ಬಂಟ್ವಾಳ: ಸಜಿಪ ನಡು ಗ್ರಾಮದ ಚೆಟ್ಟಕ್ಕಲ್ ನಿವಾಸಿ ಸೈಯದ್ ಹಂಝ ತಂಙಳ್ ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು.
ಮೃತರು ಚೆಟ್ಟಕ್ಕಲ್ ನಲ್ಲಿ ಮಸೀದಿಯನ್ನು ನಿರ್ಮಿಸಿದ್ದು, ಅದರ ಸಮೀಪದ ಮನೆಯೊಂದರಲ್ಲಿ ವಾಸವಿದ್ದರು.
ಕೊಡುಗೈ ದಾನಿಯಾಗಿದ್ದ ಅವರು ಮರ್ಹೂಮ್ ಸೈಯ್ಯದ್ ಹಸನ್ ಕೋಯ ರ ಪುತ್ರರಾಗಿದ್ದಾರೆ.