3.30 ಲಕ್ಷ ಹೆಕ್ಟರ್ ಪ್ರದೇಶ ಡೀಮ್ಡ್ ಫಾರೆಸ್ಟ್: ಸಚಿವ ಮಾಧುಸ್ವಾಮಿ
ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ.29: ರಾಜ್ಯದಲ್ಲಿ 3,30186.93 ಹೆಕ್ಟರ್ ಪ್ರದೇಶವನ್ನು ಮಾತ್ರ ಡೀಮ್ಡ್ ಫಾರೆಸ್ಟ್ ಎಂದು ಗುರುತಿಸಲಾಗಿದ್ದು, ಉಳಿದೆಲ್ಲಾ ಜಮೀನನ್ನು ಕಂದಾಯ ಇಲಾಖೆಗೆ ವಾಪಾಸ್ ನೀಡಲಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.
ಗುರುವಾರ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಕೆ.ಹರೀಶ್ ಕುಮಾರ್ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿರುವ ಜಿಲ್ಲಾ ಮಟ್ಟದ ಸಮಿತಿಗಳು ಸುಪ್ರೀಂಕೋರ್ಟ್ ತೀರ್ಪನ್ನು ಆಧರಿಸಿ ಅರಣ್ಯ ಪ್ರದೇಶವನ್ನು ಗುರುತಿಸಿವೆ.ಇದರನ್ವಯ ರಾಜ್ಯದಲ್ಲಿ ಒಟ್ಟು 3.30ಲಕ್ಷ ಹೆಕ್ಟೇರ್ ಪ್ರದೇಶ ಡೀಮ್ಡ್ ಫಾರೆಸ್ಟ್ಗೆ ಸೀಮಿತವಾಗಿದೆ ಎಂದರು.
ಈ ಹಿಂದೆ ಡಿಮ್ಡ್ ಫಾರೆಸ್ಟ್ ವಿಸ್ತೀರ್ಣ 11 ಲಕ್ಷ ಹೆಕ್ಟರ್ ಇತ್ತು.ನಂತರ ಅದರ ಗಾತ್ರ 9 ಲಕ್ಷ ಹೆಕ್ಟೇರ್ಗೆ ಇಳಿದಿತ್ತು. ಪ್ರಸ್ತುತ ಡೀಮ್ಡ್ ಫಾರೆಸ್ಟ್ನ ವಿಸ್ತೀರ್ಣ 3,30,186 ಲಕ್ಷ ಹೆಕ್ಟೇರ್ ಆಗಿದೆ ಎಂದ ಅವರು, ಸುಪ್ರೀಂ ಕೋರ್ಟಿನಲ್ಲಿ ಈ ಕುರಿತು ವಿಚಾರಣೆ ಬಾಕಿ ಇರಲಿಲ್ಲ. ಆದರೂ ಹಿಂದಿನ ಸರಕಾರ ಸಚಿವ ಸಂಪುಟದಲ್ಲಿ ಚರ್ಚೆ ಮಾಡುವಾಗ ಸುಪ್ರೀಂಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಉಲ್ಲೇಖಿಸಲಾಗಿತ್ತು. ಅದರ ಪ್ರಕಾರ ಸರಕಾರ ಸುಪ್ರೀಂಕೋರ್ಟ್ ಮುಂದೆ ಪ್ರಮಾಣ ಪತ್ರ ಸಲ್ಲಿಸಿದೆ.ಆ ಬಳಿಕ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದರಿಂದ ಅದರಂತೆ ನಡೆದುಕೊಂಡಿದ್ದೇವೆ, ವಿಷಯ ಇತ್ಯಥ್ರ್ಯವಾಗಿದೆ ಎಂದು ಉಲ್ಲೇಖಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಕಂದಾಯ ಸಚಿವ ಆರ್.ಅಶೋಕ್, ಎಕರೆಯಲ್ಲಿ 50 ಮರಕ್ಕಿಂತ ಹೆಚ್ಚಿದ್ದ ಭಾಗವನ್ನು ಅರಣ್ಯ ಎಂದು ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.ಅದನ್ನು ಆಧರಿಸಿ ಜಿಲ್ಲಾಧಿಕಾರಿಗಳ ಸಮಿತಿ ಡೀಮ್ಡ್ಡ್ ಪ್ರದೇಶವನ್ನು ಗುರುತಿಸಿದೆ ಎಂದು ವಿವರಿಸಿದರು.