Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ದಿಲ್ಲಿ ಕಾರು ದುರಂತಕ್ಕೆ ಬಲಿಯಾದ ಯುವತಿ...

ದಿಲ್ಲಿ ಕಾರು ದುರಂತಕ್ಕೆ ಬಲಿಯಾದ ಯುವತಿ ಅಂಜಲಿ ಕುಟುಂಬದ ಏಕೈಕ ಅನ್ನದಾತೆ

5 Jan 2023 10:47 PM IST
share
ದಿಲ್ಲಿ ಕಾರು ದುರಂತಕ್ಕೆ ಬಲಿಯಾದ ಯುವತಿ ಅಂಜಲಿ ಕುಟುಂಬದ ಏಕೈಕ ಅನ್ನದಾತೆ

ಹೊಸದಿಲ್ಲಿ,ಡಿ.5: ಹೊಸ ವರ್ಷದಂದು ನಸುಕಿನಲ್ಲಿ ಪಾನಮತ್ತ ಯುವಕರಿದ್ದ ಕಾರಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ 20 ವರ್ಷ ವಯಸ್ಸಿನ ಯುವತಿ ಅಂಜಲಿ ಸಿಂಗ್ ಭವಿಷ್ಯದ ಬಗ್ಗೆ ದೊಡ್ಡ ದೊಡ್ಡ ಕನಸುಗಳನ್ನು ಹೊಂದಿದ್ದರು. ತನ್ನ ಅನಾರೋಗ್ಯಪೀಡಿತ ತಾಯಿ ಹಾಗೂ ಐದು ಮಂದಿ ಒಡಹುಟ್ಟಿದವರು ನೆಮ್ಮದಿಯಿಂದ ಬದುಕಬೇಕೆಂದು ಆಕೆ ಬಯಸಿದ್ದರು.ಅಂಜಲಿ ತನ್ನ ಕುಟುಂಬದ ಏಕೈಕ ಅನ್ನದಾತೆಯಾಗಿದ್ದಳು. ತಾನು ಬ್ಯೂಟಿಶಿಯನ್ ಆಗಬೇಕೆಂಬ ಮತ್ತು ಸ್ವಂತದ್ದೊಂದು ಪಾರ್ಲರ್ ತೆರೆಯಬೇಕೆಂಬ ಹಂಬಲವನ್ನು ಆಕೆ ಹೊಂದಿದ್ದಳು.

ಹೊಸ ವರ್ಷದಂದು ನಸುಕಿನಲ್ಲಿ ಅಂಜಲಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಾಸಾಗುತ್ತಿದ್ದ ಕಾರೊಂದು ಡಿಕ್ಕಿ ಹೊಡೆದಿತ್ತು.ಅಪಘಾತದ ತೀವ್ರತೆಯಿಂದಾಗಿ ಕಾರಿನಡಿಯಲ್ಲಿ ಅಂಜಲಿಯ ದೇಹ ಸಿಕ್ಕಿಹಾಕಿಕೊಂಡಿತ್ತು. ಆಕೆಯನ್ನು ಕಾರು ಸುಮಾರು 12 ಕಿ.ಮೀ. ವರೆಗೆ ಎಳೆದೊಯ್ದಿತ್ತು . ಕೊನೆಗೆ ಆಕೆಯ ಮೃತದೇಹ ದಿಲ್ಲಿ ಕಾಂಜಾವಾಲಾ ಪ್ರದೇಶದಲ್ಲಿ ಪತ್ತೆಯಾಗಿತ್ತು.

ಮನೆಯಲ್ಲಿ ಆರ್ಥಿಕ ಸಂಕಷ್ಟವಿದ್ದು, ಕುಟುಂಬದ ಪೋಷಣೆಗಾಗಿ ಅಂಜಲಿ ಇವೆಂಟ್ ಮ್ಯಾನೇಜ್ಮೆಂಟ್ ಕಂಪೆನಿಯೊಂದರಲ್ಲಿ ದುಡಿಯುತ್ತಿದ್ದರು. ಆದರೆ ಆಕೆಯ ಆದಾಯ ಸ್ಥಿರವಾಗಿರಲಿಲ್ಲ. ಒಮ್ಮೊಮ್ಮೆ ಆಕೆ ತನ್ನ ತಾಯಿಗೆ 500 ರೂ. ನೀಡಿದರೆ, ಇನ್ನು ಕೆಲವು ದಿನಗಳಲ್ಲಿ 2 ಸಾವಿರ ರೂ. ನೀಡುತ್ತಿದ್ದಳು ಎಂದು ಆಕೆಯ ಕುಟುಂಬಿಕರು ಹಾಗೂ ಸ್ನೇಹಿತರು ‘ದಿ ಪ್ರಿಂಟ್’ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ದುರ್ಘಟನೆಯ ದಿನದಂದು ಅಂಜಲಿ ಹಾಗೂ ಆಕೆಯ ಸ್ನೇಹಿತೆ ನಿಧಿ ಹೊಟೇಲ್ ಒಂದರಲ್ಲಿ ಆಯೋಜಿಸಿದ್ದ ಪಾರ್ಟಿಯಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ಕಂಪೆನಿಯ ಪರವಾಗಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರಿಬ್ಬರಿಗೂ ಕೆಲವು ಪುರುಷರೊಂದಿಗೆ ವಾಗ್ವಾದ ನಡೆದಿತ್ತೆನ್ನಲಾಗಿದೆ. ಆನಂತರ ಆಕೆ ಹೊಟೇಲ್ನಿಂದ ನಿರ್ಗಮಿಸಿದ್ದರು ಎಂದು ಆಕೆಯ ಬಂಧುಗಳು ತಿಳಿಸಿದ್ದಾರೆ.

ದುರಂತ ನಡೆದ ಹಿಂದಿನ ದಿನ, ಡಿಸೆಂಬರ್ 31ರಂದು ಅಂಜಲಿಸಿಂಗ್ ಸಂಜೆ ಆರು ಗಂಟೆ ವೇಳೆಗೆ ತನ್ನ ಮನೆಯಿಂದ ನಿರ್ಗಮಿಸಿದ್ದರು . ಮರುದಿನ ಬೆಳಗ್ಗೆ ತಾನು ಮನೆಗೆ ಹಿಂತಿರುವುದಾಗಿಯೂ ಹೊಸ ವರ್ಷವನ್ನು ಜೊತೆಯಾಗಿ ಆಚರಿಸೋಣವೆಂದು ಆಕೆ ತಾಯಿಗೆ ತಿಳಿಸಿದ್ದರು. ಆದರೆ ಮಾರನೆ ದಿನ ಪೊಲೀಸರು ಕರೆ ಮಾಡಿ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದರು. ಕೂಡಲೇ ನಾವೆಲ್ಲರೂ ಆಸ್ಪತ್ರೆಗೆ ಧಾವಿಸಿದೆವು ಎಂದು ಅಂಜಲಿಯ 14 ವರ್ಷದ ಸೋದರಿ ಅಂಶಿಕಾ ತಿಳಿಸಿದರು. ‘‘ವೋ ಖುಷ್ ಥಿ... ನಯೀ ಜಾಕೆಟ್, ನಯೀ ಶೂಸ್ ಲಿ ಥೆ ( ಆಕೆ ಸಂತಸದಿಂದಿದ್ದಳು.. ಆಕೆ ಹೊಸ ಜಾಕೆಟ್, ಹೊಸ ಶೂಗಳನ್ನು ಖರೀದಿಸಿದ್ದಳು)’’ ಎಂದು ಅಂಶಿಕಾ ತಿಳಿಸಿದ್ದಾರೆ. ಅಂಶಿಕಾಳ ಹೊರತಾಗಿ ಅಂಜಲಿಗೆ ಇನ್ನಿಬ್ಬರು ಸೋದರಿಯರಿದ್ದು (ವಿವಾಹಿತರು) ಹಾಗೂ ಇಬ್ಬರು ಸೋದರರಿದ್ದಾರೆ.

‘‘ತನ್ನ ಸೋದರರು , ಸೋದರಿಯರಿಗಾಗಿ ಅಂಜಲಿ ಹೊಸ ಬಟ್ಟೆಗಳನ್ನು ಖರೀದಿಸಿದ್ದರು. ಮನೆಯಿಂದ ಹೊರಡುವ ಮೊದಲು ಅಡುಗೆ ಮಾಡದಂತೆ ತಾಯಿಗೆ ತಿಳಿಸಿದ್ದಳು. ತಾನೇ ಊಟ ತರುವುದಾಗಿಯೂ ಜೊತೆಯಾಗಿ ಕುಳಿತು ತಿನ್ನೋಣವೆಂಬುದಾಗಿಯೂ ಆಕೆ ಹೇಳಿದ್ದಳು. ಈ ಹಿಂದೆ, ಕುಟುಂಬವು ಸರಿಯಾಗಿ ಊಟ ಮಾಡದ ದಿನಗಳೂ ಇದ್ದವು. ಆದರೆ ಅಂಜಲಿ ಕಷ್ಟಪಟ್ಟು ದುಡಿದು, ಸಂಪಾದಿಸುತ್ತಿದ್ದಳು. ಯಾರೂ ಕೂಡಾ ಹಸಿವಿನಿಂದ ಮಲಗದಂತೆ ನೋಡಿಕೊಳ್ಳಲು ಬಂಧುಗಳಿಂದಲೂ ಸಾಲ ಪಡೆದುಕೊಂಡಿದ್ದಳು ’’ಎಂದು ಆಕೆಯ 67 ವರ್ಷದ ಅಜಿ ಕಾಂತಾ ಸಿಂಗ್ ಹೇಳುತ್ತಾರೆ.

9ನೇ ತರಗತಿಯ ವರೆಗೆ ಕಲಿತಿದ್ದ ಅಂಜಲಿ, ಮನೆಯಲ್ಲಿ ಕಡುಬಡತನವಿದ್ದ ಕಾರಣ ಶಾಲೆಯನ್ನು ತೊರೆದು, ದುಡಿಮೆಗಿಳಿದಳು. ಆಕೆಗೆ ಇಂತಹ ಘೋರ ಸಾವು ಬರಬಾರದಿತ್ತು ಎಂದು ಆಕೆಯ ಚಿಕ್ಕಮ್ಮ ಶೋಕಿಸುತ್ತಾರೆ.

share
Next Story
X