ಕೆನರಾ ಬ್ಯಾಂಕ್ನ ಕೆನರಾ ರಿಟೇಲ್ ಮೇಳಕ್ಕೆ ಚಾಲನೆ

ಉಡುಪಿ, ಡಿ.10: ಕೆನರಾ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿ-1ರ ವತಿಯಿಂದ ನಗರದ ಎಂಜಿಎಂ ಕಾಲೇಜು ಮೈದಾನದಲ್ಲಿ 2 ದಿನಗಳ ಕಾಲ ಆಯೋಜಿಸಲಾದ ಕೆನರಾ ರಿಟೇಲ್ ಮೇಳಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಉಡುಪಿಯ ಸಾಯಿರಾಧಾ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನೋಹರ ಶೆಟ್ಟಿ ಮೇಳವನ್ನು ಉದ್ಘಾಟಿಸಿ, ಬ್ಯಾಂಕ್ ಸ್ಥಾಪಕ ಅಮ್ಮೆಂಬಳ ಸುಬ್ಬ ರಾವ್ ಪೈ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಉದ್ಯೋಗ ಸೃಷ್ಟಿ, ವ್ಯವಹಾರ, ಆರ್ಥಿಕತೆ ವೃದ್ಧಿಯಲ್ಲಿ ಬ್ಯಾಂಕ್ಗಳ ಪಾತ್ರ ಮಹತ್ವದ್ದು ಎಂದರು.
ಕೆನರಾ ಬ್ಯಾಂಕ್ 10,300 ಶಾಖೆಗಳು, 13,400 ಎಟಿಎಂ, 2,500ಕೋಟಿ ರೂ. ಲಾಭ ಹೊಂದಿದ್ದು ಪ್ರವಾಸೋದ್ಯಮ, ಕೈಗಾರಿಕೆ, ಮೀನುಗಾರಿಕೆ, ಕೃಷಿ ಪೂರಕ ಪ್ರವಾಸೋದ್ಯಮ, ರಿಯಲ್ ಎಸ್ಟೇಟ್, ಅಟೋಮೊಬೈಲ್ ಉದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದರು.
ಕೆನರಾ ಬ್ಯಾಂಕ್ ಮಣಿಪಾಲ ವೃತ್ತ ಕಚೇರಿಯ ಜಿಎಂ ರಾಮ ನಾಯ್ಕ್ ಮಾತನಾಡಿ, ಹೊಸ ಹೊಸ ಮಾದರಿಗಳನ್ನು ಕೆನರಾ ರಿಟೇಲ್ ಎಕ್ಸ್ಪೊದಲ್ಲಿ ಪ್ರದರ್ಶಿಸಲಾಗಿದ್ದು ಹೊಸ ವರ್ಷದಲ್ಲಿ ಹೊಸ ವಾಹನ ಖರೀದಿ, ಮನೆ ನಿರ್ಮಾಣದ ಅವಕಾಶ ಸದ್ಭಳಕೆಗೆ ಕೆನರಾ ಬ್ಯಾಂಕ್ ಪೂರಕ ನೆರವು ನೀಡುತ್ತಿದೆ ಎಂದು ಹೇಳಿದರು.
ಕೆನರಾ ಬ್ಯಾಂಕ್ 2022-23ನೇ ಸಾಲಿನಲ್ಲಿ 20ಲಕ್ಷ ಕೋಟಿ ರೂ. ವ್ಯವಹಾರ ನಡೆಸಿದ್ದು ದಾಖಲೆಯ ಲಾಭ ಮಾಡಲಿದೆ. ಬೆಸ್ಟ್ ಬ್ಯಾಂಕರ್ ಸಹಿತ ನಾವೀನ್ಯ, ಉತ್ಪನ್ನ, ಸೇವೆಯ ನೆಲೆಯಲ್ಲಿ ನಾಲ್ಕು ಪ್ರಶಸ್ತಿಗಳು ದೊರೆತಿವೆ. ಸಾಲಕ್ಕೆ ಎಲೆಕ್ಟ್ರಾನಿಕ್ ಬ್ಯಾಂಕ್ ಗ್ಯಾರಂಟಿ ನೀಡುವ ವ್ಯವಸ್ಥೆಯೂ ಆರಂಭವಾಗಿದೆ. ನಿರ್ವಹಣಾ ಶುಲ್ಕ, ಗ್ಯಾರಂಟಿ ಇಲ್ಲದೆ ವೇತನ ಸಹಿತ ದಾಖಲೆಗಳ ಆಧಾರದಲ್ಲಿ 24 ಗಂಟೆಯೊಳಗೆ ವಾಹನ ಸಾಲ ಹಾಗೂ 2 ದಿನದೊಳಗೆ ಗೃಹ ಸಾಲವನ್ನು ನೀಡಲಾಗುವುದು ಎಂದರು.
ಕೆನರಾ ಬ್ಯಾಂಕ್ ಮಣಿಪಾಲ ವೃತ್ತ ಕಚೇರಿಯ ಡಿಜಿಎಂ ಸತ್ಯನಾರಾಯಣ, ಉಡುಪಿ ಪ್ರಾದೇಶಿಕ ಕಚೇರಿ ಎಜಿಎಂ ಸಂಜೀವ್ ಉಪಸ್ಥಿತರಿದ್ದರು. ಲೀನಾ ಪಿಂಟೋ ಸ್ವಾಗತಿಸಿದರು. ಅರ್ಚನಾ ಎನ್. ನಿರೂಪಿಸಿ, ವಂದಿಸಿದರು.
ಚತುಷ್ಚಕ್ರ ವಾಹನಗಳ 11, ದ್ವಿಚಕ್ರ ವಾಹನಗಳ 3ಡೀಲರ್ಗಳು ಹಾಗೂ ಎಂಟು ಬಿಲ್ಡರ್ಗಳು ರಿಟೇಲ್ ಎಕ್ಸ್ಪೊದಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದ್ದಾರೆ.







