ಅಲೆವೂರು ಗ್ರೂಪ್ ಅವಾರ್ಡ್ಗೆ ಡಾ.ಶಶಿಕಿರಣ್ ಆಯ್ಕೆ

ಉಡುಪಿ, ಡಿ.19: ಅಲೆವೂರು ಗ್ರೂಪ್ ಫೋರ್ ಎಜ್ಯುಕೇಷನ್ ವತಿಯಿಂದ ನೀಡಲಾಗುವ 2022ನೇ ಸಾಲಿನ ಪ್ರತಿಷ್ಟಿತ ಅಲೆವೂರು ಗ್ರೂಪ್ ಅವಾರ್ಡ್ಗೆ ಖ್ಯಾತ ವೈದ್ಯ, ಮಣಿಪಾಲದ ಕೆಎಂಸಿಯ ಇಂಟರ್ನಲ್ ಮೆಡಿಸಿನ್ ವಿಭಾಗದ ಪ್ರೊಫೆಸರ್ ಹಾಗೂ ಎಚ್ಓಡಿ ಹಾಗೂ ಉಡುಪಿಯ ಡಾ.ಟಿ.ಎಂ.ಎ.ಪೈ ಆಸ್ಪತ್ರೆಯ ಮೆಡಿಕಲ್ ಸುಪರಿಂಟೆಂಡೆಂಟ್ ಡಾ.ಶಶಿಕಿರಣ್ ಉಮಾಕಾಂತ್ ಆಯ್ಕೆಯಾಗಿದ್ದಾರೆ.
ಕೋವಿಡ್ 19 ಸಾಂಕ್ರಾಮಿಕ ವ್ಯಾಪಿಸಿದ್ದ ಕಾಲದಲ್ಲಿ ಡಾ.ಶಶಿಕಿರಣ್ ಉಮಾಕಾಂತ್ ಉಡುಪಿ ಜಿಲ್ಲೆಯ ಕೋವಿಡ್ 19 ಚಿಕಿತ್ಸಾ ಆಸ್ಪತ್ರೆಯ ನೋಡಲ್ ಆಫೀಸರ್ ಆಗಿ ದಕ್ಷ ಹಾಗೂ ನಿರ್ಭೀತಿಯಿಂದ ಸೇವೆ ಸಲ್ಲಿಸಿ, ಜನ ಮೆಚ್ಚುಗೆ ಪಡೆದಿದ್ದರು. ಡಿ.23ರಂದು ಅಪರಾಹ್ನ 2.30ಕ್ಕೆ ಅಲೆವೂರಿನ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ 19ನೇ ವಾರ್ಷಿಕೋತ್ಸವ ಸಂದರ್ಭ ದಲ್ಲಿ ಲಯನ್ಸ್ ಜಿಲ್ಲೆ ಮಾಜಿ ಜಿಲ್ಲಾ ಗವರ್ನರ್ ಎನ್.ಎಂ.ಹೆಗ್ಡೆ ಬೆಳ್ಳಿ ಫಲಕ ಸಹಿತ ಪ್ರಶಸ್ತಿ ಪ್ರದಾನ ಮಾಡಲಿರುವರು.
ಹಿರಿಯ ಪತ್ರಕರ್ತ ಯು.ಕೆ. ಕುಮಾರನಾಥ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿರುವರು. ಅಲೆವೂರು ಗ್ರೂಪ್ ಫೋರ್ ಎಜುಕೇಶನ್ ಅಧ್ಯಕ್ಷ ಎ. ಗಣಪತಿ ಕಿಣಿ ಅಧ್ಯಕ್ಷತೆ ವಹಿಸಲಿರುವರು ಎಂದು ಅಲೆವೂರು ಗ್ರೂಪ್ ಫೋರ್ ಎಜುಕೇಶನ್ ಕಾರ್ಯದರ್ಶಿ ಅಲೆವೂರು ದಿನೇಶ್ ಕಿಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೆ ಪಿ.ರಬೀಂದ್ರ ನಾಯಕ್, ಮುರಾರಿ ಬಲ್ಲಾಳ್(ಮರಣೋತ್ತರ), ರಮೇಶ್ ರಾವ್, ಡಾ.ರಮಾನಂದ ಭಟ್(ಮರಣೋತ್ತರ), ಡಾ.ಯು.ಎಂ. ವೈದ್ಯ, ಡಾ.ಮೋಹನ್ ಆಳ್ವಾ, ಶಿರ್ತಾಡಿ ವಿಲಿಯಂ ಪಿಂಟೊ, ಸಾರಾ ಅಬೂಬಕ್ಕರ್, ಡಾ.ಪ್ರತಾಪ್ ಕುಮಾರ್, ಪ್ರೊ.ಎಂ.ಡಿ.ನಂಜುಂಡ, ಡಾ.ಪಿ.ವಿ. ಭಂಡಾರಿ, ಡಾ.ಎನ್.ಎ.ಮಧ್ಯಸ್ಥ, ಎ.ಈಶ್ವರಯ್ಯ, ಡಾ.ವೈ.ಎನ್.ಶೆಟ್ಟಿ, ಪ್ರಹ್ಲಾದ ಆಚಾರ್ಯ, ಪ್ರೊ.ಮ್ಯಾಥ್ಯೂ ಸಿ.ನೈನನ್, ಡಾ.ಎ.ಪಿ.ಭಟ್, ಪ್ರೊ.ಉದ್ಯಾವರ ಮಾಧವ ಆಚಾರ್ಯ ಅವರಿಗೆ ಅಲೆವೂರು ಗ್ರೂಪ್ ಅವಾರ್ಡ್ ನೀಡಿ ಗೌರವಿಸಲಾಗಿತ್ತು.







