ಹನೂರು | ಕಾಡಾನೆ ದಾಳಿ: ವ್ಯಕ್ತಿಯೋರ್ವನಿಗೆ ತೀವ್ರ ಗಾಯ
![ಹನೂರು | ಕಾಡಾನೆ ದಾಳಿ: ವ್ಯಕ್ತಿಯೋರ್ವನಿಗೆ ತೀವ್ರ ಗಾಯ ಹನೂರು | ಕಾಡಾನೆ ದಾಳಿ: ವ್ಯಕ್ತಿಯೋರ್ವನಿಗೆ ತೀವ್ರ ಗಾಯ](https://www.varthabharati.in/sites/default/files/images/articles/2022/12/15/360190-1671077160.gif)
ಹನೂರು, ಡಿ.15: ತಾಲೂಕಿನ ಮಹದೇಶ್ವರಬೆಟ್ಟ ಸಮೀಪ ಕಾಡಾನೆ ದಾಳಿ ನಡೆಸಿದ್ದರಿಂದ ವ್ಯಕ್ತಿಯೋರ್ವ ಗಾಯಗೊಂಡಿರುವ ಘಟನೆ ನೆಡೆದಿದೆ.
ಮಹದೇಶ್ವರ ಬೆಟ್ಟದ ಸಮೀಪದ ಕೊಕ್ಕಬೋರೆ ಗ್ರಾಮ ನಿವಾಸಿ ಪುಟ್ಟಸ್ವಾಮಿ(40) ಗಾಯಗೂಂಡವರು. ಇವರು ಮಹದೇಶ್ವರ ಬೆಟ್ಟದಿಂದ ಕೊಕ್ಕಬೋರೆ ಗ್ರಾಮದಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಏಕಾಏಕಿ ಆನೆ ದಾಳಿ ನಡೆಸಿದೆ. ಈ ವೇಳೆ ಆನೆಯ ತುಳಿತಕ್ಕೊಳಗಾದ ಪುಟ್ಟಸ್ವಾಮಿಗೆ ಕಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಅವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.
Next Story