ದಲಿತ ಯುವಕನ ಕೊಲೆ ಆರೋಪಿಗನ್ನು ಬಂಧಿಸದಿದ್ದರೆ ಜಿಲ್ಲಾದ್ಯಂತ ಪ್ರತಿಭಟನೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಎಚ್ಚರಿಕೆ

ಬೆಳ್ತಂಗಡಿ: ಶಿಬಾಜೆ ಕುರುಂಜ ಎಂಬಲ್ಲಿ ತೋಟದ ಕಾರ್ಮಿಕನಾಗಿ ದುಡಿಯುತ್ತಿದ್ದ ಅಮಾಯಕ ದಲಿತ ಯುವಕ ಶ್ರೀಧರ ಎಂಬವರಿಗೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆನಡೆಸಿದ್ದು, ಅರೋಪಿಗಳ ವಿರುದ್ಧ ಕೊಲೆ, ದರೋಡೆ, ಹಲ್ಲೆ, ದಲಿತ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಗಳನ್ನು ಬಂದಿಸದೇ ರಾಜಕೀಯವಾಗಿ ರಕ್ಷಣೆ ನೀಡಲಾಗುತ್ತಿದೆ. ಆರೋಪಿಗಳನ್ನು ತಕ್ಷಣ ಬಂಧಿಸದಿದ್ದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ಅಂಬೇಡ್ಕರ್ ವಾದ ಬೆಳ್ತಂಗಡಿ ಸಮಿತಿ, ಮೊಗೇರ ಸಂಘ ಸಮನ್ವಯ ಸಮಿತಿ ಬೆಳ್ತಂಗಡಿ, ನಲಿಕೆಯವರ ಸಮಾಜ ಸೇವಾ ಸಂಘ (ರಿ) ಬೆಳ್ತಂಗಡಿ ಇದರ ಜಂಟಿ ಆಶ್ರಯದಲ್ಲಿ ಜಿಲ್ಲೆಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪ್ರಧಾನ ಸಂಚಾಲಕ ನೇಮಿರಾಜ್ ಕೆ ಎಚ್ಚರಿಸಿದ್ದಾರೆ.
ಅವರು ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಶ್ರೀದರ್ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯವನಾಗಿದ್ದು, ಶಿಬಾಜೆಯ ಫಾರ್ ಹೌಸ್ ನಲ್ಲಿ ದುಡಿಯುತ್ತಿದ್ದರು. ಇದರಲ್ಲಿ ಹಿಂದೆ ದುಡಿಯುತ್ತಿದ್ದ ಅರೋಪಿಗಳಾದ ತಿಮ್ಮಪ್ಪ ಪೂಜಾರಿ, ಲಕ್ಷಣ ಪುಜಾರಿ,ಅನಂದ ಗೌಡ, ಸೇರಿ ಶ್ರಿದರನ ಮದುವೆ ವಿಚಾರ ಮುಂದಿಟ್ಟು ಹಲ್ಲೆ ನಡೆಸಿದ್ದು, ಕಿರುಚಾಟ ಕೇಳಿ ತೋಟದ ಸುಪರ್ ವೈಸರ್ ಹರೀಶ್, ಟಿ ಸಿ ಅಬ್ರಾಹಂ,ಪರಮೇಶ್ವರ ಗೌಡ ರಕ್ಷಿಸಿ, ಯವಕನನ್ನು ಮನೆಗೆ ಕಳಿಸಿದ್ದಾರೆ.
ಅದೇ ದಿನ ರಾತ್ರಿ ಹಲ್ಲೆಯ ವಿಷಯ ಬಹಿರಂಗವಾಗಿದ್ದು ಇದರಿಂದ ಪ್ರಕರಣ ದಾಖಲಾಗಬಹುದು ಎಂಬ ಉದ್ದೇಶದಿಂದ ಮತ್ತೆ ಬೆದರಿಸಿ ಹಲ್ಲೆ ನಡೆಸಿ ಮದ್ಯ ಮತ್ತು ಕೀಟನಾಶವನ್ನು ಬಾಯಿಗೆ ಹಾಕಿ ಕೊಲೆ ಮಾಡಿ, ದಾರಿ ತಪ್ಪಿಸುವ ಉದ್ದೇಶದಿಂದ ಬೆತ್ತಲೆ ಮಾಡಿ ಸ್ವಲ್ಪ ದೂರ ಹಾಕಿ ಹೋಗಿದ್ದಾರೆ. ಅಲ್ಲದೇ 9,500 ರೂ. ನಗದನ್ನು ದೋಚಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಚಂದು ಎಲ್ ಮಾತನಾಡಿ, ಸಿವಿಲ್ ಪ್ರಕರಣದಲ್ಲಿ ಮಧ್ಯರಾತ್ರಿ ಹೋಗಿ ಪೋಲೀಸರು ಬಂಧಿಸಿದ ಉದಾಹರಣೆ ಇದೆ. ಅದರೆ ಇಲ್ಲಿ ಇಷ್ಟು ದೊಡ್ಡ ಪ್ರಕರಣ ದಾಖಲಾದರೂ ಬಂಧನವಾಗಿಲ್ಲ. ಆರೊಪಿಗಳಿಗೆ ರಾಜಕೀಯವಾಗಿ ರಕ್ಷಣೆ ನೀಡಲಾಗುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಶಾಸಕ ಹರೀಶ್ ಪೂಂಜರವರು ಮಧ್ಯ ಪ್ರವೇಶಿಸಿ ದಲಿತ ಯುವಕನಿಗೆ ನ್ಯಾಯ ಕೊಡಿಸಬೇಕು. ಸರಕಾರ ಇದನ್ನು ವಿಶೇಷ ನೆಲೆಯಲ್ಲಿ ಪ್ರಕರಣದ ತನಿಖಾಧಿಕಾರಿಯನ್ನು ಬದಲಾಯಿಸಿ ಉನ್ನತ ಮಟ್ಟದಲ್ಲಿ ಸಿಒಡಿ ತನಿಖೆ ನಡೆಸಬೇಕು ಮತ್ತು ದೂರುದಾರರಿಗೆ, ಸಾಕ್ಷ್ಯದಾರರಿಗೆ ರಕ್ಷಣೆ ಕೊಡಬೇಕು. ತಕ್ಷಣ ಅರೋಪಿಗಳ ಬಂಧನ ಆಗದಿದ್ದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮನ್ವಯ ಸಮಿತಿಯ ಜಿಲ್ಲಾ ಪ್ರದಾನ ಕಾರ್ಯದರ್ಶಿ ಅಶೋಕ ಕೊಂಚಾಡಿ, ಇದೊಂದು ಉದ್ದೇಶ ಪೂರ್ವಕ ಕೊಲೆಯಾಗಿದೆ ಎಂಬುದು ಹೊರನೋಟಕ್ಕೆ ಸ್ಪಷ್ಟವಾಗುತ್ತಿದೆ. ದೂರು ದಾಖಲಾದರೂ ರಾಜಕೀಯ ಒತ್ತಡಕ್ಕೆ ಮಣಿದು ಆರೋಪಿಗಳನ್ನು ಬಂಧಿಸಿಲ್ಲ. ಸ್ಥಳೀಯ ಬಿಜೆಪಿ ಮುಖಂಡ, ಗ್ರಾಮ ಪಂಚಾಯತ್ ಅಧ್ಯಕ್ಷ ಆರೋಪಿಗಳನ್ನು ರಕ್ಷಿಸುತ್ತಿದ್ದಾನೆ. ಆರೋಪಿಗಳನ್ನು ಆತನೇ ಎಲ್ಲೆಡೆ ಕರೆದೊಯ್ಯುತ್ತಿರುವುದು ಕಂಡು ಬರುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮೊಗೇರ ಸಂಘದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಜಯಪ್ರಕಾಶ್ ಕನ್ಯಾಡಿ, ತಾಲೂಕು ಕಾರ್ಯದರ್ಶಿ ಜಗದೀಶ್ ಕಕ್ಕಿಂಜೆ, ಜಿಲ್ಲಾ ಸಮಿತಿ ಸದಸ್ಯ ವೆಂಕಣ್ಣ ಕೊಯ್ಯೂರು ಉಪಸ್ಥಿತರಿದ್ದರು.