Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. 180 ರೊಹಿಂಗ್ಯಾ ನಿರಾಶ್ರಿತರು...

180 ರೊಹಿಂಗ್ಯಾ ನಿರಾಶ್ರಿತರು ಸಮುದ್ರದಲ್ಲಿ ಮೃತಪಟ್ಟಿರುವ ಶಂಕೆ: ವಿಶ್ವಸಂಸ್ಥೆ

26 Dec 2022 10:11 PM IST
share
180 ರೊಹಿಂಗ್ಯಾ ನಿರಾಶ್ರಿತರು ಸಮುದ್ರದಲ್ಲಿ ಮೃತಪಟ್ಟಿರುವ ಶಂಕೆ: ವಿಶ್ವಸಂಸ್ಥೆ

ಢಾಕ, ಡಿ.26: ಹಲವು ವಾರಗಳಿಂದ ಹಿಂದೂ ಮಹಾಸಾಗರದಲ್ಲಿ ದೋಣಿಯೊಂದರಲ್ಲಿ ಅತಂತ್ರ ಸ್ಥಿತಿಯಲ್ಲಿದ್ದ ಸುಮಾರು 180 ರೊಹಿಂಗ್ಯಾ ನಿರಾಶ್ರಿತರು ಮೃತಪಟ್ಟಿರುವ ಸಾಧ್ಯತೆಯಿರುವುದಾಗಿ ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆ(United Nations)ಯ ಸಮಿತಿ ಹೇಳಿದೆ. ಮ್ಯಾನ್ಮಾರ್ನಲ್ಲಿ ಅತೀವ ಕಿರುಕುಳಕ್ಕೆ ಒಳಗಾಗು ಸಾವಿರಾರು ಮುಸ್ಲಿಮ್ ರೊಹಿಂಗ್ಯಾಗಳು ಮ್ಯಾನ್ಮಾರ್ ನಿಂದ ಹಾಗೂ ಬಾಂಗ್ಲಾದೇಶದ ನಿರಾಶ್ರಿತರ ಶಿಬಿರದಿಂದ ತಪ್ಪಿಸಿಕೊಂಡು ಮಲೇಶ್ಯಾ ಅಥವಾ ಇಂಡೋನೇಶ್ಯಾ ತಲುಪುವ ಪ್ರಯತ್ನದಲ್ಲಿ ಅಪಾಯಕಾರಿ ಸಮುದ್ರ ಪ್ರಯಾಣ ಕೈಗೊಳ್ಳುತ್ತಾರೆ.

ಇದೀಗ ಮುಳುಗಿರುವ ದೋಣಿ ಕಳೆದ ತಿಂಗಳಾಂತ್ಯಕ್ಕೆ ಪ್ರಯಾಣ ಆರಂಭಿಸಿದ ಬಳಿಕ ಥೈಲ್ಯಾಂಡ್, ಮಲೇಶ್ಯಾ, ಇಂಡೊನೇಶ್ಯಾ, ಮಲಕ್ಕ ಜಲಸಂಧಿ ಹಾಗೂ ಭಾರತದ ಅಂಡಮಾನ್ ದ್ವೀಪದ ಸುತ್ತಮುತ್ತ ಅಲೆಯುತ್ತಿತ್ತು ಎಂದು ವರದಿಯಾಗಿದೆ.ದೋಣಿಯಲ್ಲಿದ್ದವರೊಂದಿಗೆ ಅವರ ಸಂಬಂಧಿಕರು ಸಂಪರ್ಕ ಕಡಿದುಕೊಂಡಿದ್ದು ಅಂತಿಮ ಬಾರಿ ಸಂಪರ್ಕದಲ್ಲಿದ್ದ ದೋಣಿಯಲ್ಲಿದ್ದ ವ್ಯಕ್ತಿ ‘ದೋಣಿಯಲ್ಲಿದ್ದವರು ಎಲ್ಲರೂ ಮೃತಪಟ್ಟಿರುವ ಸಾಧ್ಯತೆಯಿದೆ’ ಎಂದು ಯುಎನ್ಎಚ್ಸಿಆರ್(ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಹೈಕಮಿಷನ್) ಹೇಳಿದೆ.

ಒಂದು ಇದು ನಿಜವಾದರೆ, ಇದು ವಿನಾಶಕಾರಿ ಸುದ್ಧಿಯಾಗುತ್ತದೆ. ಈ ಆಘಾತಕಾರಿ ದುರಂತದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಎಲ್ಲಾ ಕುಟುಂಬಗಳ ದುಖದಲ್ಲಿ ನಾವೂ ಪಾಲ್ಗೊಳ್ಳುತ್ತೇವೆ. ಜೀವಗಳನ್ನು ಉಳಿಸುವ ಕಾರ್ಯದಲ್ಲಿ ನೆರವಾಗುವಂತೆ ಈ ವಲಯದ ದೇಶಗಳಿಗೆ ನಮ್ಮ ಮನವಿಯನ್ನು ಪುನರಾವರ್ತಿಸುತ್ತೇವೆ. ಇದು ಆದ್ಯತೆಯಾಗಿರಬೇಕು ಎಂದು ಯುಎನ್ಎಚ್ಸಿಆರ್ ಟ್ವೀಟ್ ಮಾಡಿದೆ.

 ಈ ದೋಣಿಯಲ್ಲಿದ್ದ ತನ್ನ 23 ವರ್ಷದ ಪುತ್ರಿ ಮುನುವರಾ ಬೇಗಂ(Munuwara Begum) ಕಳೆದ ವಾರ ವಾಕಿಟಾಕಿಯ ಮೂಲಕ ತನ್ನೊಂದಿಗೆ ಮಾತನಾಡಿದ್ದು ‘ತಾವು ಅಪಾಯದಲ್ಲಿದ್ದು ದಯವಿಟ್ಟು ರಕ್ಷಿಸಿ. ನಮ್ಮ ಬಳಿ ಆಹಾರ ಅಥವಾ ನೀರು ಕೂಡಾ ಇಲ್ಲ. ಮುಳುಗುತ್ತಿರುವ ದೋಣಿಯಿಂದ ತಮ್ಮನ್ನು ರಕ್ಷಿಸಲು ಯಾರೂ ಇಲ್ಲಿಲ್ಲ ’ ಎಂದು ಮನವಿ ಮಾಡಿದ್ದಳು ಎಂದು ಬಾಂಗ್ಲಾದೇಶದ ನಿರಾಶ್ರಿತರ ಶಿಬಿರದ ನಿವಾಸಿ ನೂರ್ ಹಬಿ ಹೇಳಿರುವುದಾಗಿ ವರದಿಯಾಗಿದೆ.

ಈ ಮಧ್ಯೆ, 57 ರೊಹಿಂಗ್ಯಾ ನಿರಾಶ್ರಿತರಿದ್ದ ಮತ್ತೊಂದು ದೋಣಿಯು ಒಂದು ತಿಂಗಳು ಸಮುದ್ರದಲ್ಲಿ ಗೊತ್ತುಗುರಿಯಿಲ್ಲದೆ ಅಲೆದಾಡಿದ ಬಳಿಕ ರವಿವಾರ ಇಂಡೋನೇಶ್ಯಾದ ಪಶ್ಚಿಮ ಕರಾವಳಿ ತಲುಪಿದೆ ಎಂದು ಪೊಲೀಸರು ಹೇಳಿದ್ದಾರೆ. ಕಳೆದ ವಾರ ಬಂಗಾಳ ಕೊಲ್ಲಿಯ ಮತ್ತೊಂದು ಬದಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ದೋಣಿಯಿಂದ 104 ರೊಹಿಂಗ್ಯಾ ನಿರಾಶ್ರಿತರನ್ನು ಶ್ರೀಲಂಕಾದ ದೋಣಿ ರಕ್ಷಣೆ ಮಾಡಿತ್ತು.

 2015ರಲ್ಲಿ ಸಾವಿರಾರು ಪುರುಷರು, ಮಹಿಳೆಯರು ಮತ್ತು ಮಕ್ಕಳು ಜೀವರಕ್ಷಕ ಆರೈಕೆ ಮತ್ತು ಬೆಂಬಲವನ್ನು ಪಡೆಯಲು ಭಾರೀ ಸವಾಲುಗಳನ್ನು ಎದುರಿಸಿದ ಸ್ಥಿತಿ ಮರುಕಳಿಸದಂತೆ ಈ ವಲಯದ ದೇಶಗಳು ತುರ್ತಾಗಿ ಮತ್ತು ಸಾಮೂಹಿಕವಾಗಿ ಕೆಲಸ ಮಾಡುವಂತೆ ವಲಸೆಗಾಗಿನ ಅಂತರಾಷ್ಟ್ರೀಯ ಸಂಸ್ಥೆ(ಐಒಎಮ್) ಆಗ್ರಹಿಸಿದೆ.

 ಪ್ರಾದೇಶಿಕ ಮಟ್ಟದಲ್ಲಿ ಇದನ್ನು ಪರಿಹರಿಸಲು ಸರಕಾರಗಳು ಮತ್ತು ಪಾಲುದಾರರು ಈ ಹಿಂದೆಯೂ ಒಗ್ಗೂಡಿದ್ದಾರೆ. ಕಳ್ಳ ಸಾಗಣೆದಾರರ ಕೈಯಲ್ಲಿ ನಿರಾಶ್ರಿತರ ಬದುಕು ಮತ್ತು ಸುರಕ್ಷತೆ ತೂಗುಯ್ಯಾಲೆಯಲ್ಲಿ ಇರುವ ಈ ಸಂದರ್ಭ ಮತ್ತೊಮ್ಮೆ ತುರ್ತು ಪ್ರಾದೇಶಿಕ ಕ್ರಮದ ಅಗತ್ಯವಿದೆ ಎಂದು ಐಒಎಮ್ ಹೇಳಿದೆ.

share
Next Story
X