Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಭಾರತೀಯ ಫಾರ್ಮಾ ಕಂಪೆನಿಯ ಕಫ್ ಸಿರಪ್...

ಭಾರತೀಯ ಫಾರ್ಮಾ ಕಂಪೆನಿಯ ಕಫ್ ಸಿರಪ್ ಸೇವಿಸಿ ಉಜ್ಬೇಕಿಸ್ತಾನದಲ್ಲಿ 18 ಮಕ್ಕಳ ಸಾವು: ಆರೋಪ

28 Dec 2022 11:16 PM IST
share
ಭಾರತೀಯ ಫಾರ್ಮಾ ಕಂಪೆನಿಯ ಕಫ್ ಸಿರಪ್ ಸೇವಿಸಿ ಉಜ್ಬೇಕಿಸ್ತಾನದಲ್ಲಿ 18 ಮಕ್ಕಳ ಸಾವು: ಆರೋಪ

ತಾಷ್ಕೆಂಟ್, ಡಿ.28: ಭಾರತೀಯ ಫಾರ್ಮಾಸ್ಯೂಟಿಕಲ್ ಕಂಪೆನಿಯೊಂದು ಉತ್ಪಾದಿಸಿರುವ ಕೆಮ್ಮಿನ ಔಷಧಿ (ಕಫ್ ಸಿರಪ್)ಯ ಅಡ್ಡಪರಿಣಾಮಗಳಿಂದಾಗಿ ದೇಶದಲ್ಲಿ 18 ಮಕ್ಕಳು ಮೃತಪಟ್ಟಿರುವುದಾಗಿ ಉಜ್ಬೇಕಿಸ್ತಾನದ (Uzbekistan) ಆರೋಗ್ಯ ಸಚಿವಾಲಯವು ಮಂಗಳವಾರ ತಿಳಿಸಿದೆ.

ಮೃತಪಟ್ಟ ಮಕ್ಕಳೆಲ್ಲರೂ ಉತ್ತರಪ್ರದೇಶದ ನೊಯ್ಡ ಮೂಲದ ‘ಮಾರಿಯೊನ್ ಬಯೊಟೆಕ್ ಲಿಮಿಟೆಡ್’ ಉತ್ಪಾದಿಸಿರುವ ಡೊಕ್ 1 ಮ್ಯಾಕ್ಸ್ ಸಿರಪ್ ಹಾಗೂ ಶೀತನಿರೋಧಕ ಮಾತ್ರೆಗಳನ್ನು ಸೇವಿಸಿದ್ದರೆಂದು ಅದು ಹೇಳಿದೆ.

ಡಾಕ್ 1 ಮ್ಯಾಕ್ಸ್ ಸಿರಪ್ ಮುಖ್ಯ ಅಂಶವು ಪ್ಯಾರಾಸಿಟಾಮಲ್ ಆಗಿದ್ದು, ಈ ಔಷಧಿಯನ್ನು ಪಾಲಕರು ತಮ್ಮ ಮಕ್ಕಳಿಗೆ ಶೀತನಿರೋಧಕವಾಗಿ ಸ್ವಇಚ್ಛೆಯಿಂದ ಅಥವಾ ಫಾರ್ಮಸಿ ಮಾರಾಟಗಾರರ ಶಿಫಾರಸಿನ ಮೇರೆಗೆ ಅಸಮರ್ಪಕವಾಗಿ ನೀಡಿದ್ದರು. ರೋಗಿಗಳ ಆರೋಗ್ಯ ಪರಿಸ್ಥಿತಿ ಹದಗೆಡಲು ಇದು ಕಾರಣವಾಯಿತು ಎಂದು ಅವರು ಹೇಳಿದ್ದಾರೆ.

ಈ ಕೆಮ್ಮಿನ ಔಷಧಿಯಲ್ಲಿ ಎಥಿಲಿನ್ ಗ್ಲೈಕೊಲ್ ರಾಸಾಯನಿಕವು ಇರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹೇಳಿಕೆ ತಿಳಿಸಿದೆ.

ಔಷಧಿ ನಿಯಾಮವಳಿಗಳ ಪ್ರಕಾರ ಕೆಮ್ಮಿನ ಸಿರಪ್ ಗಳಲ್ಲಿ ಎಥಿಲಿನ್ ಗ್ಲೈಕೊಲ್ನ ಅಂಶಗಳು ಇರಕೂಡದು. ಸಾಮಾನ್ಯವಾಗಿ ಕೈಗಾರಿಕಾ ದರ್ಜೆಯ ಗ್ಲಿಸರಿನ್ನಲ್ಲಿ ಕಂಡುಬರುವ ಈ ರಾಸಾಯನಿಕವನ್ನು ವೈದ್ಯಕೀಯ ಉದ್ದೇಶಗಳಿಗೆ ಬಳಸಲು ಅನುಮತಿಯಿರವುದಿಲ್ಲ. ಕೆಮ್ಮಿನ ಔಷಧಿಯ ತಯಾರಿಗೆ ಗ್ಲಿಸರಿನ್ ಐಪಿ ಅಥವಾ ಇಂಡಿಯನ್ ಫಾರ್ಮಾಕೊಪೊಯಾ ದರ್ಜೆಯ ರಾಸಾಯನಿಕವನ್ನು ಬಳಸಬೇಕಾಗುತ್ತದೆ.

ಎಥಿಲಿನ್ ಗ್ಲೈಕೊಲ್ ಹಾಗೂ ಡಿಥಿಲಿನ್ ಗ್ಲೈಕೋಲ್ ಅಂಶಗಳು ವಾಂತಿ, ಮೂರ್ಛೆಗೆ ಕಾರಣವಾಗುತ್ತದೆ, ಅಲ್ಲದೆ ರಕ್ತಪರಿಚಲನೆ ವ್ಯವಸ್ಥೆ ಮೇಲೆ ಪರಿಣಾಮವುಂಟು ಮಾಡುತ್ತದೆ ಮತ್ತು ಮೂತ್ರಪಿಂಡವೈಫಲ್ಯವನ್ನುಂಟು ಮಾಡುತ್ತದೆ ಎಂದು ಉಜ್ಭೆಕ್ ಆರೋಗ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.

ಮೃತರೆಲ್ಲರೂ ದಿನಕ್ಕೆ ಮೂರು-ನಾಲ್ಕು ಸಲ 2.5ರಿಂದ 5 ಮಿ. ಲೀಟರ್ ಕೆಮ್ಮಿನ ಔಷಧಿಯನ್ನು ಮನೆಯಲ್ಲಿ ಸೇವಿಸಿದ್ದು, ಇದು ಈ ಔಷಧಿ ಸೇವನೆಯ ನಿಗದಿತ ಮಾನದಂಡದ ಡೋಸ್ಗಿಂತ ಅಧಿಕವಾಗಿದೆ ಎಂದು ಉಜ್ಭೆಕ್ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಔಷಧಿ ಕಂಪೆನಿ ಮೆಡಿಯನ್ ಫಾರ್ಮಾದ ಹರ್ಯಾಣ ಘಟಕ ಉತ್ಪಾದಿಸಿದ ಕೆಮ್ಮಿನ ಸಿರಪ್ ಸೇವಿಸಿ ಕಳೆದ ವರ್ಷ ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಆಫ್ರಿಕ ಖಂಡದ ರಾಷ್ಟ್ರವಾದ ಗಾಂಬಿಯಾದಲ್ಲಿ, ಕನಿಷ್ಠ 70 ಮಕ್ಕಳು ಮೃತಪಟ್ಟ ಘಟನೆ ಜಾಗತಿಕ ಮಟ್ಟದಲ್ಲಿ ಕಳವಳವನ್ನು ಸೃಷ್ಟಿಸಿತ್ತು. ರಾಜ್ಯ ಸರಕಾರ ಹಾಗೂ ಕೇಂದ್ರೀಯ ಔಷಧಿ ನಿಯಂತ್ರಣ ಪ್ರಾಧಿಕಾರಗಳು ನಡೆಸಿ ಜಂಟಿ ತನಿಖೆಯಲ್ಲಿ ಮೆಡಿಯನ್ ಫಾರ್ಮಾ ಕಂಪೆನಿಯು ಕೆಮ್ಮಿನ ಸಿರಪ್ ತಯಾರಿಕೆಯಲ್ಲಿ 12 ನಿಯಮಗಳನ್ನು ಉಲ್ಲಂಘಿಸಿರುವುದನ್ನು ಪತ್ತೆ ಹಚ್ಚಿತ್ತು ಹಾಗೂ ನಂತರ ಕಾರ್ಖಾನೆಯಲ್ಲಿ ಔಷಧಿ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತ್ತು. 

ಮೆಡಿಯನ್ ಫಾರ್ಮಾ ನಿರ್ಮಿತ ಕಫ್ ಸಿರಪ್ನಲ್ಲಿಯೂ ಎಥಿಲಿನ್ ಗ್ಲೈಕೊಲ್ ಹಾಗೂ ಡಿಥಿಲಿನ್ ಗ್ಲೈಕೋಲ್ ಅಂಶಗಳು ಸ್ವೀಕಾರಾರ್ಹ ಮಿತಿಗಿಂತ ಅಧಿಕ ಪ್ರಮಾಣದಲ್ಲಿರುವುದು ತನಿಖೆಯಿಂದ ಪತ್ತೆಯಾಗಿತ್ತು.   ಇದೀಗ ಭಾರತದ ಇನ್ನೊಂದು ಔಷಧಿ ಸಂಸ್ಥೆ ಉತ್ಪಾದಿಸಿರುವ ಕೆಮ್ಮಿನ ಸಿರಪ್ನ ಸೇವನೆಯಿಂದ ಉಜ್ಬೆಕಿಸ್ತಾನದಲ್ಲಿ ಮಕ್ಕಳ ಸಾವುಗಳು ಸಂಭವಿಸಿರುವುದು ಭಾರೀ ಆತಂಕಕಕ್ಕೆ ಕಾರಣವಾಗಿದೆ.

share
Next Story
X