ವೇತನ ಶ್ರೇಣಿ ಹೆಚ್ಚಳದೊಂದಿಗೆ 42 ಮಂದಿ ಐಎಎಸ್ ಅಧಿಕಾರಿಗಳಿಗೆ ಮುಂಭಡ್ತಿ
ಬೆಂಗಳೂರು, ಡಿ. 31: ವರ್ಷದ ಕೊನೆಯ ದಿನವೇ ಒಟ್ಟು 42 ಮಂದಿ ಐಎಎಸ್ ಅಧಿಕಾರಿಗಳಿಗೆ ಮುಂಭಡ್ತಿ ನೀಡಿದ್ದು, ಅವರ ವೇತನ ಶ್ರೇಣಿಯನ್ನು ಹೆಚ್ಚಿಸಿ ರಾಜ್ಯ ಸರಕಾರ ಶನಿವಾರ ಆದೇಶ ಹೊರಡಿಸಿದೆ. ಕೆಲ ಅಧಿಕಾರಿಗಳನ್ನು ತಾವು ಇರುವ ಸ್ಥಾನದಲ್ಲೆ ಮುಂದುವರಿಸಿದ್ದರೆ, ಇನ್ನೂ ಕೆಲ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಮುಂಭಡ್ತಿ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಸಹಕಾರ ಇಲಾಖೆ ಮುಖ್ಯ ಕಾರ್ಯದಶಿಯಾಗಿದ್ದ ಉಮಾಶಂಕರ್ ಎಸ್.ಆರ್.ಅವರನ್ನು ಸಹಕಾರ ಇಲಾಖೆ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯನ್ನಾಗಿ ಮುಂಭಡ್ತಿ ನೀಡಲಾಗಿದೆ. ರಿತ್ವಿಕ್ ರಾಜನಂ ಪಾಂಡೆ-ಜಂಟಿ ಕಾರ್ಯದರ್ಶಿ, ಕಂದಾಯ ಇಲಾಖೆ ಕೇಂದ್ರ ಹಣಕಾಸು ಸಚಿವಾಲಯ. ಮೇಜರ್ ಮಣಿವಣ್ಣನ್.ಪಿ.- ಪ್ರಧಾನ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ.
ನವೀನ್ ರಾಜ್ ಸಿಂಗ್-ಪ್ರಧಾನ ಕಾರ್ಯದರ್ಶಿ, ಆರೋಗ್ಯ ಇಲಾಖೆ, ಮೌನಿಶ್ ಮೌದ್ಗಲ್-ಆಯುಕ್ತರು, ಕಂದಾಯ ಮತ್ತು ಭೂ ದಾಖಲೆ, ಡಾ.ತ್ರಿಲೋಕಚಂದ್ರ-ವಿಶೇಷ ಆಯುಕ್ತರು, ಬಿಬಿಎಂಪಿ, ಮೋಹನ್ ರಾಜ್-ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ರಿಚರ್ಡ್ ವಿನ್ಸೆಂಟ್ ಡಿಸೋಜ-ಕಾರ್ಯದರ್ಶಿ ಸರಕಾರಿ ಯೋಜನೆ ಕಾರ್ಯಕ್ರಮಗಳ ಉಸ್ತುವಾರಿ ಮತ್ತು ಅಂಕಿ-ಅಂಶಗಳ ಇಲಾಖೆ, ಯಶ್ವಂತ್ ವಿ.ಗುರುಕರ್-ಜಿಲ್ಲಾಧಿಕಾರಿ, ಕಲಬುರಗಿ.
ನಕುಲ್ ಎಸ್.ಎಸ್- ಕೇಂದ್ರ ಹಣಕಾಸು ಇಲಾಖೆ ಆಪ್ತ ಕಾರ್ಯದರ್ಶಿ, ಶ್ರೀವಿದ್ಯಾ ಪಿ.ಐ-ಮುಖ್ಯ ಕಾರ್ಯನಿರ್ವಹಣಾಕಾರಿ- ಇ-ಗೌರ್ನೆನ್ಸ್, ಕನಗವಲ್ಲಿ ಎಂ.-ಆಯುಕ್ತರು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಶಿಕುಮಾರ್ ಕೆ.ಬಿ-ಆಪ್ತ ಕಾರ್ಯದರ್ಶಿ ಕೇಂದ್ರ ಕೌಶಲ್ಯಾಭಿವೃದ್ದಿ ಇಲಾಖೆ, ಡಾ.ರಾಮ್ ಪ್ರಸಾದ್ ಮನೋಹರ್ ವಿ.-ವಿಶೇಷ ಆಯುಕ್ತರು, ಬಿಬಿಎಂಪಿ(ಎಸ್ಟೇಟ್), ವಾಸರೆಡ್ಡಿ ವಿಜಯ ಜೋತ್ಸ್ನಾ-ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್(ಕೆಎಸ್ಐಸಿ), ಮಂಜುಶ್ರೀ ಎನ್. - ನಿರ್ದೇಶಕರು, ಪೌರಾಡಳಿತ ಇಲಾಖೆ, ವೆಂಕಟೇಶ್ ಕುಮಾರ್ ಆರ್.ಮುಖ್ಯ ಚುನಾವಣಾಕಾರಿ ಮತ್ತು ಡಿಪಿಎಆರ್.
ವಿನೋದ್ ಪ್ರಿಯ ಆರ್.-ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಖನಿಜ ನಿಗಮ, ಕೃಷ್ಣಾ ಬಜ್ಪೈ- ಪ್ರಾದೇಶಿಕ ಆಯುಕ್ತರು, ಕಲಬರುಗಿ ಜಿಲ್ಲೆ, ಕ್ಯಾಪ್ಟನ್ ಡಾ.ರಾಜೇಂದ್ರ ಕೆ.-ಸಹಕಾರ ಸಂಘಗಳ ರಿಜಿಸ್ಟ್ರಾರ್, ರಮೇಶ್ ಬಿ.ಎಸ್.- ಜಿಲ್ಲಾಕಾರಿ, ಚಾಮರಾಜನಗರ, ಮಂಜುನಾಥ್ ಜೆ.-ಆಯುಕ್ತರು ಆಯುಷ್ ಇಲಾಖೆ, ಗಿರೀಶ್ ಆರ್.-ಆಯುಕ್ತರು, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಐಎಡಿಬಿ), ಡಾ. ಮಮತಾ ಬಿ.ಆರ್.-ಆಯುಕ್ತರು, ಇನ್ಸ್ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ ಮತ್ತು ಅಂಚೆ ವಿಭಾಗ, ಹಿರೇಮಠ್ ಎಂ.ಜಿ.-ಪ್ರಾದೇಶಿಕ ಆಯುಕ್ತರು, ಬೆಳಗಾವಿ.
ದಿವ್ಯಾ ಪ್ರಭ ಜಿ.ಆರ್.-ಜಿಲ್ಲಾಕಾರಿ ಚಿತ್ರದುರ್ಗ, ಶುಭ ಕಲ್ಯಾಣ್-ನಿರ್ದೇಶಕರು, ಇ-ಆಡಳಿತ ಆರ್ಡಿಪಿಆರ್ ಬೆಂಗಳೂರು, ಶಿಲ್ಪಾ ನಾಗ್ ಸಿ.ಟಿ.-ಆಯುಕ್ತರು, ಗ್ರಾಮೀಣಾಭಿವೃದ್ಧಿ ಇಲಾಖೆ, ನಳಿನಿ ಅತುಲ್-ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ, ಪ್ರಶಾಂತ್ ಕುಮಾರ್ ಮಿಶ್ರ-ವ್ಯವಸ್ಥಾಪಕ ನಿರ್ದೇಶಕರು, ಮೆಸ್ಕಾಂ, ಗುರುದತ್ತ ಹೆಗಡೆ-ಜಿಲ್ಲಾಧಿಕಾರಿ ಧಾರವಾಡ, ರಘುನಂದನ್ ಮೂರ್ತಿ-ಜಿಲ್ಲಾಧಿಕಾರಿ, ಹಾವೇರಿ, ಗಂಗಾಧರ ಸ್ವಾಮಿ ಜಿ.ಎಂ.-ಉಪಕಾರ್ಯದರ್ಶಿ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ರಾಜ್ ಇಲಾಖೆ, ವಿದ್ಯಾಕುಮಾರಿ ಕೆ.-ಸಿಇಒ, ತುಮಕೂರು.
ವರ್ಣಿತ್ ನೇಗಿ-ಜಂಟಿ ನಿರ್ದೇಶಕರು, ಆಡಳಿತ ತರಬೇತಿ ಕೇಂದ್ರ ಮೈಸೂರು, ರಾಹುಲ್ ಶರಣಪ್ಪ ಸಂಕನೂರು-ಬಿಬಿಎಂಪಿ, ಉಪ ಆಯುಕ್ತರು, ಡಾ.ಆಕಾಶ್ ಎಸ್. ಸಿಇಒ ಕೊಡುಗು ಜಿಲ್ಲೆ, ಪ್ರತೀಕ್ ಬಾಯಲ್-ವಿಶೇಷ ಭೂಸ್ವಾಧೀನಾಧಿಕಾರಿ, ಬಿಬಿಎಂಪಿ, ಅಶ್ವಿಜ ಬಿ.ವಿ.-ನಿರ್ದೇಶಕರು, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಬೆಂಗಳೂರು, ಮೋನಾ ರೋತ್-ಆಯುಕ್ತರು, ಕಲಬರುಗಿ ಮಹಾನಗರ ಪಾಲಿಕೆ ಹಾಗೂ ಆನಂದ್ ಪ್ರಕಾಶ್ ಮೀನಾ-ಉಪಕಾರ್ಯದರ್ಶಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಲಬುರಗಿ.