜದ ಮುಡಿ ಕಟ್ಟಲಾಗುತ್ತದೆ.

ಅಕ್ಕಿಮುಡಿ ಕಟ್ಟಲು ಬಳಸುವ ಕುಡ್ತ್ಗಿಯನ್ನು ಹೆಚ್ಚಾಗಿ ಹುಣಸೆಮರದ ಕಿಂಚಿನಿಂದ ತಯಾರಿಸಲಾಗುತ್ತದೆ. ಕುಡ್ತ್ಗಿ ಸುಮಾರು ಎರಡೂಕಾಲು ಅಡಿ ಉದ್ದವಿರುತ್ತಿದೆ. ಹೆಚ್ಚು ಭಾರವಾಗಿರುತ್ತದೆ. ಹುಣಸೆಯಲ್ಲದೆ ಇನ್ನುಳಿದಂತೆ ಸಾಗ, ಸಿಸಂ ಮರದಿಂದಲೂ ತಯಾರಿಸಿದ ಕುಡ್ತ್ಗಿಯು ಬಳಕೆಯಲ್ಲಿತ್ತು. ಅಕ್ಕಿಮುಡಿ ಕಟ್ಟುವಾಗ ಕುಡ್ತ್ಗಿಯಿಂದ ಹೊಡೆಯುವ ಸಪ್ಪಳ ಒಂದು ತೆರನಾದ ಸಂಗೀತದಂತೆ ಕೇಳುತ್ತದೆ. ಕುಡ್ತ್ಗಿಯ ಪೆಟ್ಟಿಗೆ ತಕ್ಕಂತೆ ಅಕ್ಕಿಮುಡಿ ರೂಪ ತಾಳುತ್ತದೆ.

ಹಿಂದೆ ಶುಭ ಸಮಾರಂಭಗಳಲ್ಲಿ ಈ ಅಕ್ಕಿಮುಡಿಯನ್ನು ಬಳಸಲಾಗುತ್ತಿತ್ತು. ಹಾಲಕ್ಕಿ ಸಮುದಾಯದಲ್ಲಿ ಮದುವೆಯ ಸಂದರ್ಭದಲ್ಲಿ ವರನನ್ನು ಅಕ್ಕಿಮುಡಿ ಮೇಲೆ, ವಧುವನ್ನು ಬೀಜದ ಮುಡಿಯ ಮೇಲೆ ಕೂರಿಸಿ ಮದುವೆ ಮಾಡಿಸಲಾಗುತ್ತಿತ್ತು. ಅಂಕೋಲಾದ ಬಡಿಗೇರಿಯ ಕೆಲವು ಮನೆತನಗಳು ಇಂದಿಗೂ ಅಕ್ಕಿಮುಡಿಯನ್ನು ಶಾಸ್ತ್ರಕ್ಕೆ ಕಟ್ಟುವುದುಂಟು.

ಭತ್ತದ ಕೃಷಿಯೇ ಇಲ್ಲವಾಗುತ್ತಿರುವ ಈ ಕಾಲದಲ್ಲಿ ಅಕ್ಕಿಮುಡಿ ಬಗ್ಗೆ ಕುಡ್ತ್ಗಿಯ ಬಗ್ಗೆ ಯುವ ಪೀಳಿಗೆ ತಿಳಿದಿರುವುದು ದೂರದ ಮಾತೇ ಸರಿ. ಪರಿಸರ ಸ್ನೇಹಿಯಾದ ಈ ವಿಧಾನವಿಂದು ಕಣ್ಮರೆಯಾಗುತ್ತಿದೆ.

share
ಅಕ್ಷತಾ ಜಗದೀಶ
ಅಕ್ಷತಾ ಜಗದೀಶ
Next Story
X