VIDEO- 'ಸಿಎಂ ಅಂಕಲ್ ನಮ್ಮ ಗ್ರಾಮಕ್ಕೆ ಬಸ್ ಕಳುಹಿಸಿಕೊಡಿ, ಇಲ್ಲಾಂದ್ರೆ ಸ್ಕೂಲ್ಗೆ ಹೋಗಲ್ಲ': ಶಾಲಾ ಮಕ್ಕಳ ಮನವಿ
ಹನೂರು, ಡಿ.12: ''ಸಿಎಂ ಅಂಕಲ್ ನಮ್ಮ ಗ್ರಾಮಕ್ಕೆ ಬಸ್ ಕಳುಹಿಸಿಕೊಡಿ ಇಲ್ಲ ಅಂದ್ರೆ ನಾವು ಸ್ಕೂಲ್ಗೆ ಹೋಗಲ್ಲ'' ಎಂದು ಪುಟ್ಟ ಮಕ್ಕಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅರೆಕಡುವಿನ ದೊಡ್ಡಿ ಶಾಲಾ ಮಕ್ಕಳು ಪ್ರತಿ ನಿತ್ಯ ಶಾಲೆಗೆ 6 ಕಿ.ಮಿ ನಡೆದು ಹೋಗುವ ಪರಿಸ್ಥಿತಿ ಉಂಟಾಗಿದ್ದು, ಇದು ಬಸ್ ವಂಚಿತ ಗ್ರಾಮವಾಗಿದೆ. ಹಲವು ಕೆಲಸ ಕಾರ್ಯಗಳಿಗೆ ನಡೆದುಕೊಂಡು ಹೋಗುವ ಇಲ್ಲವೇ ಖಾಸಗಿ ವಾಹನಗಳನ್ನ ಅವಲಂಬಿಸಬೇಕಾದ ಪರಿಸ್ಥಿತಿ ಇಲ್ಲಿದೆ.
ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹನೂರು ವಿಧಾನಸಭಾ ಕ್ಷೇತ್ರಕ್ಕೆ ತೆರಳುತ್ತಿದ್ದು, ಇದೇ ವೇಳೆ ಬಸ್ ಸಂಚಾರವನ್ನಆರಂಭಿಸಲು ಶಾಲಾ ಮಕ್ಕಳು ಸಿಎಂಗೆ ಮನವಿ ಸಲ್ಲಿಸಿದ್ದಾರೆ.
Next Story