Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ವಿದ್ಯುತ್ ಬಿಲ್ ತಪ್ಪಾಗಿದೆ ಎಂದು ಪ್ರತಿ...

ವಿದ್ಯುತ್ ಬಿಲ್ ತಪ್ಪಾಗಿದೆ ಎಂದು ಪ್ರತಿ ಮನೆಗಳಿಂದ ಹಳೆ ಬಾಕಿ ವಸೂಲಿ: ಮೆಸ್ಕಾಂ ವಿರುದ್ಧ ಆರೋಪ..!

29 Dec 2022 8:56 PM IST
share

ಕುಂದಾಪುರ:  ಮೆಸ್ಕಾಂ ಮಾಡಿದ ತಪ್ಪಿಗೆ ವಿದ್ಯುತ್ ಗ್ರಾಹಕರು ಸಮಸ್ಯೆ ಅನುಭವಿಸಬೇಕಾದ ಘಟನೆಯೊಂದು ಕುಂದಾಪುರದ ಕೋಡಿ ಭಾಗದಲ್ಲಿ ನಡೆದಿದೆ. 

ತಪ್ಪಾಗಿ ಬಿಲ್ ಕಳುಹಿಸಿ ಕಟ್ಟಿಸಿಕೊಂಡ ಇಲಾಖೆ, ಈಗ ಏಕಾಏಕಿ ನಾವು ತಪ್ಪಾಗಿ ಬಿಲ್ ನೀಡಿದ್ದೇವೆ ಹಳೆ ಬಾಕಿ ಪಾವತಿಸಿ ಎಂದು ಗ್ರಾಹಕರಿಂದ ಸಾವಿರಾರು ರೂ. ಕಟ್ಟಿಸಿಕೊಳ್ಳುತ್ತಿದೆ. ಅದೂ 700ಕ್ಕೂ ಅಧಿಕ ಗ್ರಾಹಕರಿಂದ ಸುಮಾರು 16.5 ಲಕ್ಷ ರೂ.ಗಳನ್ನು. ವಿದ್ಯುತ್ ಇಲಾಖೆ ಮೊದಲು ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ಗ್ರಾಹಕರಿಗೆ ವಿದ್ಯುತ್ ಬಳಕೆಗೆ ಸಮಾನ ದರ ವಿಧಿಸುತ್ತಿತ್ತು. ದಶಕಗಳ ಹಿಂದೆ ಈ ಪದ್ಧತಿಗೆ ತಿಲಾಂಜಲಿ ಇಟ್ಟು ಸಂಸ್ಥೆಗೆ ಲಾಭ ಮಾಡಿಕೊಡಬೇಕೆಂಬ ಏಕೈಕ ಉದ್ದೇಶದಿಂದ, ಗ್ರಾಮಾಂತರ ಹಾಗೂ ನಗರ ಪ್ರದೇಶಕ್ಕೆ ಒಂದೇ ವಿದ್ಯುತ್ ನೀಡುವುದಾದರೂ ನಗರದಲ್ಲಿ ವಿದ್ಯುತ್ ಬಳಸುವ ಗ್ರಾಹಕರಿಗೆ ಅಧಿಕ ದರ ಎಂಬ ವಸೂಲಿ ಕ್ರಮ ಶುರುವಿಟ್ಟುಕೊಂಡಿತು. ನಗರದ ವಿದ್ಯುತ್ ಬಿಲ್ಲು ಹಾಗೂ ಗ್ರಾಮಾಂತರದ ಬಿಲ್ಲಿಗೂ ತಾರತಮ್ಯ ಮಾಡತೊಡಗಿತು.

ಏನಾಗಿದೆ: ಕುಂದಾಪುರ ಪುರಸಭೆ ರಚನೆಯಾಗಿ ಐದು ದಶಕವಾಗಿದ್ದು ಕೋಡಿ ಪ್ರದೇಶವು ಕುಂದಾಪುರ ಪುರಸಭೆ ವ್ಯಾಪ್ತಿಗೆ ಸೇರುತ್ತದೆ. ವರ್ಷಗಳ ಹಿಂದೆ ಕೋಡಿ ಪ್ರದೇಶಕ್ಕೆ ವಿದ್ಯುತ್ ಸರಬರಾಜಿಗೆ ಪ್ರತ್ಯೇಕ ಫೀಡರ್ ಕೂಡಾ ಅಳವಡಿಸಲಾಗಿದೆ.ಇದೇನೇ ಇದ್ದರೂ ಕೋಡಿ ಪ್ರದೇಶಕ್ಕೆ ಮೆಸ್ಕಾಂ ವತಿಯಿಂದ ಗ್ರಾಮಾಂತರದ ಬಳಕೆದಾರರ ಬಿಲ್ ನೀಡಲಾಗುತ್ತಿತ್ತು. ಅಸಲಿಗೆ ಕೋಡಿ ಪುರಸಭೆ ವ್ಯಾಪ್ತಿಯಾದ ಕಾರಣ ನಗರದ ಗ್ರಾಹಕರ ಬಿಲ್ ಹಾಕಬೇಕಿತ್ತು. ಈಗ ಲೆಕ್ಕಪತ್ರ ತಪಾಸಣೆ ವರದಿಯಲ್ಲಿ ಈ ವ್ಯತ್ಯಾಸ ಸಿಕ್ಕಿಬಿದ್ದಿದೆ. ಆದ್ದರಿಂದ ಮೆಸ್ಕಾಂ ಬಾಕಿ ಹಣದ ವಸೂಲಿಗೆ ಹೊರಟಿದೆ.

ಕೋಡಿ ಭಾಗದ 764 ಮನೆಗಳಿಂದ 16.5ಲಕ್ಷ ರೂ. ವಸೂಲಿ ಮಾಡಲು ಮೆಸ್ಕಾಂ ನೋಟಿಸ್ ನೀಡಿದೆ. ಕಳೆದ 3 ವರ್ಷಗಳಿಂದ ಬಿಲ್ಲಿನಲ್ಲಿ ವ್ಯತ್ಯಾಸ ವಾದ ಹಣವನ್ನು ಪಾವತಿಸುವಂತೆ ಸೂಚಿಸಲಾಗಿದೆ. ಕೆಲವರಿಗೆ 92 ರೂ. ಅಷ್ಟೇ ಬಂದಿದ್ದರೆ ಇನ್ನೂ ಕೆಲವರಿಗೆ 3 ಸಾವಿರ ರೂ., 5 ಸಾವಿರ ರೂ.ವರೆಗೆ ಕಟ್ಟಲು ಬಂದಿದೆ. ಕೋಡಿ ಪುರಸಭೆ ವ್ಯಾಪ್ತಿಯಲ್ಲಿದ್ದರೂ ಗ್ರಾಮಾಂತರದ ಮಾದರಿಯಲ್ಲಿ ಆರ್ಥಿಕವಾಗಿ ಸಿರಿತನವಿಲ್ಲದ ಮಂದಿಯೇ ಹೆಚ್ಚು ಇರುವ ಕಡಲತಡಿಯ ಪ್ರದೇಶ. ಆದ್ದರಿಂದ ಈ ವ್ಯತ್ಯಾಸದ ಬಿಲ್ ಪಾವತಿ ಅನೇಕರಿಗೆ ಕಷ್ಟವಾಗಿದೆ.

ಮೆಸ್ಕಾಂ ವತಿಯಿಂದ ಆಗಿರುವ ತಪ್ಪಿಗೆ ಗ್ರಾಹಕರ ಮೇಲೆ ಬರೆ ಎಳೆಯುವುದು ಸರಿಯಲ್ಲ. ಈ ಬಿಲ್ಲನ್ನು ರದ್ದು ಮಾಡಬೇಕು ಎಂದು ಸ್ಥಳೀಯರು ದೂರಿದ್ದಾರೆ. ಈ ಬಗ್ಗೆ ಇಂಧನ ಸಚಿವ ಸುನಿಲ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಗುವುದು. ಮೆಸ್ಕಾಂ ಮಾಡಿದ ತಪ್ಪಿಗೆ ಗ್ರಾಹಕರ ಮೇಲೆ ಹೊರೆ ಹಾಕಬಾರದು. ಏಕಾಏಕಿ ಮೂರು ವರ್ಷದ ಹಣ ಪಾವತಿ ಬಡವರಿಂದ ಅಸಾಧ್ಯ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಮೆಸ್ಕಾಂ ಕುಂದಾಪುರ ಉಪವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಕೇಶ್, ಗ್ರಾಹಕರು ವೆಚ್ಚ ಮಾಡಿದ ವಿದ್ಯುತ್ ಬಿಲ್ ಕಳುಹಿಸಲಾಗಿದೆ. ಹೊರತು ಉಪಯೋಗಿಸದ ವಿದ್ಯುತ್ಗೆ ಅಲ್ಲ. ಭಾರೀ ಮೊತ್ತವೇನೂ ಇಲ್ಲ. ಮೆಸ್ಕಾಂಗೆ ಪಾವತಿಸಬೇಕಾದ ಹಣ ಆದ ಕಾರಣ ರದ್ದು ಮಾಡುವ ಅಧಿಕಾರ ನಮ್ಮ ವ್ಯಾಪ್ತಿಯಲ್ಲಿ ಇಲ್ಲ. ಗ್ರಾಹಕರು ಇದನ್ನು ಪಾವತಿಸಬೇಕಾಗುತ್ತದೆ.

ಹೆಚ್ಚಿನ ಮಾಹಿತಿಗೆ ಗ್ರಾಹಕರು ಮೆಸ್ಕಾಂ ಕಚೇರಿಯನ್ನು ಸಂಪರ್ಕಿಸಬಹುದು ಎಂದಿದ್ದಾರೆ.

share
Next Story
X