Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಸಿದ್ದೇಶ್ವರ ಸ್ವಾಮೀಜಿಗಳ ಸಂದೇಶಗಳು...

ಸಿದ್ದೇಶ್ವರ ಸ್ವಾಮೀಜಿಗಳ ಸಂದೇಶಗಳು ಇಲ್ಲಿವೆ...

3 Jan 2023 3:13 PM IST
share
ಸಿದ್ದೇಶ್ವರ ಸ್ವಾಮೀಜಿಗಳ ಸಂದೇಶಗಳು ಇಲ್ಲಿವೆ...

ಬೆಂಗಳೂರು, ಜ.3: ಆಧ್ಯಾತ್ಮಿಕ ಚಿಂತಕರು ಹಾಗೂ ಖ್ಯಾತ ಪ್ರವಚನಕಾರರಾಗಿದ್ದ ಸಿದ್ದೇಶ್ವರ ಸ್ವಾಮೀಜಿಗಳು ಹಿತ ನುಡಿಗಳು ಮತ್ತು ಸಂದೇಶಗಳು ಇಲ್ಲಿವೆ.

“ನೀವು ಶೂನ್ಯದಂತೆ ಮೌನವಾಗಿದ್ದರೆ ನಿಮಗೆ ಬೆಲೆ ಬರತೈತಿ. ಬೆಲೆ ಹೆಚ್ಚಾಗ್ತದ. 1 ಸಂಖ್ಯೆ ಮುಂದ ಎಷ್ಟು ಶೂನ್ಯ ಇರತಾವ ಅಷ್ಟ ಆ ಸಂಖ್ಯೆಯ ಬೆಲೆ ಹೆಚ್ಚಾಗ್ತದ. ಅಕಸ್ಮಾತ್ ಶೂನ್ಯ ತೆಗೆದಬಿಟ್ಟರ ಸಂಖ್ಯೆಗೆ ಬೆಲೆ ಎಲ್ಲ ಬರತಹ ಹೇಳಿ! ಆದರ ಆ ಶೂನ್ಯ ಯಾವಾಗಲೂ ಗರ್ವ ಪಡೋದಿಲ್ಲ. ಮೌನವಾಗಿ ಕುಳಿತಿರದ. ಹಂಗ ಎಲ್ಲರೂ ಕುಳಿತಾರ ಅಂತ ನಮಗೆ ಬೆಲೆ ಬಂದಾದ. ನಮ್ಮಷ್ಟಕ್ಕೆ ನಾವು ಸ್ವತಂತ್ರರಲ್ಲ. ಜಗತ್ತಿನ ಮೇಲೆ ಅವಲಂಬಿತರಾಗಿದ್ದೇವೆ. ಸಣ್ಣೋರ ಅದಾರ ಅಂತ ದೊಡ್ಡವರು ಕುಂತಾರ. ಇಲ್ಲಿ ಯಾರೂ ದೊಡ್ಡವರಲ್ಲ. ಯಾರೂ ಸಣ್ಣವರಲ್ಲ. ಎಲ್ಲರೂ ಕೂಡಿ ಬದುಕಬೇಕು. ಸಣ್ಣೋರ, ದೊಡ್ಡವರು ಅಂತ ತಿರಸ್ಕರಿಸಬಾರದು. ಎಲ್ಲರೂ ಬೇಕಾಗ್ತಾರ.”

“ಸೂರ್ಯನ ಕಿರಣಗಳು ಕೊಳಕು ಇರುವ ಜಾಗಕ್ಕೂ ಹೋಗುತ್ತದೆ. ಆದರೆ ಅದು ಕೊಳಕಾಗುವುದಿಲ್ಲ. ನಾವು ಬದುಕಿನಲ್ಲಿ ಸೂರ್ಯನ ಕಿರಣಗಳಂತೆ ಆಗಬೇಕು. ಯಾವ ಜಾಗಕ್ಕೆ ಹೋದರೂ ಯಾರ ಜೊತೆ ಇದ್ದರೂ ನಾವು ನಾವಾಗಿರಬೇಕು. ಕೊಳಕಾಗಬಾರದು.”

“ಲೋಕದ ವಸ್ತುಗಳನ್ನು ಇಂದ್ರಿಯಗಳ ಮೂಲಕಕ ಅನುಭವಿಸಿ ಆನಂದಿಸುವವರು ಲೌಕಿಕರು. ಅಲೌಕಿಕವಾದ ಸತ್ಯ ವಸ್ತುವನ್ನು ಅರಿತು ಅಂತರಂಗದಲ್ಲಿ ಅನುಭವಿಸಿ ಆನಂದಿಸುವವರು ಅಲೌಕಿಕರು.”

“ಸತ್ಯದ ಶೋಕನಾದ ಸಾಧಕನು ಮೊಟ್ಟಮೊದಲು ಮಾಡಬೇಕಾದ ಮಹತ್ತರ ಕಾರ್ಯವೆಂದರೆ ತನ್ನ ಹೃದಯದಲ್ಲಿ ಪ್ರೇಮದ ಜ್ಯೋತಿಯನ್ನು ಹೊತ್ತಿಸುವುದು.”

“ಕುದಿಯುವವರು ಕುದಿಯಲಿ, ಉರಿಯುವವರು ಉರಿಯಲಿ, ನಿನ್ನ ಪಾಡಿಗೆ ನೀನಿರು...! ಕುದಿಯುವವರು ಆವಿಯಾಗುತ್ತಾರೆ, ಉರಿಯುವವರು ಬೂದಿಯಾಗುತ್ತಾರೆ.”

“ಅಡವಿಯಲ್ಲಿ ದನಗಳನ್ನು ಕಾಯುವ ದನಗಾಹಿ ಕೂಡ ನಿಸರ್ಗದ ಮಡಿಲಲ್ಲಿ ಹಾಡುತ್ತ ಆಡುತ್ತ ಆನಂದವಾಗಿರುತ್ತಾನೆ. ದನಗಳು ಕೂಡ ಅಷ್ಟೇ ಆನಂದವಾಗಿರುತ್ತವೆ. ಇನ್ನು ಅರಮನೆಯಂಥ ಮನೆಯಲ್ಲಿದ್ದೂ ಸಿರಿವಂತರು ಆನಂದವಾಗಿರದಿದ್ದರೆ ಆ ದನಗಾಯಿ ಮತ್ತು ದನಗಳೇ ಸಿರಿವಂತರಿಗಿಂತ ಭಾಗ್ಯವಂತರೆಂದು ಹೇಳಬಹುದಲ್ಲವೇ? ಇದರರ್ಥ ನಮ್ಮಲ್ಲಿ ಸಂಪತ್ತು ಇರಬಾರದೆಂದಲ್ಲ. ಸಂಪತ್ತು ಸಾಕಷ್ಟಿರಲಿ ಜೊತೆಗೆ ಸಂತೃಪ್ತಿ ಇರಲಿ.”

“ಮಾನವನ ದುರಾಸೆಯಿಂದಾಗಿ ಇಂದು ನಿಸರ್ಗ ಸ್ವರ್ಗವೂ ನರಕವಾಗುತ್ತಿದೆ. ನೀರಿನಿಂದ ಹಿಡಿದು ಎಲ್ಲವೂ ಮಾರಾಟವಾಗುತ್ತಿದೆ. ನಾಳೆ ಗಾಳಿಯೂ ಮಾರಾಟವಾಗಬಹುದು. ಇದಕ್ಕೆಲ್ಲ ಒಂದೇ ಪರಿಹಾರವೆಂದರೆ ಮನುಷ್ಯನು ಬರೀ ಸಂಪತ್ತನ್ನು ಗಳಿಸಬಾರದು ಜೊತೆಗೆ ಸಂತೃಪ್ತಿಯನ್ನು ಗಳಿಸಬೇಕು.”

“ಮನಸ್ಸಿದ್ದರೆ ದಾರಿ ಖಂಡಿತ ದೊರಕುತ್ತದೆ. ಇಲ್ಲವಾದರೆ ಅದೇ ಮನಸ್ಸು ಕಾರಣ ಹುಡುಕುತ್ತದೆ.”

“ಯಾರ ನೋವಿಗೆ ಯಾರು ಹೊಣೆಗಾರರು, ನಿನ್ನ ಕಣ್ಣೀರಿಗೆ ಯಾರು ಮಗುವರು?”

“ನಿನಗೆ ನೀನೆ ಮಿತ್ರ, ನಿನಗೆ ನೀನೆ ಶತ್ರು, ನಿನ್ನಿಂದಲೇ ಶಾಂತಿ, ನಿನ್ನಿಂದಲೇ ಕ್ರಾಂತಿ.”

“ಸತ್ಯವೂ ಇಲ್ಲ, ಅಸತ್ಯವೂ ಇಲ್ಲ. ಸಹಜವೂ ಇಲ್ಲ, ಅಸಹಜವೂ ಇಲ್ಲ. ನಾನೂ ಇಲ್ಲ. ನೀನೂ ಇಲ್ಲ. ಇಲ್ಲ, ಇಲ್ಲ ಎಂಬುದು ತಾನಿಲ್ಲ. ಗುಹೇಶ್ವರನೆಂಬುದು ತಾ ಬಯಲು.”

“ಈ ಜಗತ್ತು ದೇವ ನಿರ್ಮಿತಿಯೇ ವಿನಃ ಮಾನವ ನಿರ್ಮಿತವಲ್ಲ. ಇದು ಕ್ಷುಲ್ಲಕವಲ್ಲ, ತುಚ್ಛವಲ್ಲ, ದುಃಖಮಯವೂ ಅಲ್ಲ, ಬದುಕಲು ಬಂದರೆ ಇದೇ ಜಗತ್ತು ಸ್ವರ್ಗವಾಗುತ್ತದೆ. ದೇವನಿರ್ಮಿತವಾದ ಈ ಜಗತ್ತಿನಲ್ಲಿ ಪವಿತ್ರ ಅಪವಿತ್ರ ಎಂದಿಲ್ಲ. ಇಲ್ಲ ಹಗಲು ಎಷ್ಟು ಪವಿತ್ರವೋ ರಾತ್ರಿಯೂ ಅಷ್ಟೇ ಪವಿತ್ರ. ರಾತ್ರಿಯಿರುವುದಿಂದಲೇ ತಾನೆ ಚರಾಚರ ಜಗವೆಲ್ಲವೂ ವಿಶ್ರಾಂತಿಯನ್ನು ನಿದ್ರಾನಂದವನ್ನು ಪಡೆಯುವುದು. ಜನನವೂ ಪವಿತ್ರ, ಮರಣವೂ ಪವಿತ್ರ. ಮರಣವಿದ್ದರೇ ಜನನಕ್ಕೆ ಅವಕಾಶ. ಅರಳಿದ ಹೂ ಬಾಡದೇ ಇದ್ದರೆ ಮತ್ತೊಂದು ಹೂ ಅರಳುವುದಾರೂ ಹೇಗೆ?”

share
Next Story
X