ಸುರತ್ಕಲ್ | ವಿವಿಧ ಕಾಮಗಾರಿಗೆ ವಿಶೇಷ ಅನುದಾನ ಬಿಡುಗಡೆ: ಶಾಸಕ ಭರತ್ ಶೆಟ್ಟಿ

ಮಂಗಳೂರು: ಸಣ್ಣ ನೀರಾವರಿಯ 20 ಕೋಟಿ ರೂ. ವಿಶೇಷ ಪ್ಯಾಕೇಜಿನಲ್ಲಿ ಬಂಗ್ರಕೂಳೂರು 16ನೇ ವಾರ್ಡ್ ವ್ಯಾಪ್ತಿಯ ಕೊಟ್ಟಾರಚೌಕಿಯ ಮಾಲಾಡಿ ರಸ್ತೆ ರಾಜಕಾಲುವೆ ತಡೆಗೋಡೆಗೆ 1.30 ಕೋಟಿ ರೂ.ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ. ಹೇಳಿದ್ದಾರೆ.
ಅವರು ಇಲ್ಲಿನ ರಾಜಕಾಲುವೆಗೆ ತಡೆಗೋಡೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದ ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜ್ ಅವರು ಕೃತಕ ನೆರೆ ಭೀತಿ ನಿವಾರಿಸುವ ಸಲುವಾಗಿ ಚರ0ಡಿ, ಕಾಲುವೆ, ತಡೆಗೋಡೆ, ರಸ್ತೆ ಮತ್ತಿತರ ಕಾಮಗಾರಿಗಾಗಿ 23ಕೋ.ರೂ ವಿಶೇಷ ಅನುದಾನ ಒದಗಿಸಿದ್ದು, ಅಗತ್ಯವಿದ್ದೆಡೆ ಕಾಮಗಾರಿ ನಡೆಸಲಾಗುವುದು ಎಂದರು.
ಕಳೆದ ಹಲವು ವರ್ಷಗಳಿಂದ ಇಲ್ಲಿ ಮಳೆಯ ಸಂದರ್ಭ ನೆರೆ ಅವರಿಸುತ್ತಿದ್ದ ಪರಿಣಾಂ ಕಾಲು ಸಂಕ ಎತ್ತರಿಸುವಂತೆ ಜನರ ಬೇಡಿಕೆಯಿತ್ತು. ಇದೀಗ ತಡೆಗೋಡೆ ಜೊತೆಗೆ ಇಲ್ಲಿನ ತಗ್ಗಾದ ಕಾಲು ಸಂಕಗಳನ್ನು ತೆಗೆದು ಎತ್ತರಿಸಲಾಗುವುದು. ಭಾಗದ ರಸ್ತೆಗಳನ್ನು ಲೋಕೋಪಯೋಗಿ ಇಲಾಖೆ ಸೇರಿದಂತೆ ಅಂದಾಜು 1ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗುವುದು ಎಂದರು.
ಈ ಸಂದರ್ಭ ಸ್ಥಳೀಯ ಮನಪಾ ಸದಸ್ಯರಾದ ಕಿರಣ್ ಕುಮಾರ್ ಕೋಡಿಕಲ್, ಬಿಜೆಪಿ ಪ್ರಮುಖರಾದ ಉಮೇಶ ಮಲರಾಯಸಾನ, ಜಯಪ್ರಕಾಶ್ ಕುಲಾಲ್, ರಾಜೇಶ್, ಸುರೇಶ್ ಭಂಡಾರಿ,ಕಿರಣ್ ಕೋಟ್ಯಾನ್, ಗೋಪಾಲ್ ಶೆಟ್ಟಿ ಗಣೇಶ್ ಶೆಟ್ಟಿ, ಪಕ್ಷದ ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.