ಮೈಸೂರು | ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಚಿರತೆ ದಾಳಿ
ಕೈಯಲ್ಲಿದ್ದ ಕುಡುಗೋಲಿನಿಂದ ಹೊಡೆದು ಚಿರತೆ ದಾಳಿಯಿಂದ ಪಾರದ ರೈತ
![ಮೈಸೂರು | ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಚಿರತೆ ದಾಳಿ ಮೈಸೂರು | ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಚಿರತೆ ದಾಳಿ](https://www.varthabharati.in/sites/default/files/images/articles/2022/12/21/360826-1671610773.jpeg)
ಕೈಯಲ್ಲಿದ್ದ ಕುಡುಗೋಲಿನಿಂದ ಹೊಡೆದು ಚಿರತೆ ದಾಳಿಯಿಂದ ಪಾರದ ರೈತ
ಮೈಸೂರು: ಜಿಲ್ಲೆಯ ಟಿ.ನರಸೀಪುರ ತಾಲೂಕಿನಲ್ಲಿ ಚಿರತೆ ದಾಳಿ ಮುಂದುವರಿದಿದೆ. ಬುಧವಾರ ಬೆಳಿಗ್ಗೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನೊಬ್ಬನ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ತಾಲೂಕಿನ ಬನ್ನೂರು ಹೋಬಳಿ ಗೊರವನಹಳ್ಳಿ ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ರೈತ ನಿಂಗೇಗೌಡ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಚಿರತೆ ದಾಳಿ ನಡೆಸಿದೆ. ಸಮಯ ಪ್ರಜ್ಞೆಯಿಂದ ನಿಂಗೇಗೌಡ ತನ್ನ ಕೈಯಲ್ಲಿದ್ದ ಕುಡುಗೋಲನ್ನು ಚಿರತೆಗೆ ಬೀಸಿ ಪಕ್ಕದಲ್ಲಿ ಇದ್ದ ಕಾಲುವೆಗೆ ಜಿಗಿದಿದ್ದಾರೆ.
"ಚಿರತೆ ನೋಡಿ ನಾನೇನೂ ಹೆದರಲಿಲ್ಲ. ಏನಾದರು ಆಗಲಿ ಅದರ ಪ್ರಾಣವನ್ನು ತೆಗೆದು ಜನರಿಗೆ ನೆಮ್ಮದಿ ತರಬೇಕೆಂದಿದ್ದೆ. ಆದರೆ, ಚಿರತೆ ಸಮೀಪದ ಮಾವಿನ ತೋಪಿನಲ್ಲಿ ಓಡಿ ಹೋಯಿತು ಎಂದು ನಿಂಗೇಗೌಡ ತಿಳಿಸಿದ್ದಾರೆ.
ಬನ್ನೂರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಿಂಗೇಗೌಡ ಅವರಿಗೆ ಚಿಕಿತ್ಸೆ ನೀಡಲಾಗಿದೆ.
Next Story