ಭಾರತ್ ಜೋಡೋ ಯಾತ್ರೆಯನ್ನು ಮಾಧ್ಯಮಗಳು "ಬಹಿಷ್ಕರಿಸುತ್ತಿವೆ'': ಅಶೋಕ್ ಗೆಹ್ಲೋಟ್ ಆರೋಪ
![ಭಾರತ್ ಜೋಡೋ ಯಾತ್ರೆಯನ್ನು ಮಾಧ್ಯಮಗಳು ಬಹಿಷ್ಕರಿಸುತ್ತಿವೆ: ಅಶೋಕ್ ಗೆಹ್ಲೋಟ್ ಆರೋಪ ಭಾರತ್ ಜೋಡೋ ಯಾತ್ರೆಯನ್ನು ಮಾಧ್ಯಮಗಳು ಬಹಿಷ್ಕರಿಸುತ್ತಿವೆ: ಅಶೋಕ್ ಗೆಹ್ಲೋಟ್ ಆರೋಪ](https://www.varthabharati.in/sites/default/files/images/articles/2022/12/5/358867-1670227452.jpg)
ಜೈಪುರ: ಮಧ್ಯಪ್ರದೇಶದಿಂದ ರವಿವಾರ ರಾತ್ರಿ ರಾಜಸ್ಥಾನ ಪ್ರವೇಶಿಸಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯನ್ನು ಮಾಧ್ಯಮಗಳು "ಬಹಿಷ್ಕರಿಸುತ್ತಿವೆ" ಎಂದು ಅಶೋಕ್ ಗೆಹ್ಲೋಟ್ Ashok Gehlot ಸೋಮವಾರ ಆರೋಪಿಸಿದ್ದಾರೆ.
"ಸಂಪಾದಕರು ಯಾತ್ರೆಯನ್ನು ಬಹಿಷ್ಕರಿಸಿದ್ದಾರೆ ಎಂಬುದು ನನ್ನ ಆರೋಪ. ಯಾತ್ರೆಯಲ್ಲಿ ಲಕ್ಷಗಟ್ಟಲೆ ಜನರು ಸೇರುತ್ತಿದ್ದಾರೆ. ಇಷ್ಟು ದೊಡ್ಡ ಅಭಿಯಾನವನ್ನು ನೀವು ತೋರಿಸುವುದಿಲ್ಲವೇ?" ಎಂದು ರಾಜಸ್ಥಾನ ಮುಖ್ಯಮಂತ್ರಿ ಪ್ರಶ್ನಿಸಿದರು.
"ಅದನ್ನು ತೋರಿಸುವುದು ಮಾಧ್ಯಮಗಳ ಕರ್ತವ್ಯ. ರಾಹುಲ್ ಗಾಂಧಿಯವರದ್ದು ಸಕಾರಾತ್ಮಕ ಯಾತ್ರೆ, ಸಕಾರಾತ್ಮಕ ಚಿಂತನೆ... ಇದರಲ್ಲಿ ಹಿಂಸೆ ಇಲ್ಲ. ಅಂತಹ ಯಾತ್ರೆಯನ್ನು ತೋರಿಸದಿದ್ದರೆ ರಾಷ್ಟ್ರಕ್ಕಾಗಿ ನೀವು ಮಾಡುತ್ತಿರುವ ಕರ್ತವ್ಯದಲ್ಲಿ ವಿಫಲರಾಗುತ್ತೀರಿ" ಎಂದು ಗೆಹ್ಲೋಟ್ ಹೇಳಿದರು.
"ಗಮನವಿಟ್ಟು ಕೇಳಿ. ಇತಿಹಾಸವು ನಿಮ್ಮನ್ನು ಕ್ಷಮಿಸುವುದಿಲ್ಲ. ನೀವು ಅದನ್ನು ತಮಾಷೆ ಮಾಡಿದ್ದೀರಿ'' ಎಂದಿರುವ ಗೆಹ್ಲೋಟ್ ನಿಮ್ಮ ಹೈಕಮಾಂಡ್ ಬಳಿ ತೆರಳಿ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದರು.
ಇಂದು ಬೆಳಗ್ಗೆ ಝಾಲಾವರ್ನಿಂದ ರಾಹುಲ್ ಗಾಂಧಿ ಯಾತ್ರೆ ಆರಂಭಿಸುತ್ತಿದ್ದಂತೆ ಮುಖ್ಯಮಂತ್ರಿ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ಇಬ್ಬರೂ ಜೊತೆಗಿದ್ದರು.