ಮಕ್ಕಳ ಸಾವು ಪ್ರಕರಣ: ಭಾರತೀಯ ಕಂಪೆನಿಯ ಕೆಮ್ಮಿನ ಸಿರಪ್ ನಲ್ಲಿ ಯಾವುದೇ ದೋಷವಿಲ್ಲ ಎಂದ ಡ್ರಗ್ಸ್ ಕಂಟ್ರೋಲರ್
![ಮಕ್ಕಳ ಸಾವು ಪ್ರಕರಣ: ಭಾರತೀಯ ಕಂಪೆನಿಯ ಕೆಮ್ಮಿನ ಸಿರಪ್ ನಲ್ಲಿ ಯಾವುದೇ ದೋಷವಿಲ್ಲ ಎಂದ ಡ್ರಗ್ಸ್ ಕಂಟ್ರೋಲರ್ ಮಕ್ಕಳ ಸಾವು ಪ್ರಕರಣ: ಭಾರತೀಯ ಕಂಪೆನಿಯ ಕೆಮ್ಮಿನ ಸಿರಪ್ ನಲ್ಲಿ ಯಾವುದೇ ದೋಷವಿಲ್ಲ ಎಂದ ಡ್ರಗ್ಸ್ ಕಂಟ್ರೋಲರ್](https://www.varthabharati.in/sites/default/files/images/articles/2022/12/16/360344-1671188932.gif)
ಹೊಸದಿಲ್ಲಿ: ಗ್ಯಾಂಬಿಯಾದಲ್ಲಿ ಮಕ್ಕಳ ಸಾವಿಗೆ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶಂಕೆ ವ್ಯಕ್ತಪಡಿಸಿದ ನಂತರ ಭಾರತದ ಮೇಯ್ಡನ್ ಫಾರ್ಮಾಸೂಟಿಕಲ್ಸ್ ಸಂಸ್ಥೆ ತಯಾರಿಸಿದ ಕೆಮ್ಮಿನ ಸಿರಪ್ ಅನ್ನು ಮಾರುಕಟ್ಟೆಯಿಂದ ವಾಪಸ್ ಪಡೆಯಲಾಗಿದ್ದರೆ, ಈ ಸಿರಪ್ ನ ಮಾದರಿಗಳಲ್ಲಿ ಯಾವುದೇ ದೋಷ ಕಂಡುಬಂದಿಲ್ಲವೆಂದು ಸರ್ಕಾರಿ ಪ್ರಯೋಗಾಲಯದ ವರದಿ ತಿಳಿಸಿದ ಹಿನ್ನೆಲೆಯಲ್ಲಿ ಫ್ಯಾಕ್ಟರಿ ಮರುಆರಂಭಕ್ಕೆ ಸಂಸ್ಥೆ ಅನುಮತಿ ಕೋರಲಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ನರೇಶ್ ಕುಮಾರ್ ಗೋಯಲ್ ತಿಳಿಸಿದ್ದಾರೆ.
"ನನಗೆ ಭಾರತೀಯ ನಿಯಂತ್ರಣಾ ಸಂಸ್ಥೆಗಳು ಮತ್ತು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಸಂಪೂರ್ಣ ವಿಶ್ವಾಸವಿದೆ. ನಾವೇನೂ ತಪ್ಪು ಮಾಡಿಲ್ಲ," ಎಂದು ಅವರು ಹೇಳಿದ್ದಾರೆ.
Next Story