ಮಧ್ಯಪ್ರದೇಶ: ಕೊಲೆ ಪ್ರಕರಣದ ಆರೋಪಿ ಬಿಜೆಪಿ ಮುಖಂಡನಿಗೆ ಸೇರಿದ ಅಕ್ರಮ ಹೊಟೇಲ್ ನೆಲಸಮ
![ಮಧ್ಯಪ್ರದೇಶ: ಕೊಲೆ ಪ್ರಕರಣದ ಆರೋಪಿ ಬಿಜೆಪಿ ಮುಖಂಡನಿಗೆ ಸೇರಿದ ಅಕ್ರಮ ಹೊಟೇಲ್ ನೆಲಸಮ ಮಧ್ಯಪ್ರದೇಶ: ಕೊಲೆ ಪ್ರಕರಣದ ಆರೋಪಿ ಬಿಜೆಪಿ ಮುಖಂಡನಿಗೆ ಸೇರಿದ ಅಕ್ರಮ ಹೊಟೇಲ್ ನೆಲಸಮ](https://www.varthabharati.in/sites/default/files/images/articles/2023/01/4/362417-1672807436.jpg)
ಸಾಗರ್(ಮಧ್ಯಪ್ರದೇಶ): ಜಗದೀಶ್ ಯಾದವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ತೀವ್ರ ಪ್ರತಿಭಟನೆ ವ್ಯಕ್ತವಾದ ಬಳಿಕ ಅಮಾನತುಗೊಂಡ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖಂಡ ಮಿಶ್ರಿ ಚಂದ್ ಗುಪ್ತಾಗೆ ಸೇರಿದ್ದ ಅಕ್ರಮ ಹೋಟೆಲ್ ಅನ್ನು ಜಿಲ್ಲಾಡಳಿತ ಮಂಗಳವಾರ ಸಾಗರ ಜಿಲ್ಲೆಯಲ್ಲಿ ನೆಲಸಮಗೊಳಿಸಿದೆ.
ಡಿಸೆಂಬರ್ 22 ರಂದು ಜಗದೀಶ್ ಯಾದವ್ ಅವರ ಮೇಲೆ ಎಸ್ ಯುವಿ ಚಲಾಯಿಸಿ ಹತ್ಯೆಗೈದ ಆರೋಪ ಬಿಜೆಪಿ ಮುಖಂಡ ಗುಪ್ತಾ ಮೇಲಿತ್ತು.
ಇಂದೋರ್ನ ವಿಶೇಷ ತಂಡ ಮಂಗಳವಾರ ಸಂಜೆ 60 ಡೈನಮೈಟ್ಗಳನ್ನು ಸ್ಫೋಟಿಸಿ ಹೊಟೇಲ್ ಅನ್ನು ಕೆಡವಿತು.
ಕೋರೆಗಾಂವ್ ನಿವಾಸಿ ಜಗದೀಶ್ ಯಾದವ್ ಡಿಸೆಂಬರ್ 22 ರಂದು ಎಸ್ಯುವಿ ಅಡಿ ಸಿಲುಕಿ ಸಾವನ್ನಪ್ಪಿದ್ದರು. ಬಿಜೆಪಿ ಮುಖಂಡ ಮಿಶ್ರಿ ಚಂದ್ ಗುಪ್ತಾ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಕೊಲೆ ಆರೋಪ ಮಾಡಲಾಗಿತ್ತು.
ಈ ಪ್ರಕರಣದಲ್ಲಿ ಎಂಟು ಆರೋಪಿಗಳ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪೈಕಿ ಐವರನ್ನು ಬಂಧಿಸಲಾಗಿದೆ. ಮಿಶ್ರಿ ಚಂದ್ ಗುಪ್ತಾ ಇನ್ನೂ ಕಾಣೆಯಾಗಿದ್ದಾರೆ.
ಜಗದೀಶ್ ಯಾದವ್ ಪಕ್ಷೇತರ ಕೌನ್ಸಿಲರ್ ಕಿರಣ್ ಯಾದವ್ ಅವರ ಸೋದರಳಿಯ. ನಗರ ಸಂಸ್ಥೆ ಚುನಾವಣೆಯಲ್ಲಿ ಕಿರಣ್ ಯಾದವ್ ಅವರು ಮಿಶ್ರಿ ಚಂದ್ ಗುಪ್ತಾ ಅವರ ಪತ್ನಿ ಮೀನಾ ಅವರನ್ನು 83 ಮತಗಳಿಂದ ಸೋಲಿಸಿದ್ದರು.
ಈ ವೈಷಮ್ಯದಲ್ಲಿ ಜಗದೀಶ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
#WATCH | MP | Police razed illegal hotel of suspended BJP leader Mishri Chand Gupta after public protest over Jagdish Yadav murder case in Sagar
— ANI (@ANI) January 4, 2023
"There has been no loss of any kind. Only the building was demolished," said Collector Deepak Arya (03.01) pic.twitter.com/VsAbVhRGi8