ಬಾವಿಗೆ ಬಿದ್ದು ಮೃತ್ಯು
![ಬಾವಿಗೆ ಬಿದ್ದು ಮೃತ್ಯು ಬಾವಿಗೆ ಬಿದ್ದು ಮೃತ್ಯು](https://www.varthabharati.in/sites/default/files/images/articles/2022/12/7/359243-1670430554.jpg)
ಕಾರ್ಕಳ, ಡಿ.7: ಬಾವಿಯಿಂದ ನೀರು ತೆಗೆಯುತ್ತಿದ್ದ ವ್ಯಕ್ತಿಯೊಬ್ಬರು ಅಕಸ್ಮಿಕ ವಾಗಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಡಿ.6ರಂದು ಸಂಜೆ ವೇಳೆ ಕುಕ್ಕುಂದೂರು ಗ್ರಾಮದ ಮೇಲ್ಜಡ್ಡು ಎಂಬಲ್ಲಿ ನಡೆದಿದೆ.
ಮೃತರನ್ನು ಮೇಲ್ಜಡ್ಡು ನಿವಾಸಿ ಚುಕುಡ (65) ಎಂದು ಗುರುತಿಸಲಾಗಿದೆ. ಇವರು ಮನೆಯ ತೋಟದಲ್ಲಿರುವ ಬಾವಿಗೆ ಮೆಟ್ಟಿಲಿನಿಂದ ಇಳಿದು ಕೊಡಪಾನ ದಲ್ಲಿ ನೀರು ತರುವಾಗ ಆಕಸ್ಮಿಕವಾಗಿ ಮೆಟ್ಟಲಿನಿಂದ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story