Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ವಿದೇಶಿಗರು ಎರಡು ವರ್ಷಗಳ ಕಾಲ ಮನೆ...

ವಿದೇಶಿಗರು ಎರಡು ವರ್ಷಗಳ ಕಾಲ ಮನೆ ಖರೀದಿಸದಂತೆ ನಿಷೇಧ ಹೇರಿದ ಕೆನಡಾ: ಕಾರಣವೇನು ಗೊತ್ತೇ?

2 Jan 2023 1:50 PM IST
share
ವಿದೇಶಿಗರು ಎರಡು ವರ್ಷಗಳ ಕಾಲ ಮನೆ ಖರೀದಿಸದಂತೆ ನಿಷೇಧ ಹೇರಿದ ಕೆನಡಾ: ಕಾರಣವೇನು ಗೊತ್ತೇ?

ಒಟ್ಟಾವ: ವಸತಿ ಸಮಸ್ಯೆ ಎದುರಿಸುತ್ತಿರುವ ಸ್ಥಳೀಯರಿಗೆ ಮನೆ ದೊರೆಯುವಂತೆ ಮಾಡಲು ಕೆನಡಾ ಸರ್ಕಾರ ವಿದೇಶಿಗರು ತನ್ನ ದೇಶದಲ್ಲಿ ಎರಡು ವರ್ಷಗಳ ಕಾಲ ಮನೆ ಖರೀದಿಸದಂತೆ ಹೇರಿರುವ ನಿಷೇಧ ರವಿವಾರದಿಂದ ಜಾರಿಗೆ ಬಂದಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ನೂತನ ಕಾಯ್ದೆಯು, ಕೆನಡಾದ ಪ್ರಜೆಗಳಲ್ಲದಿದ್ದರೂ ಕೆನಡಾದಲ್ಲಿ ಖಾಯಂ ಆಗಿ ನೆಲೆಸಿರುವ ನಿವಾಸಿಗಳು ಹಾಗೂ ನಿರಾಶ್ರಿತರಿಗೆ ಮನೆ ಖರೀದಿಸುವ ಅವಕಾಶ ಒದಗಿಸಿದೆ ಎಂದು ವರದಿಯಾಗಿದೆ.

ಈ ಕುರಿತು ಒಟ್ಟಾವ ಸ್ಥಳೀಯ ಆಡಳಿತ ಕೂಡಾ ಡಿಸೆಂಬರ್‌ನಲ್ಲಿ ಸ್ಪಷ್ಟನೆ ನೀಡಿದ್ದು, ಈ ನಿಷೇಧವು ನಗರ ಕೇಂದ್ರಿತ ವಸತಿ ಪ್ರದೇಶಗಳಿಗೆ ಅನ್ವಯಿಸುತ್ತದೆಯೇ ಹೊರತು ವಿಹಾರ ಸ್ವತ್ತುಗಳಾದ ಬೇಸಿಗೆ ಕುಟೀರಗಳಿಗಲ್ಲ ಎಂದು ಹೇಳಿತ್ತು.

ವಸತಿ ನಿಲಯಗಳ ಬೆಲೆ ಗಗನಕ್ಕೇರಿ ಕೆನಡಾ ಪ್ರಜೆಗಳಿಗೆ ಕೈಗೆಟುಕದ ಸ್ಥಿತಿ ತಲುಪಿದ್ದಾಗ, 2021ರ ಚುನಾವಣಾ ಪ್ರಚಾರದಲ್ಲಿ ತಾತ್ಕಾಲಿಕ ಎರಡು ವರ್ಷಗಳ ನಿಷೇಧ ಕ್ರಮ ಜಾರಿಗೊಳಿಸುವ ಕುರಿತು ಪ್ರಧಾನಿ ಜಸ್ಟಿನ್ ಟ್ರುಡೋ ಭರವಸೆ ನೀಡಿದ್ದರು.

ಚುನಾವಣಾ ಪ್ರಚಾರದ ಸಮಯದಲ್ಲಿ, "ಕೆನಡಾ ಪ್ರಜೆಗಳ ಮನೆ ಹೊಂದುವ ಅಪೇಕ್ಷೆಯು ಲಾಭಕೋರರು, ಶ್ರೀಮಂತ ಕಂಪನಿಗಳು ಹಾಗೂ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಇದರಿಂದ ಸಾಕಷ್ಟು ಬಳಕೆಯಾಗದ ಮತ್ತು ಖಾಲಿ ಉಳಿದಿರುವ ಮನೆಗಳು, ವಿಪರೀತ ವದಂತಿಗಳು ಮತ್ತು ಏರುಗತಿಯ ಬೆಲೆಯೇರಿಕೆಯಂತಹ ನೈಜ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಮನೆಗಳು ಜನರಿಗೇ ಹೊರತು ಹೂಡಿಕೆದಾರರಿಗಲ್ಲ" ಎಂದು ಲಿಬರಲ್ ಪಕ್ಷ ವಾಗ್ದಾಳಿ ನಡೆಸಿತ್ತು.

2021ರ ಚುನಾವಣಾ ಗೆಲುವಿನ ನಂತರ ತಾನು ನೀಡಿದ್ದ ಭರವಸೆಯಂತೆಯೇ 'ಕೆನಡಾ ಪ್ರಜೆಗಳಲ್ಲದವರಿಂದ ವಸತಿ ಸ್ವತ್ತಿನ ಖರೀದಿಗೆ ನಿಷೇಧ' ಕಾಯ್ದೆಯನ್ನು ಲಿಬರಲ್ ಪಕ್ಷ ಜಾರಿಗೊಳಿಸಿದೆ.

ವಸತಿ ಪ್ರದೇಶಗಳ ಪ್ರಮುಖ ಮಾರುಕಟ್ಟೆಗಳಾದ ವಾಂಕೋವರ್ ಮತ್ತು ಟೊರೊಂಟೊ ನಗರಾಡಳಿತಗಳೂ ಕೆನಡಾ ಪ್ರಜೆಗಳಲ್ಲದವರು ಹಾಗೂ ಖಾಲಿ ಮನೆಗಳ ಮೇಲೆ ತೆರಿಗೆ ಜಾರಿಗೊಳಿಸಿವೆ.

ಕೆನಡಿಯನ್ ರಿಯಲ್ ಎಸ್ಟೇಟ್ ಅಸೋಸಿಯೇಷನ್ ಪ್ರಕಾರ, 2022ರಲ್ಲಿ ಮನೆಗಳ ದರವು ಗರಿಷ್ಠ ಪ್ರಮಾಣಕ್ಕೆ ತಲುಪಿ, ಸರಾಸರಿ 8,00,000 ಕೆನಡಾ ಡಾಲರ್‌ನಷ್ಟಿದ್ದದ್ದು, ಕಳೆದ ತಿಂಗಳಿನಿಂದ 6,00,000 ಕೆನಡಾ ಡಾಲರ್‌ಗೆ ಕುಸಿದಿದೆ ಎಂದು ತಿಳಿಸಿದೆ.

ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ವಸತಿ ವಲಯದ ತಜ್ಞರು, ಕೆನಡಾದಲ್ಲಿ ವಸತಿ ಮಾಲಕತ್ವ ಹೊಂದಿರುವ ವಿದೇಶಿಗರ ಪ್ರಮಾಣ ಶೇ. 5ಕ್ಕಿಂತ ಕಡಿಮೆ ಇದ್ದು, ರಾಷ್ಟ್ರೀಯ ಸಾಂಖ್ಯಿಕ ಇಲಾಖೆಯ ಪ್ರಕಾರ, ವಿದೇಶಿ ಖರೀದಿದಾರರ ಮೇಲೆ ಹೇರಿರುವ ನಿಷೇಧವು ಮನೆಗಳ ದರ ಹೆಚ್ಚು ಅಗ್ಗವಾಗಿಸುವಲ್ಲಿ ನಿರೀಕ್ಷಿತ ಪರಿಣಾಮ ಬೀರಲಾರದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: ರಸ್ತೆ ಗುಂಡಿ ತಪ್ಪಿಸುವ ಪ್ರಯತ್ನದಲ್ಲಿ ಅಪಘಾತಕ್ಕೀಡಾದ ರಿಷಭ್ ಪಂತ್: ಉತ್ತರಾಖಂಡ ಸಿಎಂ

share
Next Story
X