ಪ್ರಶಸ್ತಿಗಾಗಿ ಪುಸ್ತಕಗಳ ಆಹ್ವಾನ
ಬೆಂಗಳೂರು, ಡಿ.17: ಕನ್ನಡ ಸಂಘರ್ಷ ಸಮಿತಿಯು ನೀಡುವ ‘ಚಿರಂತನ ವೈಚಾರಿಕ’ ಪ್ರಶಸ್ತಿಗಾಗಿ 2022ನೇ ಇಸವಿಯಲ್ಲಿ ಪ್ರಕಟಗೊಂಡ ಕೃತಿಗಳನ್ನು ಆಹ್ವಾನಿಸಿಲಾಗಿದೆ. ಕೃತಿಗಳು ವೈಚಾರಿಕತೆಗೆ ಒತ್ತುಕೊಟ್ಟು ರಚಿತಗೊಂಡ ಕಥೆ, ಕಾದಂಬರಿ, ನಾಟಕ ಮುಂತಾದ ಸಾಹಿತ್ಯ ಪ್ರಕಾರವಾಗಿರಬೇಕು.
ಆಸಕ್ತರು ಕೃತಿಯ ಎರಡು ಪ್ರತಿಗಳನ್ನು ‘ಎ.ಎಸ್.ನಾಗರಾಜಸ್ವಾಮಿ, ಅಧ್ಯಕ್ಷ, ಕನ್ನಡ ಸಂಘರ್ಷ ಸಮಿತಿ, ನಂ.3, 1ನೇ ತಿರುವು, 1ನೇ ಮುಖ್ಯ ರಸ್ತೆ, ಅನ್ನಪೂರ್ಣೇಶ್ವರಿ ಬಡಾವಣೆ, ಉಲ್ಲಾಳ ಮುಖ್ಯ ರಸ್ತೆ, ಬೆಂಗಳೂರು-560056’ ವಿಳಾಸಕ್ಕೆ ಜ.10ರೊಳಗೆ ಕಳುಹಿಸಬಹುದಾಗಿದೆ.
ಪ್ರಶಸ್ತಿಯು 5ಸಾವಿರ ರೂ. ನಗದು, ಫಲಕ, ಅಭಿನಂದನಾ ಪತ್ರವನ್ನು ಒಳಗೊಂಡಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 97390 01410ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಸಮಿತಿಯ ಅಧ್ಯಕ್ಷ ಎ.ಎಸ್.ನಾಗರಾಜಸ್ವಾಮಿ ತಿಳಿಸಿದ್ದಾರೆ.
Next Story