ಕುವೆಂಪು ಮನೆ ದುರಸ್ತಿಗೆ 1 ಕೋಟಿ ರೂ. ಬಿಡುಗಡೆ: ಸಿಎಂ ಬೊಮ್ಮಾಯಿ
ಬೆಂಗಳೂರು, ಡಿ.28: ಕವಿ ಕುವೆಂಪು ಅವರ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ದುರಸ್ತಿ ಕೆಲಸಗಳಿಗಾಗಿ 1 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
'ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ "ಯುಗದ ಕವಿ, ಜಗದ ಕವಿ" ಕುವೆಂಪುರವರ ಕುಪ್ಪಳ್ಳಿಯ ನಿವಾಸದ ಸುಣ್ಣ ಬಣ್ಣ ಕಾಮಗಾರಿಗೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ದುರಸ್ತಿ ಕೆಲಸಗಳಿಗಾಗಿ ರಾಷ್ಟ್ರಕವಿ ಕುವೆಂಪು ಪ್ರಾಧಿಕಾರಕ್ಕೆ 1 ಕೋಟಿ ಬಿಡುಗಡೆ ಮಾಡಲಾಗಿದೆ' ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ "ಯುಗದ ಕವಿ, ಜಗದ ಕವಿ" ಕುವೆಂಪುರವರ ಕುಪ್ಪಳಿಯ ನಿವಾಸದ ಸುಣ್ಣ ಬಣ್ಣ ಕಾಮಗಾರಿಗೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ದುರಸ್ತಿ ಕೆಲಸಗಳಿಗಾಗಿ ರಾಷ್ಟ್ರಕವಿ ಕುವೆಂಪು ಪ್ರಾಧಿಕಾರಕ್ಕೆ ₹೧ ಕೋಟಿ ಬಿಡುಗಡೆ ಮಾಡಲಾಗಿದೆ.@BSBommai pic.twitter.com/0HjmNEaL72
— CM of Karnataka (@CMofKarnataka) December 27, 2022
Next Story