Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ರಶ್ಯ ತೈಲಕ್ಕೆ ಬೆಲೆ ನಿಗದಿಗೊಳಿಸಿದ ಜಿ7...

ರಶ್ಯ ತೈಲಕ್ಕೆ ಬೆಲೆ ನಿಗದಿಗೊಳಿಸಿದ ಜಿ7 ಗುಂಪು

3 Dec 2022 9:57 PM IST
share
ರಶ್ಯ ತೈಲಕ್ಕೆ ಬೆಲೆ ನಿಗದಿಗೊಳಿಸಿದ ಜಿ7 ಗುಂಪು

ಬರ್ಲಿನ್, ಡಿ.3: ರಶ್ಯದಿಂದ ಕಡಲ ಮೂಲಕ ಸಾಗಿಸುವ ಕಚ್ಛಾತೈಲದ ಪ್ರತೀ ಬ್ಯಾರೆಲ್ ಬೆಲೆಯ ಮಿತಿಯನ್ನು 60 ಡಾಲರ್‍ಗೆ ನಿಗದಿಗೊಳಿಸಲು ಜಿ7 ದೇಶಗಳ ಗುಂಪು ಹಾಗೂ ಆಸ್ಟ್ರೇಲಿಯಾ  (Australia)ಶುಕ್ರವಾರ ಒಪ್ಪಿಕೊಂಡಿವೆ.

ಆರಂಭದಲ್ಲಿ ಪ್ರಬಲವಾಗಿ ಪ್ರತಿರೋಧಿಸಿದ್ದ ಪೋಲಂಡ್‍ನ ಮನ ಒಲಿಸಲು ಯಶಸ್ವಿಯಾದ ಬಳಿಕ  ಯುರೋಪಿಯನ್ ಯೂನಿಯನ್ ಈ ಪ್ರಸ್ತಾವನೆಗೆ ಬೆಂಬಲ ಸೂಚಿಸಿತು. ಬೆಲೆ ಮಿತಿ ನಿರ್ಧಾರ ಡಿಸೆಂಬರ್ 5ರಿಂದ ಅಥವಾ ಆ ಬಳಿಕ ಶೀಘ್ರದಲ್ಲಿ ಜಾರಿಗೆ ಬರಲಿದೆ ಎಂದು ಜಿ7 ಮತ್ತು ಆಸ್ಟ್ರೇಲಿಯಾ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ. ಉಕ್ರೇನ್ ವಿರುದ್ಧದ ಆಕ್ರಮಣಕಾರಿ ಯುದ್ಧದಿಂದ ರಶ್ಯ ಲಾಭ ಪಡೆಯುವುದನ್ನು ತಡೆಯಲು, ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ಬೆಂಬಲಿಸಲು ಮತ್ತು ರಶ್ಯದ ಆಕ್ರಮಣಕಾರಿ ಯುದ್ಧದ ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡುವ ತನ್ನ ಪ್ರತಿಜ್ಞೆಯನ್ನು ಜಿ7 ಪೂರೈಸುತ್ತಿದೆ ಎಂದು ಜಂಟಿ ಹೇಳಿಕೆ ತಿಳಿಸಿದೆ.

ಜಿ7 ಬೆಲೆ ಮಿತಿಯು ಯುರೋಪಿಯನ್ ಯೂನಿಯನ್ ಹೊರತಾದ ದೇಶಗಳಿಗೆ ಸಮುದ್ರದ ಮೂಲಕ ರಶ್ಯದ ಕಚ್ಛಾ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ. ಆದರೆ ಈ ತೈಲವು ಬೆಲೆ ಮಿತಿಗಿಂತ ಕಡಿಮೆ ದರಕ್ಕೆ ಮಾರಾಟವಾಗಬೇಕು ಎಂಬ ಶರತ್ತು ವಿಧಿಸಲಾಗಿದೆ. ಇಲ್ಲದಿದ್ದರೆ ವಿಶ್ವದಾದ್ಯಂತ ರಶ್ಯದ ಕಚ್ಛಾತೈಲ ಸರಕು ನಿರ್ವಹಣೆ, ವಿಮೆ, ಮರು-ವಿಮೆಯನ್ನು ನಿಷೇಧಿಸಲಾಗುತ್ತದೆ. ವಿಶ್ವದ ಬಹುತೇಕ ಪ್ರಮುಖ ಶಿಪ್ಪಿಂಗ್ ಹಾಗೂ ವಿಮೆ ಸಂಸ್ಥೆಗಳು ಜಿ7 ದೇಶಗಳಲ್ಲಿ ಇರುವುದರಿಂದ ಬೆಲೆ ಮಿತಿಗಿಂತ ಹೆಚ್ಚಿನ ದರಕ್ಕೆ ತೈಲ ಮಾರುವುದು ರಶ್ಯಕ್ಕೆ ಕಷ್ಟವಾಗಲಿದೆ.

ಇಂಧನ ಮತ್ತು ಆಹಾರ ಬೆಲೆಯೇರಿಕೆಯಿಂದ ತತ್ತರಿಸಿರುವ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೆ ಬೆಲೆ ಮಿತಿಯಿಂದ ವಿಶೇಷವಾಗಿ ಅನುಕೂಲವಾಗಲಿದೆ ಎಂದು ಅಮೆರಿಕದ ವಿತ್ತ ಕಾರ್ಯದರ್ಶಿ ಜಾನೆಟ್ ಯೆಲೆನ್ ಹೇಳಿದ್ದಾರೆ. ರಶ್ಯದ ಆರ್ಥಿಕತೆಯು ಈಗಾಗಲೇ ಸಂಕುಚಿತಗೊಳ್ಳುತ್ತಿದೆ ಮತ್ತು ಅದರ  ಬಜೆಟ್ ಕ್ಷೀಣಿಸುತ್ತಿದ್ದು, ಇದೀಗ ತೈಲ ಬೆಲೆ ಮಿತಿಯು ರಶ್ಯದ ಬಹುಮುಖ್ಯ ಆದಾಯ ಮೂಲವನ್ನೇ ಕಡಿಮೆಗೊಳಿಸುತ್ತದೆ ಎಂದವರು ಹೇಳಿದ್ದಾರೆ.

ತೈಲದ ಬೆಲೆಯ ಮೇಲೆ ಮಿತಿ ವಿಧಿಸಿರುವುದು ಜಾಗತಿಕ ಮಾರುಕಟ್ಟೆಗೆ  ತೈಲ ಪೂರೈಕೆಯನ್ನು ಸುಸೂತ್ರವಾಗಿಸುತ್ತದೆ. ಡಿಸ್ಕೌಂಟ್ ದರದ ತೈಲ ಪೂರೈಕೆಯನ್ನು ಸಾಂಸ್ಥೀಕರಣಗೊಳಿಸುತ್ತದೆ ಎಂದು ಅಮೆರಿಕದ ವಿತ್ತ ಇಲಾಖೆ ಹೇಳಿದೆ.

share
Next Story
X